<p><strong>ನವದೆಹಲಿ: </strong>ಕಪ್ಪು ಶಿಲೀಂಧ್ರ ಸೋಂಕಿಗೆ ಚಿಕಿತ್ಸೆ ನೀಡುವಾಗ ಯುವ ರೋಗಿಗಳನ್ನು ಆದ್ಯತೆಯಾಗಿ ಪರಿಗಣಿಸುವಂತೆ ಎಲ್ಲ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಸೋಂಕಿಗೆ ಔಷಧವಾಗಿ ಆ್ಯಂಫೊಟೆರಿಸಿನ್–ಬಿ ಬಳಸಲಾಗುತ್ತಿದೆ</p>.<p>ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ನ (ಐಸಿಎಂಆರ್) ರಾಷ್ಟ್ರೀಯ ಕಾರ್ಯಪಡೆ ಜೊತೆ ಸಮಾಲೋಚನೆ ನಡೆಸಿದ ಬಳಿಕ ಕೇಂದ್ರ ಈ ಸೂಚನೆ ನೀಡಿದೆ. ಆ್ಯಂಫೊಟೆರಿಸಿನ್–ಬಿ ಔಷಧ ಬಳಸಿ ಚಿಕಿತ್ಸೆ ನೀಡಲು ಸರ್ಕಾರವು ಎರಡು ನಿರ್ದಿಷ್ಟ ವರ್ಗದ ರೋಗಿಗಳನ್ನು ಗುರುತಿಸಿದ್ದು, ಈ ಪೈಕಿ ಯುವ ಜನತೆಗೆ ಹೆಚ್ಚು ಗಮನ ನೀಡಲು ತಿಳಿಸಿದೆ.</p>.<p>ಸೋಂಕಿಗೆ ಚಿಕಿತ್ಸೆ ನೀಡಲು ಕಡಿಮೆ ಪ್ರಮಾಣದ ಔಷಧ ಲಭ್ಯವಿರುವುದನ್ನು ಪ್ರಸ್ತಾಪಿಸಿದ್ದ ದೆಹಲಿ ಹೈಕೋರ್ಟ್, ‘ಹಿರಿಯ ನಾಗರಿಕರು ಜೀವನ ನಡೆಸಿದ್ದಾರೆ. ಆದರೆ ದೇಶದ ಭವಿಷ್ಯವಾಗಿರುವ ಯುವಜನರನ್ನು ಈ ಸೋಂಕಿನಿಂದ ರಕ್ಷಿಸಬೇಕಾದ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟಿತ್ತು. ಕೋರ್ಟ್ ಈ ಪ್ರಸ್ತಾಪ ಮಾಡಿದ ಮರುದಿನ ಕೇಂದ್ರ ಈ ನಿರ್ಧಾರ ಪ್ರಕಟಿಸಿದೆ.</p>.<p>ದೇಶದಲ್ಲಿ ಕಪ್ಪು ಶಿಲೀಂಧ್ರ ಸೋಂಕು ಇರುವ 28 ಸಾವಿರ ಪ್ರಕರಣಗಳು ವರದಿಯಾಗಿದೆ. ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಕಪ್ಪು ಶಿಲೀಂಧ್ರ ಸೋಂಕಿಗೆ ಚಿಕಿತ್ಸೆ ನೀಡುವಾಗ ಯುವ ರೋಗಿಗಳನ್ನು ಆದ್ಯತೆಯಾಗಿ ಪರಿಗಣಿಸುವಂತೆ ಎಲ್ಲ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಸೋಂಕಿಗೆ ಔಷಧವಾಗಿ ಆ್ಯಂಫೊಟೆರಿಸಿನ್–ಬಿ ಬಳಸಲಾಗುತ್ತಿದೆ</p>.<p>ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ನ (ಐಸಿಎಂಆರ್) ರಾಷ್ಟ್ರೀಯ ಕಾರ್ಯಪಡೆ ಜೊತೆ ಸಮಾಲೋಚನೆ ನಡೆಸಿದ ಬಳಿಕ ಕೇಂದ್ರ ಈ ಸೂಚನೆ ನೀಡಿದೆ. ಆ್ಯಂಫೊಟೆರಿಸಿನ್–ಬಿ ಔಷಧ ಬಳಸಿ ಚಿಕಿತ್ಸೆ ನೀಡಲು ಸರ್ಕಾರವು ಎರಡು ನಿರ್ದಿಷ್ಟ ವರ್ಗದ ರೋಗಿಗಳನ್ನು ಗುರುತಿಸಿದ್ದು, ಈ ಪೈಕಿ ಯುವ ಜನತೆಗೆ ಹೆಚ್ಚು ಗಮನ ನೀಡಲು ತಿಳಿಸಿದೆ.</p>.<p>ಸೋಂಕಿಗೆ ಚಿಕಿತ್ಸೆ ನೀಡಲು ಕಡಿಮೆ ಪ್ರಮಾಣದ ಔಷಧ ಲಭ್ಯವಿರುವುದನ್ನು ಪ್ರಸ್ತಾಪಿಸಿದ್ದ ದೆಹಲಿ ಹೈಕೋರ್ಟ್, ‘ಹಿರಿಯ ನಾಗರಿಕರು ಜೀವನ ನಡೆಸಿದ್ದಾರೆ. ಆದರೆ ದೇಶದ ಭವಿಷ್ಯವಾಗಿರುವ ಯುವಜನರನ್ನು ಈ ಸೋಂಕಿನಿಂದ ರಕ್ಷಿಸಬೇಕಾದ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟಿತ್ತು. ಕೋರ್ಟ್ ಈ ಪ್ರಸ್ತಾಪ ಮಾಡಿದ ಮರುದಿನ ಕೇಂದ್ರ ಈ ನಿರ್ಧಾರ ಪ್ರಕಟಿಸಿದೆ.</p>.<p>ದೇಶದಲ್ಲಿ ಕಪ್ಪು ಶಿಲೀಂಧ್ರ ಸೋಂಕು ಇರುವ 28 ಸಾವಿರ ಪ್ರಕರಣಗಳು ವರದಿಯಾಗಿದೆ. ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>