‘ಬಂಧಿತ ಪ್ರಯಾಣಿಕನು ಫೋನ್ನಲ್ಲಿ ಮಾತನಾಡುವ ವೇಳೆ– ಅಹಮದಾಬಾದ್ನ ವಿಮಾನ ಇನ್ನೇನು ಹೊರಡಲಿದೆ. ಏನಾದರೂ ಸಮಸ್ಯೆಗಳಿದ್ದರೆ ನನಗೆ ಕರೆ ಮಾಡಿ. ಅಪಹರಣದ ಎಲ್ಲ ಯೋಜನೆಯನ್ನೂ ಸಿದ್ಧಪಡಿಸಲಾಗಿದೆ. ಅದಕ್ಕೆ ಅವಕಾಶವೂ ಇದೆ. ಚಿಂತಿಸಬೇಡಿ– ಎಂದಿದ್ದಾನೆ. ಈ ಸಂಭಾಷಣೆ ಕೇಳಿಸಿಕೊಂಡ ವಿಮಾನದ ಒಬ್ಬ ಸಿಬ್ಬಂದಿ ಹಾಗೂ ಕೆಲವು ಪ್ರಯಾಣಿಕರು ಗಾಬರಿಯಾಗಿದ್ದಾರೆ. ಕೂಡಲೇ ಸಿಬ್ಬಂದಿಯು ಭದ್ರತಾ ಸಿಬ್ಬಂದಿಗೆ ವಿಷಯ ತಿಳಿಸಿ, ಆತನನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆಗೆ ಒಪ್ಪಿಸಿದ್ದಾರೆ’ ಎಂದು ಅಧಿಕಾರಿಗಳು ವಿವರಿಸಿದ್ದಾರೆ.