‘ಅಮರಾವತಿಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ, ಟಿಡಿಪಿ, ಜೆಎಸ್ಪಿ ನಾಯಕರು ಸೇರಿ ಸೀಟು ಹಂಚಿಕೆ ಸೂತ್ರ ಅಂತಿಮಗೊಳಿಸಿದ್ದೇವೆ. ಈ ಪ್ರಮುಖ ಹೆಜ್ಜೆಯೊಂದಿಗೆ ಆಂಧ್ರಪ್ರದೇಶದ ಜನರು ಅಭಿವೃದ್ಧಿಯೊಂದಿಗೆ ಈಗ ಭವ್ಯ ಭವಿಷ್ಯದ ಹಾದಿಯನ್ನು ಎದುರುನೋಡಬಹುದಾಗಿದೆ. ಈ ಮೈತ್ರಿಗೆ ಜನತೆ ಆಶೀರ್ವದಿಸಬೇಕು ಎಂದು ಕೋರುತ್ತೇನೆ’ ಎಂದು ಚಂದ್ರಬಾಬುನಾಯ್ಡು ‘ಎಕ್ಸ್’ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.