ಪಣಜಿ: ’ಗೋವಾಕ್ಕೆ ಸ್ವಾತಂತ್ರ್ಯ ಬಂದು 60 ವರ್ಷ ಕಳೆದಿದ್ದು, ಇಲ್ಲಿ ಈಗಲೂ ಉಳಿದಿರುವ ಪೋರ್ಚುಗೀಸರ ಗುರುತುಗಳನ್ನು ಅಳಿಸಿಹಾಕಿ, ಹೊಸತನ್ನು ಆರಂಭಿಸಬೇಕಿದೆ‘ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅಭಿಪ್ರಾಯಪಟ್ಟಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕದ 350ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.