ಸುಧೀಂದ್ರ ಕುಲಕರ್ಣಿ ತಮ್ಮ ಲೇಖನವನ್ನು ಸಮರ್ಥಿಸಿಕೊಂಡಿದ್ದಾರೆ. ‘ಸಂವಿಧಾನ ರೂಪಿಸುವಲ್ಲಿ ಅಂಬೇಡ್ಕರ್ ಅವರಿಗಿಂತ ನೆಹರೂ ಪಾತ್ರ ಹಿರಿದು’ ಎಂದಿರುವ ಅವರು, ‘ಈ ಬಗ್ಗೆ ಸಂಶೋಧನೆ ಮಾಡಿರುವೆ. ಬಿ.ಆರ್. ಅಂಬೇಡ್ಕರ್ ಅವರನ್ನು ಸಂವಿಧಾನದ ಕರ್ತೃ ಎಂದು ಭಾವಿಸಲಾಗಿದೆ. ಆದರೆ, ಇತಿಹಾಸದ ವಾಸ್ತವಾಂಶಗಳನ್ನು ಪರಿಶೀಲಿಸಿದರೆ, ಅದು ಸುಳ್ಳು ಎನ್ನುವುದು ತಿಳಿಯುತ್ತದೆ’ ಎಂದಿದ್ದಾರೆ.