<p><strong>ಹೈದರಾಬಾದ್:</strong> ಹವಾಮಾನ ಬದಲಾವಣೆ ಹೋರಾಟದ ಕುರಿತಾದ ನಿಲುವನ್ನು ಬದಲಾಯಿಸುತ್ತೇನೆ, ಪರಿಸರವನ್ನು 'ಉಳಿಸುವ' ನಿಲುವಿನಿಂದ, ಪರಿಸದ ಜೊತೆ ಮನುಷ್ಯರು 'ಸಹಬಾಳ್ವೆ'ಯಿಂದ ಬದುಕುವಂತಾಗಬೇಕು ಎಂದು ನೇಪಾಳಿ ರೂಪದರ್ಶಿ ಶ್ರೀಚ್ಛ ಪ್ರಧಾನ್ ಹೇಳಿದ್ದಾರೆ. </p><p>ಹೈದರಾಬಾದ್ನಲ್ಲಿ ಜರುಗುತ್ತಿರುವ 72ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ನೇಪಾಳ ದೇಶದ ಪ್ರತಿನಿಧಿಯಾಗಿ ಅವರು ಭಾಗವಹಿಸಿದ್ದಾರೆ. </p><p>ನಾನು ನನ್ನ ಜೀವನ ಪೂರ್ತಿ, ಪರಿಸರವಾದಿಯಾಗಿರಲು ಇಷ್ಟಪಡುತ್ತೇನೆ. ನಾನು ಚಿಕ್ಕವಳಿದ್ದಾಗಿನಿಂದ ಪರಿಸರ ರಕ್ಷಣೆಯಲ್ಲಿ ಆಸಕ್ತಿಯಿತ್ತು. ನಾನು ತೊಡುವ ಬಟ್ಟೆ ಹಾಗೂ ಮೇಕಪ್ ಕೂಡ ಪರಿಸರ ಸ್ನೇಹಿಯಾಗಿದೆ ಎಂದರು. </p><p>ನಾನು ಪರಿಸರವನ್ನು ಉಳಿಸಲು ಹೊರಟಿಲ್ಲ. ಬದಲಾಗಿ ಪರಿಸರ ಜೊತೆಗಿರಲು ಪ್ರಯತ್ನ ಮಾಡಬೇಕು ಎಂದು ಆನಂತರ ಅರಿವಾಗಿದೆ ಎಂದರು. </p><p>ವಿಶ್ವ ಸುಂದರಿ ಸ್ಪರ್ಧೆಯ ವೇದಿಕೆಯನ್ನು, ಪರಿಸರ ರಕ್ಷಣೆಗಾಗಿ ಕೈಗೊಂಡಿರುವ 'ಬ್ಯೂಟಿ ವಿಥ್ ಎ ಪರ್ಪಸ್'(ಬಿಡಬ್ಲೂಎಪಿ) ಯೋಜನೆಯ ಪ್ರಚಾರಕ್ಕಾಗಿ ಬಳಸಿಕೊಳ್ಳುವುದಾಗಿ ಹೇಳಿದರು. </p><p>ನನ್ನ ಹೋರಾಟವು ತಾಪಮಾನವನ್ನು ಸರಿಯಾಗಿಡುವುದಕ್ಕೆ ಸೀಮಿತವಾಗಿಲ್ಲ. ಬದಲಾಗಿ, ಭೂಮಿ, ಜಲ, ಅಗ್ನಿ, ವಾಯು ಮುಂತಾದ ಪಂಚ ಭೂತ ಅಂಶಗಳನ್ನು ಉಳಿಸಿಕೊಂಡು ಹೋಗುವುದಾಗಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್:</strong> ಹವಾಮಾನ ಬದಲಾವಣೆ ಹೋರಾಟದ ಕುರಿತಾದ ನಿಲುವನ್ನು ಬದಲಾಯಿಸುತ್ತೇನೆ, ಪರಿಸರವನ್ನು 'ಉಳಿಸುವ' ನಿಲುವಿನಿಂದ, ಪರಿಸದ ಜೊತೆ ಮನುಷ್ಯರು 'ಸಹಬಾಳ್ವೆ'ಯಿಂದ ಬದುಕುವಂತಾಗಬೇಕು ಎಂದು ನೇಪಾಳಿ ರೂಪದರ್ಶಿ ಶ್ರೀಚ್ಛ ಪ್ರಧಾನ್ ಹೇಳಿದ್ದಾರೆ. </p><p>ಹೈದರಾಬಾದ್ನಲ್ಲಿ ಜರುಗುತ್ತಿರುವ 72ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ನೇಪಾಳ ದೇಶದ ಪ್ರತಿನಿಧಿಯಾಗಿ ಅವರು ಭಾಗವಹಿಸಿದ್ದಾರೆ. </p><p>ನಾನು ನನ್ನ ಜೀವನ ಪೂರ್ತಿ, ಪರಿಸರವಾದಿಯಾಗಿರಲು ಇಷ್ಟಪಡುತ್ತೇನೆ. ನಾನು ಚಿಕ್ಕವಳಿದ್ದಾಗಿನಿಂದ ಪರಿಸರ ರಕ್ಷಣೆಯಲ್ಲಿ ಆಸಕ್ತಿಯಿತ್ತು. ನಾನು ತೊಡುವ ಬಟ್ಟೆ ಹಾಗೂ ಮೇಕಪ್ ಕೂಡ ಪರಿಸರ ಸ್ನೇಹಿಯಾಗಿದೆ ಎಂದರು. </p><p>ನಾನು ಪರಿಸರವನ್ನು ಉಳಿಸಲು ಹೊರಟಿಲ್ಲ. ಬದಲಾಗಿ ಪರಿಸರ ಜೊತೆಗಿರಲು ಪ್ರಯತ್ನ ಮಾಡಬೇಕು ಎಂದು ಆನಂತರ ಅರಿವಾಗಿದೆ ಎಂದರು. </p><p>ವಿಶ್ವ ಸುಂದರಿ ಸ್ಪರ್ಧೆಯ ವೇದಿಕೆಯನ್ನು, ಪರಿಸರ ರಕ್ಷಣೆಗಾಗಿ ಕೈಗೊಂಡಿರುವ 'ಬ್ಯೂಟಿ ವಿಥ್ ಎ ಪರ್ಪಸ್'(ಬಿಡಬ್ಲೂಎಪಿ) ಯೋಜನೆಯ ಪ್ರಚಾರಕ್ಕಾಗಿ ಬಳಸಿಕೊಳ್ಳುವುದಾಗಿ ಹೇಳಿದರು. </p><p>ನನ್ನ ಹೋರಾಟವು ತಾಪಮಾನವನ್ನು ಸರಿಯಾಗಿಡುವುದಕ್ಕೆ ಸೀಮಿತವಾಗಿಲ್ಲ. ಬದಲಾಗಿ, ಭೂಮಿ, ಜಲ, ಅಗ್ನಿ, ವಾಯು ಮುಂತಾದ ಪಂಚ ಭೂತ ಅಂಶಗಳನ್ನು ಉಳಿಸಿಕೊಂಡು ಹೋಗುವುದಾಗಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>