ಶ್ರೀನಗರದ ಕಾಂತಬಾಘ್ನ ಕ್ರಾಲ್ಪೋರಾ ಪ್ರದೇಶದಲ್ಲಿರುವ ಮಾನವ ಹಕ್ಕು ಕಾರ್ಯಕರ್ತ, ವಕೀಲ ಪರ್ವೇಜ್ ಇಮ್ರೋಜ್ ಅವರ ನಿವಾಸ, ಶೋಫಿಯಾನ್ ಜಿಲ್ಲೆಯ ವಾಚಿ ಪ್ರದೇಶದಲ್ಲಿರುವ ಖಾಸಗಿ ಶಾಲಾ ಶಿಕ್ಷಕ ಹಾಗೂ ನಿಷೇಧಿತ ಜಮಾತೆ–ಇ–ಇಸ್ಲಾಮಿ (ಜೆಇಐ) ಕಾರ್ಯಕರ್ತ ಮೊಹಮ್ಮದ್ ಶಫಿ ಶಾ, ಖಾಸಗಿ ಸಂಸ್ಥೆಯ ನೌಕರ ಶಾಹೀದ್ ಅಹಮದ್ ಶಾ, ಸರ್ಕಾರಿ ನೌಕರ ರಿಯಾಜ್ ಅಹಮದ್ ಮಿರ್, ಮಸೀದಿಗಳ ನಿರ್ವಹಣಾ ಸಮಿತಿ(ಅವ್ಕಾಫ್)ಯೊಂದರ ಅಧ್ಯಕ್ಷ ಮೊಹಮ್ಮದ್ ಶಬಾನ್ ಕುಮಾರ್, ಬಡಗಿ ಮೊಹಮ್ಮದ್ ಲತೀಫ್ ಶಾ ಅವರ ನಿವಾಸಗಳ ಶೋಧ ಕಾರ್ಯ ನಡೆಸಿದೆ.