<p><strong>ನವದೆಹಲಿ</strong>: ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಪದಚ್ಯುತಿಗೊಳಿಸುವ ಕುರಿತು ವಿರೋಧ ಪಕ್ಷಗಳು ನೋಟಿಸ್ ನೀಡಿವೆ. ಆದರೆ, ಸಂಸದೀಯ ಇತಿಹಾಸ ಅವಲೋಕಿಸಿದಾಗ, ಈ ಹಿಂದೆ ಇಂತಹ ಯಾವ ಪ್ರಯತ್ನಗಳು ಯಶಸ್ವಿಯಾದ ನಿದರ್ಶನಗಳು ಇಲ್ಲ ಎಂಬುದು ಗೊತ್ತಾಗುತ್ತದೆ.</p>.<p>ಇಂತಹ ನೋಟಿಸ್ಗೆ ಕನಿಷ್ಠ ಇಬ್ಬರು ಲೋಕಸಭಾ ಸಂಸದರು ಸಹಿ ಹಾಕುವುದು ಕಡ್ಡಾಯ. ಚರ್ಚೆ ಬಳಿಕ, ಸರಳ ಬಹುಮತದೊಂದಿಗೆ ಸದನ ಠರಾವು ಅನುಮೋದಿಸುವ ಮೂಲಕ ಸ್ಪೀಕರ್ ಅವರನ್ನು ಪದಚ್ಯುತಗೊಳಿಸುವುದಕ್ಕೆ ಸಂವಿಧಾನದ 94(ಸಿ) ವಿಧಿ ಅವಕಾಶ ನೀಡುತ್ತದೆ.</p>.<p>‘ಸದನದ ಒಟ್ಟು ಸದಸ್ಯರ ಸಂಖ್ಯೆಯನ್ನು ಪರಿಗಣಿಸಲಾಗುತ್ತದೆ. ಸದನದಲ್ಲಿ ಹಾಜರಿರುವ ಹಾಗೂ ಮತ ಚಲಾಯಿಸುವ ಸದಸ್ಯರ ಸಂಖ್ಯೆಯನ್ನು ಅಲ್ಲ. ಇದು ಸಾಮಾನ್ಯ ಪ್ರಕ್ರಿಯೆ’ ಎಂದು ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಪಿ.ಡಿ.ಟಿ.ಆಚಾರಿ ಹೇಳಿದ್ದಾರೆ.</p>.<p>‘ನೋಟಿಸ್ ಅನ್ನು ಕೂಲಂಕಷವಾಗಿ ಪರಿಶಿಲಿಸಲಾಗುತ್ತದೆ ಹಾಗೂ ಅದರಲ್ಲಿ ನಿರ್ದಿಷ್ಟವಾದ ಆರೋಪಗಳನ್ನು ಉಲ್ಲೇಖಿಸಲಾಗಿದೆಯೇ ಎಂಬುದು ಗಮನಿಸಲಾಗುತ್ತದೆ. ನಿರ್ದಿಷ್ಟ ಆರೋಪಗಳಿದ್ದಾಗ ಮಾತ್ರ ಸ್ಪೀಕರ್ ಅದಕ್ಕೆ ಉತ್ತರಿಸಲು ಸಾಧ್ಯ’ ಎಂದು ಅವರು, ‘ನಿರ್ಣಯವು ಅವಹೇಳನಕಾರಿ ಭಾಷೆ ಅಥವಾ ಅಂಥ ವಿಷಯವಸ್ತು ಒಳಗೊಂಡಿರಬಾರದು’ ಎಂದರು.</p>.<p>ತಮ್ಮ ನಿಲುವನ್ನು ಸಮರ್ಥನೆ ಮಾಡಿಕೊಳ್ಳುವುದಕ್ಕೆ ಸ್ಪೀಕರ್ ಅವರಿಗೆ ಸಂವಿಧಾನದ 96ನೇ ವಿಧಿಯು ಅವಕಾಶ ನೀಡುತ್ತದೆ ಎಂದೂ ಆಚಾರಿ ಹೇಳಿದರು.</p>.<p><strong>ನೆಹರೂ ಕಾರ್ಯವೈಖರಿ ನೆನೆದ ಕಾಂಗ್ರೆಸ್</strong></p><p> ಲೋಕಸಭಾ ಸ್ಪೀಕರ್ ಅವರನ್ನು ಪದಚ್ಯುತಗೊಳಿಸುವುದು ಸೇರಿ ಸಂಸದೀಯ ನಡವಳಿಕೆಗೆ ಸಂಬಂಧಿಸಿ ಮಾಜಿ ಪ್ರಧಾನಿ ಜವಾಹರ ಲಾಲ್ ನೆಹರೂ ಅವರು ನಡೆದುಕೊಳ್ಳುತ್ತಿದ್ದ ರೀತಿಯನ್ನು ಕಾಂಗ್ರೆಸ್ ಪಕ್ಷ ಮಂಗಳವಾರ ಸ್ಮರಿಸಿದೆ.</p><p> ‘1954ರಲ್ಲಿ ಆಗಿನ ಸ್ಪೀಕರ್ ಪದಚ್ಯುತಿ ಕುರಿತ ನೋಟಿಸ್ಗೆ ಸಂಬಂಧಿಸಿ ವಿಸ್ತೃತವಾಗಿ ಚರ್ಚೆ ನಡೆಸಲು ವಿಪಕ್ಷಗಳಿಗೆ ಹೆಚ್ಚು ಸಮಯ ನೀಡುವಂತೆ ನೆಹರೂ ಹೇಳಿದ್ದರು’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಪದಚ್ಯುತಿಗೊಳಿಸುವ ಕುರಿತು ವಿರೋಧ ಪಕ್ಷಗಳು ನೋಟಿಸ್ ನೀಡಿವೆ. ಆದರೆ, ಸಂಸದೀಯ ಇತಿಹಾಸ ಅವಲೋಕಿಸಿದಾಗ, ಈ ಹಿಂದೆ ಇಂತಹ ಯಾವ ಪ್ರಯತ್ನಗಳು ಯಶಸ್ವಿಯಾದ ನಿದರ್ಶನಗಳು ಇಲ್ಲ ಎಂಬುದು ಗೊತ್ತಾಗುತ್ತದೆ.</p>.<p>ಇಂತಹ ನೋಟಿಸ್ಗೆ ಕನಿಷ್ಠ ಇಬ್ಬರು ಲೋಕಸಭಾ ಸಂಸದರು ಸಹಿ ಹಾಕುವುದು ಕಡ್ಡಾಯ. ಚರ್ಚೆ ಬಳಿಕ, ಸರಳ ಬಹುಮತದೊಂದಿಗೆ ಸದನ ಠರಾವು ಅನುಮೋದಿಸುವ ಮೂಲಕ ಸ್ಪೀಕರ್ ಅವರನ್ನು ಪದಚ್ಯುತಗೊಳಿಸುವುದಕ್ಕೆ ಸಂವಿಧಾನದ 94(ಸಿ) ವಿಧಿ ಅವಕಾಶ ನೀಡುತ್ತದೆ.</p>.<p>‘ಸದನದ ಒಟ್ಟು ಸದಸ್ಯರ ಸಂಖ್ಯೆಯನ್ನು ಪರಿಗಣಿಸಲಾಗುತ್ತದೆ. ಸದನದಲ್ಲಿ ಹಾಜರಿರುವ ಹಾಗೂ ಮತ ಚಲಾಯಿಸುವ ಸದಸ್ಯರ ಸಂಖ್ಯೆಯನ್ನು ಅಲ್ಲ. ಇದು ಸಾಮಾನ್ಯ ಪ್ರಕ್ರಿಯೆ’ ಎಂದು ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಪಿ.ಡಿ.ಟಿ.ಆಚಾರಿ ಹೇಳಿದ್ದಾರೆ.</p>.<p>‘ನೋಟಿಸ್ ಅನ್ನು ಕೂಲಂಕಷವಾಗಿ ಪರಿಶಿಲಿಸಲಾಗುತ್ತದೆ ಹಾಗೂ ಅದರಲ್ಲಿ ನಿರ್ದಿಷ್ಟವಾದ ಆರೋಪಗಳನ್ನು ಉಲ್ಲೇಖಿಸಲಾಗಿದೆಯೇ ಎಂಬುದು ಗಮನಿಸಲಾಗುತ್ತದೆ. ನಿರ್ದಿಷ್ಟ ಆರೋಪಗಳಿದ್ದಾಗ ಮಾತ್ರ ಸ್ಪೀಕರ್ ಅದಕ್ಕೆ ಉತ್ತರಿಸಲು ಸಾಧ್ಯ’ ಎಂದು ಅವರು, ‘ನಿರ್ಣಯವು ಅವಹೇಳನಕಾರಿ ಭಾಷೆ ಅಥವಾ ಅಂಥ ವಿಷಯವಸ್ತು ಒಳಗೊಂಡಿರಬಾರದು’ ಎಂದರು.</p>.<p>ತಮ್ಮ ನಿಲುವನ್ನು ಸಮರ್ಥನೆ ಮಾಡಿಕೊಳ್ಳುವುದಕ್ಕೆ ಸ್ಪೀಕರ್ ಅವರಿಗೆ ಸಂವಿಧಾನದ 96ನೇ ವಿಧಿಯು ಅವಕಾಶ ನೀಡುತ್ತದೆ ಎಂದೂ ಆಚಾರಿ ಹೇಳಿದರು.</p>.<p><strong>ನೆಹರೂ ಕಾರ್ಯವೈಖರಿ ನೆನೆದ ಕಾಂಗ್ರೆಸ್</strong></p><p> ಲೋಕಸಭಾ ಸ್ಪೀಕರ್ ಅವರನ್ನು ಪದಚ್ಯುತಗೊಳಿಸುವುದು ಸೇರಿ ಸಂಸದೀಯ ನಡವಳಿಕೆಗೆ ಸಂಬಂಧಿಸಿ ಮಾಜಿ ಪ್ರಧಾನಿ ಜವಾಹರ ಲಾಲ್ ನೆಹರೂ ಅವರು ನಡೆದುಕೊಳ್ಳುತ್ತಿದ್ದ ರೀತಿಯನ್ನು ಕಾಂಗ್ರೆಸ್ ಪಕ್ಷ ಮಂಗಳವಾರ ಸ್ಮರಿಸಿದೆ.</p><p> ‘1954ರಲ್ಲಿ ಆಗಿನ ಸ್ಪೀಕರ್ ಪದಚ್ಯುತಿ ಕುರಿತ ನೋಟಿಸ್ಗೆ ಸಂಬಂಧಿಸಿ ವಿಸ್ತೃತವಾಗಿ ಚರ್ಚೆ ನಡೆಸಲು ವಿಪಕ್ಷಗಳಿಗೆ ಹೆಚ್ಚು ಸಮಯ ನೀಡುವಂತೆ ನೆಹರೂ ಹೇಳಿದ್ದರು’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>