ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಗೌರಿ ಲಂಕೇಶ್ ನಿಧನದ ನಂತರ ನಾನೂ ಸಹ ಕೆಲವರ ಹಿಟ್ಲಿಸ್ಟ್ನಲ್ಲಿದ್ದೇನೆ ಎಂಬುದು ಗೊತ್ತಾಯಿತು. ಆದರೆ, ಲೇಖಕನಾಗಿ ನನ್ನ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವುದರಿಂದ ರಕ್ಷಣೆಯ ಅಗತ್ಯವಿಲ್ಲ. ನಾಲ್ಕು ವರ್ಷಗಳಿಂದ ನನಗೆ ಇನ್ನೂ ಗುಂಡು ಹಾರಿಸಲಾಗಿಲ್ಲ. ನನ್ನ ಆಲೋಚನೆಗಳನ್ನುಗುಂಡಿನಿಂದ ಕೊನೆಗಾಣಿಸಲು ಸಾಧ್ಯವಿಲ್ಲ. ನಾನು ನಿರ್ಭೀತಿಯಿಂದ ಮಾತನಾಡುತ್ತೇನೆ’ ಎಂದು ತಿಳಿಸಿದರು.