<p><strong>ಪುಣೆ</strong>: ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ಇಂಡಿಗೊ ವಿಮಾನಯಾನ ಸಂಸ್ಥೆ ಇದೀಗ ಮತ್ತೆ ಸುದ್ದಿಯ ಕೇಂದ್ರವಾಗಿದೆ. ಸಂಸ್ಥೆಗೆ ಸೇರಿದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರಿಗೆ ಕುಶನ್ ಇಲ್ಲದ ಸೀಟನ್ನು ನೀಡಿದ್ದು, ಸಂಸ್ಥೆಯ ನಿರ್ಲಕ್ಷ್ಯದ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ.</p><p>ಸುಬ್ರತ್ ಪಟ್ನಾಯಕ್ ಮತ್ತು ಅವರ ಪತ್ನಿ ಸಾಗರಿಕ ಪುಣೆಯಿಂದ ನಾಗಪುರಕ್ಕೆ ಪ್ರಯಾಣಿಸಲು 6ಇ 6798 ವಿಮಾನದಲ್ಲಿ ಟಿಕೆಟ್ ಕಾಯ್ದಿರಿಸಿದ್ದರು. ಭಾನುವಾರ ಪುಣೆಯಲ್ಲಿ ವಿಮಾನವೇರಿದ್ದ ದಂಪತಿ ಕುಶನ್ ಇಲ್ಲದ ಸೀಟು ಕಂಡು ಆಘಾತಗೊಂಡಿದ್ದರು.</p><p>‘ಕುಶನ್ ಇಲ್ಲದ ಸೀಟ್ನಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಸಿಬ್ಬಂದಿಗೆ ತಿಳಿಸಿದರು. ಕೆಳಗೆ ಬಿದ್ದಿರಬಹುದು ನೋಡಿ ಎಂದು ಹೇಳಿದ್ದಾರೆ. ಎಲ್ಲ ಕಡೆ ಹುಡುಕಿದ ಮೇಲೆಯೂ ಕುಶನ್ ಸಿಕ್ಕಿರಲಿಲ್ಲ. ಮತ್ತೆ ಸಿಬ್ಬಂದಿಗೆ ಮಾಹಿತಿ ನೀಡಿದ್ದೇವೆ. ಆ ವೇಳೆಯೂ ಸಿಬ್ಬಂದಿ ಸರಿಯಾಗಿ ಪ್ರತಿಕ್ರಿಯಿಸಿಲ್ಲ’ ಎಂದು ಸುಬ್ರತ್ ಪಟ್ನಾಯಕ್ ದೂರಿದ್ದಾರೆ.</p><p>ಈ ಕುರಿತಂತೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸುಬ್ರತ್ ಪಟ್ನಾಯಕ್, ಕರುಣಾಜನಕ ಎಂದು ಬರೆದುಕೊಂಡಿದ್ದಾರೆ.</p><p>ಇಂಡಿಗೊ ಸಂಸ್ಥೆಯ ಅಸಮರ್ಪಕ ಸೇವೆ ಮತ್ತು ನಿರ್ಲಕ್ಷ್ಯ ಧೋರಣೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪುಣೆ</strong>: ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ಇಂಡಿಗೊ ವಿಮಾನಯಾನ ಸಂಸ್ಥೆ ಇದೀಗ ಮತ್ತೆ ಸುದ್ದಿಯ ಕೇಂದ್ರವಾಗಿದೆ. ಸಂಸ್ಥೆಗೆ ಸೇರಿದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರಿಗೆ ಕುಶನ್ ಇಲ್ಲದ ಸೀಟನ್ನು ನೀಡಿದ್ದು, ಸಂಸ್ಥೆಯ ನಿರ್ಲಕ್ಷ್ಯದ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ.</p><p>ಸುಬ್ರತ್ ಪಟ್ನಾಯಕ್ ಮತ್ತು ಅವರ ಪತ್ನಿ ಸಾಗರಿಕ ಪುಣೆಯಿಂದ ನಾಗಪುರಕ್ಕೆ ಪ್ರಯಾಣಿಸಲು 6ಇ 6798 ವಿಮಾನದಲ್ಲಿ ಟಿಕೆಟ್ ಕಾಯ್ದಿರಿಸಿದ್ದರು. ಭಾನುವಾರ ಪುಣೆಯಲ್ಲಿ ವಿಮಾನವೇರಿದ್ದ ದಂಪತಿ ಕುಶನ್ ಇಲ್ಲದ ಸೀಟು ಕಂಡು ಆಘಾತಗೊಂಡಿದ್ದರು.</p><p>‘ಕುಶನ್ ಇಲ್ಲದ ಸೀಟ್ನಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಸಿಬ್ಬಂದಿಗೆ ತಿಳಿಸಿದರು. ಕೆಳಗೆ ಬಿದ್ದಿರಬಹುದು ನೋಡಿ ಎಂದು ಹೇಳಿದ್ದಾರೆ. ಎಲ್ಲ ಕಡೆ ಹುಡುಕಿದ ಮೇಲೆಯೂ ಕುಶನ್ ಸಿಕ್ಕಿರಲಿಲ್ಲ. ಮತ್ತೆ ಸಿಬ್ಬಂದಿಗೆ ಮಾಹಿತಿ ನೀಡಿದ್ದೇವೆ. ಆ ವೇಳೆಯೂ ಸಿಬ್ಬಂದಿ ಸರಿಯಾಗಿ ಪ್ರತಿಕ್ರಿಯಿಸಿಲ್ಲ’ ಎಂದು ಸುಬ್ರತ್ ಪಟ್ನಾಯಕ್ ದೂರಿದ್ದಾರೆ.</p><p>ಈ ಕುರಿತಂತೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸುಬ್ರತ್ ಪಟ್ನಾಯಕ್, ಕರುಣಾಜನಕ ಎಂದು ಬರೆದುಕೊಂಡಿದ್ದಾರೆ.</p><p>ಇಂಡಿಗೊ ಸಂಸ್ಥೆಯ ಅಸಮರ್ಪಕ ಸೇವೆ ಮತ್ತು ನಿರ್ಲಕ್ಷ್ಯ ಧೋರಣೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>