ರಾಜಸ್ಥಾನದ ಬಾರ್ಮೆರ್, ಜೋಧಪುರ, ಉದಯಪುರ, ಸಿರೊಹಿ, ಜಾಲೋರ್ನಲ್ಲಿ ಮಂಗಳವಾರ ಉಷ್ಣಾಂಶ ಇಳಿಕೆಯಾಗಿದೆ. ಅರಬ್ಬಿ ಸಮುದ್ರದಿಂದ ತೇವಾಂಶ ಗಾಳಿಯಿಂದಾಗಿ ಉಷ್ಣಾಂಶ ಇಳಿಕೆಯಾಗಿದೆ.
ತಾಪಮಾನ ಇಳಿಕೆ ಉತ್ತರಕ್ಕೆ ಮತ್ತಷ್ಟು ವಿಸ್ತರಿಸಲಿದ್ದು, ಮೇ 30ರ ಬಳಿಕ ಬಿಸಿ ಗಾಳಿಯು ನಿಯಂತ್ರಣಕ್ಕೆ ಬರಲಿದೆ. ಬಂಗಾಳ ಕೊಲ್ಲಿಯಿಂದ ಬುಧವಾರದಿಂದ ಬೀಸುವ ತೇವಾಂಶಯುಕ್ತ ಗಾಳಿಯಿಂದಾಗಿ ಉತ್ತರ ಪ್ರದೇಶದಲ್ಲಿ ತಾಪಮಾನ ತಗ್ಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.