<p><strong>ಅಯೋಧ್ಯ:</strong>‘ರಾಮ ಮಂದಿರ ನಿರ್ಮಾಣ ಟ್ರಸ್ಟ್ಗೆ ತನ್ನನ್ನು ಸೇರಿಸಿಕೊಂಡಿಲ್ಲ’ ಎಂದು ರಾಮಜನ್ಮ ಭೂಮಿ ನ್ಯಾಸ್ (ಆರ್ಜೆಎನ್) ಮುಖ್ಯಸ್ಥ ಮಹಾಂತ ನೃತ್ಯ ಗೋಪಾಲ್ ದಾಸ್ ಬೇಸರ ವ್ಯಕ್ತಪಡಿಸಿದ್ದಾರೆ.</p>.<p>ಬಿಜೆಪಿಯ ಹೈಕಮಾಂಡ್ ಗುರುವಾರ ಲಖನೌನ ಪ್ರಮುಖ ಮುಖಂಡರಾದ ಶಾಸಕ ವೇದ್ ಪ್ರಕಾಶ್ ಗುಪ್ತಾ, ಮೇಯರ್ ರಿಷಿಕೇಶ್ ಉಪಾಧ್ಯಾಯ ಮತ್ತು ಅಯೋಧ್ಯೆ ಮಹಾನಗರ ಅಧ್ಯಕ್ಷೆ ಅಭಿಷೇಕ್ ಮಿಶ್ರ ಅವರನ್ನು ಇಲ್ಲಿನ ಮಣಿ ರಾಮ್ ದಾಸ್ ದೇವಸ್ಥಾನಕ್ಕೆ ತುರ್ತಾಗಿ ತೆರಳಲು ಸೂಚಿಸಿದ್ದರು.</p>.<p>ಬಂದ ಅಧಿಕಾರಿಗಳನ್ನು ದೇವಸ್ಥಾನದ ಒಳಗೆ ಬರುವುದಕ್ಕೆ ತಡೆಯೊಡ್ಡಿದ ಮಹಾಂತ್, ವಾಪಾಸ್ ಹೋಗುವಂತೆ ಒತ್ತಾಯಿಸಿದರು. ನಂತರ ಸ್ವಾಮೀಜಿಗಳ ತುರ್ತು ಸಭೆ ಮತ್ತು ಸುದ್ದಿಗೋಷ್ಠಿಗೆ ಕರೆ ನೀಡಿದ್ದರು ಎಂದು ಅಭಿಷೇಕ್ ಮಿಶ್ರ ತಿಳಿಸಿದರು.</p>.<p>ಗೃಹ ಸಚಿವಾಲಯದಿಂದ ಫೋನ್ ಕರೆ ಬಂದ ನಂತರ, ಎರಡೂ ಸಭೆಗಳನ್ನು ರದ್ದುಪಡಿಸಲಾಯಿತು ಎಂದು ನೃತ್ಯ ಗೋಪಾಲ್ ದಾಸ್ ಅವರ ಉತ್ತರಾಧಿಕಾರಿ ಕಮಲ್ ನಯನ್ ದಾಸ್ ತಿಳಿಸಿದರು.</p>.<p>‘ಮಹಾಂತ್, ಅಮಿತ್ ಶಾ ರೊಂದಿಗೆ ಮಾತುಕತೆ ನಡೆಸಲಿ ಎಂದು ಫೋನ್ ಮುಖಾಂತರ ಸಂಭಾಷಣೆಗೆ ಅವಕಾಶ ಕಲ್ಪಿಸಿದೆವು. ಟ್ರಸ್ಟ್ನಲ್ಲಿ ಇನ್ನೂ ಮೂರು ಸ್ಥಾನಗಳು ಖಾಲಿ ಉಳಿದಿದ್ದು, ಮಹಾಂತ್ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಎಂಬ ಭರವಸೆ ಇದೆ’ ಎಂದು ಶಾಸಕ ಗುಪ್ತಾ ಹೇಳಿದರು.</p>.<p>‘ರಾಮ ಮಂದಿರ ಹೋರಾಟದಲ್ಲಿ ತಮ್ಮ ಜೀವನವನ್ನೇ ಸವೆಸಿದ್ದವರನ್ನುಈಗ ಕಡೆಗಣಿಸಲಾಗುತ್ತಿದೆ’ ಎಂದು ಮಹಾಂತ್ ಬೇಸರ ಹೊರಹಾಕಿದ್ದರು. ‘ಟ್ರಸ್ಟ್ ರಚನೆಯ ವಿಷಯದಲ್ಲಿ ವೈಷ್ಣವ ಸಮಾಜವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಆದರೆ, ಇದನ್ನು ಅವರು ಒಪ್ಪಿಕೊಳ್ಳುತ್ತಿಲ್ಲ’ ಎಂದು ಕಮಲ್ ನಯನ್ ದಾಸ್ ಆಕ್ರೋಶ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಯೋಧ್ಯ:</strong>‘ರಾಮ ಮಂದಿರ ನಿರ್ಮಾಣ ಟ್ರಸ್ಟ್ಗೆ ತನ್ನನ್ನು ಸೇರಿಸಿಕೊಂಡಿಲ್ಲ’ ಎಂದು ರಾಮಜನ್ಮ ಭೂಮಿ ನ್ಯಾಸ್ (ಆರ್ಜೆಎನ್) ಮುಖ್ಯಸ್ಥ ಮಹಾಂತ ನೃತ್ಯ ಗೋಪಾಲ್ ದಾಸ್ ಬೇಸರ ವ್ಯಕ್ತಪಡಿಸಿದ್ದಾರೆ.</p>.<p>ಬಿಜೆಪಿಯ ಹೈಕಮಾಂಡ್ ಗುರುವಾರ ಲಖನೌನ ಪ್ರಮುಖ ಮುಖಂಡರಾದ ಶಾಸಕ ವೇದ್ ಪ್ರಕಾಶ್ ಗುಪ್ತಾ, ಮೇಯರ್ ರಿಷಿಕೇಶ್ ಉಪಾಧ್ಯಾಯ ಮತ್ತು ಅಯೋಧ್ಯೆ ಮಹಾನಗರ ಅಧ್ಯಕ್ಷೆ ಅಭಿಷೇಕ್ ಮಿಶ್ರ ಅವರನ್ನು ಇಲ್ಲಿನ ಮಣಿ ರಾಮ್ ದಾಸ್ ದೇವಸ್ಥಾನಕ್ಕೆ ತುರ್ತಾಗಿ ತೆರಳಲು ಸೂಚಿಸಿದ್ದರು.</p>.<p>ಬಂದ ಅಧಿಕಾರಿಗಳನ್ನು ದೇವಸ್ಥಾನದ ಒಳಗೆ ಬರುವುದಕ್ಕೆ ತಡೆಯೊಡ್ಡಿದ ಮಹಾಂತ್, ವಾಪಾಸ್ ಹೋಗುವಂತೆ ಒತ್ತಾಯಿಸಿದರು. ನಂತರ ಸ್ವಾಮೀಜಿಗಳ ತುರ್ತು ಸಭೆ ಮತ್ತು ಸುದ್ದಿಗೋಷ್ಠಿಗೆ ಕರೆ ನೀಡಿದ್ದರು ಎಂದು ಅಭಿಷೇಕ್ ಮಿಶ್ರ ತಿಳಿಸಿದರು.</p>.<p>ಗೃಹ ಸಚಿವಾಲಯದಿಂದ ಫೋನ್ ಕರೆ ಬಂದ ನಂತರ, ಎರಡೂ ಸಭೆಗಳನ್ನು ರದ್ದುಪಡಿಸಲಾಯಿತು ಎಂದು ನೃತ್ಯ ಗೋಪಾಲ್ ದಾಸ್ ಅವರ ಉತ್ತರಾಧಿಕಾರಿ ಕಮಲ್ ನಯನ್ ದಾಸ್ ತಿಳಿಸಿದರು.</p>.<p>‘ಮಹಾಂತ್, ಅಮಿತ್ ಶಾ ರೊಂದಿಗೆ ಮಾತುಕತೆ ನಡೆಸಲಿ ಎಂದು ಫೋನ್ ಮುಖಾಂತರ ಸಂಭಾಷಣೆಗೆ ಅವಕಾಶ ಕಲ್ಪಿಸಿದೆವು. ಟ್ರಸ್ಟ್ನಲ್ಲಿ ಇನ್ನೂ ಮೂರು ಸ್ಥಾನಗಳು ಖಾಲಿ ಉಳಿದಿದ್ದು, ಮಹಾಂತ್ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಎಂಬ ಭರವಸೆ ಇದೆ’ ಎಂದು ಶಾಸಕ ಗುಪ್ತಾ ಹೇಳಿದರು.</p>.<p>‘ರಾಮ ಮಂದಿರ ಹೋರಾಟದಲ್ಲಿ ತಮ್ಮ ಜೀವನವನ್ನೇ ಸವೆಸಿದ್ದವರನ್ನುಈಗ ಕಡೆಗಣಿಸಲಾಗುತ್ತಿದೆ’ ಎಂದು ಮಹಾಂತ್ ಬೇಸರ ಹೊರಹಾಕಿದ್ದರು. ‘ಟ್ರಸ್ಟ್ ರಚನೆಯ ವಿಷಯದಲ್ಲಿ ವೈಷ್ಣವ ಸಮಾಜವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಆದರೆ, ಇದನ್ನು ಅವರು ಒಪ್ಪಿಕೊಳ್ಳುತ್ತಿಲ್ಲ’ ಎಂದು ಕಮಲ್ ನಯನ್ ದಾಸ್ ಆಕ್ರೋಶ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>