<p><strong>ನವದೆಹಲಿ</strong>: ಉತ್ತರಾಖಂಡದ ಭೂಕುಸಿತ ವಲಯವಾಗಿ ಪರಿಗಣಿಸಿರುವ ಜೋಶಿಮಠ ಪಟ್ಟಣ ಕೇವಲ 12 ದಿನಗಳಲ್ಲಿ 5.4 ಸೆಂ.ಮೀನಷ್ಟು ವೇಗವಾಗಿ ಕುಸಿದಿರುವುದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಬಿಡುಗಡೆ ಮಾಡಿರುವ ಕಾರ್ಟೊಸ್ಯಾಟ್ -2 ಎಸ್ ಉಪಗ್ರಹ ಚಿತ್ರಗಳಲ್ಲಿ ಕಂಡುಬಂದಿದೆ. ತ್ವರಿತಗತಿಯಲ್ಲಿ ಪರಿಹಾರ ಕಾರ್ಯಾಚರಣೆ ಕೈಗೊಳ್ಳಲು ಇದು ಎಚ್ಚರಿಕೆಯ ಗಂಟೆ ಬಾರಿಸಿದೆ. </p>.<p>ಜೋಶಿಮಠದಲ್ಲಿ ಜನವರಿ 2ರಂದು ಸಂಭವಿಸಿದ ಭೂಕುಸಿತದಿಂದ ಪಟ್ಟಣದ ಜನವಸತಿ ಪ್ರದೇಶದ ಕುಸಿಯುವಿಕೆ ವೇಗ ತೀವ್ರಗೊಮಂಡಿದೆ. ಪ್ರಸಿದ್ಧ ಯಾತ್ರಾ ತಾಣಗಳಾದ ಬದರೀನಾಥ ಮತ್ತು ಹೇಮಕುಂಡ್ ಸಾಹೀಬ್ ಹಾಗೂ ಅಂತರರಾಷ್ಟ್ರೀಯ ಸ್ಕೀಯಿಂಗ್ ಕ್ರೀಡೆಯ ಗಮ್ಯತಾಣ ಔಲಿಯ ಹೆಬ್ಬಾಗಿಲು ಎನಿಸಿರುವ ಈ ಪಟ್ಟಣದ ಅಸ್ತಿತ್ವಕ್ಕೆ ಭೂಕುಸಿತದ ಸಮಸ್ಯೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ.</p>.<p>ಹಿಮಾಲಯ ಪರ್ವತಶ್ರೇಣಿಯ ಈ ಪಟ್ಟಣದಲ್ಲಿ 2022 ಏಪ್ರಿಲ್ ಮತ್ತು ನವೆಂಬರ್ ನಡುವೆ ಭೂಕುಸಿತ ನಿಧಾನದಲ್ಲಿತ್ತು. ಈ ಅವಧಿಯಲ್ಲಿ 8.9 ಸೆಂ.ಮೀಯಷ್ಟು ಕುಸಿದಿರುವುದು ಇಸ್ರೊದ ರಾಷ್ಟ್ರೀಯ ದೂರಸಂವೇದಿ ಕೇಂದ್ರದ (ಎನ್ಆರ್ಎಸ್ಸಿ) ಪ್ರಾಥಮಿಕ ಅಧ್ಯಯನದಲ್ಲಿ ಕಂಡುಬಂದಿತ್ತು. ಆದರೆ, 2022ರ ಡಿಸೆಂಬರ್ 27ರಿಂದ 2023ರ ಜ.8ರ ನಡುವೆ ಭೂ ಕುಸಿತದ ವೇಗ ತೀವ್ರಗೊಂಡಿದೆ. ಕೇವಲ 12 ದಿನಗಳಲ್ಲಿ ವ್ಯಾಪಕ ಪ್ರಮಾಣದ ಕುಸಿತವಾಗಿದೆ. </p>.<p>‘ಈ ಪ್ರದೇಶವು ಕೆಲವೇ ದಿನಗಳಲ್ಲಿ 5 ಸೆಂ.ಮೀ. ಕುಸಿದಿದೆ. ಇದರ ವ್ಯಾಪ್ತಿ ವಾಸಸ್ಥಳ ಹೆಚ್ಚು ಆವರಿಸಿದೆ. ಆದರೆ, ಇದು ಪಟ್ಟಣದ ಕೇಂದ್ರ ಭಾಗಕ್ಕೆ ಮಾತ್ರ ಸೀಮಿತವಾಗಿದೆ. ಭೂಕುಸಿತದ ಮುಕುಟ ಭಾಗ 2,180 ಮೀಟರ್ ಎತ್ತರದಲ್ಲಿ ಜೋಶಿಮಠ-ಔಲಿ ರಸ್ತೆ ಬಳಿಯ ವಸತಿ ಸ್ಥಳದಲ್ಲಿ ಗುರುತಿಸಲಾಗಿದೆ’ ಎಂದು ಎನ್ಆರ್ಎಸ್ಸಿ ವರದಿ ಹೇಳಿದೆ. </p>.<p>ಇಸ್ರೊ ಬಿಡುಗಡೆ ಮಾಡಿರುವ ಈ ಚಿತ್ರಗಳಲ್ಲಿ ಜೋಶಿಮಠ ಪಟ್ಟಣದ ಕೇಂದ್ರ ಭಾಗ ವ್ಯಾಪಿಸಿರುವ ಸೇನೆಯ ಹೆಲಿಪ್ಯಾಡ್ ಮತ್ತು ನರಸಿಂಗ ದೇವಸ್ಥಾನ ಭೂಕುಸಿತದ ವಲಯದಲ್ಲಿ ಕಾಣಿಸಿವೆ. </p>.<p>ಹೆಚ್ಚು ಅಪಾಯದ ಸ್ಥಳದಿಂದ ಜನರ ಸ್ಥಳಾಂತರ ಮುಂದುವರಿದಿದೆ. ಈ ವರೆಗೆ 589 ಮಂದಿಯ 169 ಕುಟುಂಬಗಳನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಸುಮಾರು 3,630 ಸಂತ್ರಸ್ತರಿಗೆ ಆಶ್ರಯ ಕಲ್ಪಿಸುವ 835 ಕೊಠಡಿಗಳ ಪರಿಹಾರ ಕೇಂದ್ರಗಳನ್ನು ಜೋಶಿಮಠ ಮತ್ತು ಪಿಪಾಲ್ಕೋಟಿಯಲ್ಲಿ ತೆರೆಯಲಾಗಿದೆ. ಈವರೆಗೆ 42 ಸಂತ್ರಸ್ತ ಕುಟುಂಬಗಳಿಗೆ ರಾಜ್ಯ ಸರ್ಕಾರ ತಲಾ ₹1.5 ಲಕ್ಷ ಮಧ್ಯಂತರ ಪರಿಹಾರವನ್ನು ಪಾವತಿಸಿದೆ.</p>.<p><strong>ಸಂತ್ರಸ್ತರ 6 ತಿಂಗಳ ವಿದ್ಯುತ್, ನೀರಿನ ಶುಲ್ಕ ಮನ್ನಾ</strong></p>.<p><strong>ಡೆಹ್ರಾಡೂನ್:</strong> ಭೂಕುಸಿತ ಪೀಡಿತ ಜೋಶಿಮಠದಲ್ಲಿ ತೊಂದರೆಗೆ ಸಿಲುಕಿದ ಸಂತ್ರಸ್ತರಿಗೆ ಆರು ತಿಂಗಳ ವಿದ್ಯುತ್ ಮತ್ತು ಕುಡಿಯುವ ನೀರಿನ ಶುಲ್ಕ ಮನ್ನಾ ಮಾಡಲು, ಸಂತ್ರಸ್ತರ ಬ್ಯಾಂಕ್ ಸಾಲಗಳ ಮರುಪಾವತಿಯನ್ನು ಒಂದು ವರ್ಷ ತಡೆಹಿಡಿಯಲು ಉತ್ತರಾಖಂಡ ಸರ್ಕಾರ ಶುಕ್ರವಾರ ನಿರ್ಧರಿಸಿತು.</p>.<p>ಅಲ್ಲದೇ, ಸಂತ್ರಸ್ತ ಕುಟುಂಬಗಳ ತಲಾ ಇಬ್ಬರಿಗೆ ಉದ್ಯೋಗ ಖಾತ್ರಿಯಡಿ ಕೆಲಸ ನೀಡಲು ತೀರ್ಮಾನಿಸಲಾಯಿತು. ಜೋಶಿಮಠದ ಭೂಕುಸಿತಕ್ಕೆ ಸರ್ಕಾರಿ ಸ್ವಾಮ್ಯದ ವಿದ್ಯುತ್ ಉತ್ಪಾದನಾ ಸಂಸ್ಥೆ ಎನ್ಟಿಪಿಸಿ ಕಾರಣವಾಗಿದ್ದರೆ ಆ ಬಗ್ಗೆಯೂ ತನಿಖೆ ನಡೆಸಲು ಸರ್ಕಾರ ನಿರ್ಧರಿಸಿದೆ. ಆದರೆ, ಈ ಪ್ರದೇಶದ ಭೂಕುಸಿತದಲ್ಲಿ ಸಂಸ್ಥೆಯ ಯಾವುದೇ ಪಾತ್ರವಿಲ್ಲವೆಂದು ವಿದ್ಯುತ್ ಸಚಿವಾಲಯಕ್ಕೆ ಎನ್ಟಿಪಿಸಿ ತಿಳಿಸಿದೆ. </p>.<p>ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನೇತೃತ್ವದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು. ಅಲ್ಲದೇ, ಬೆಟ್ಟಗಳಲ್ಲಿರುವ ಎಲ್ಲ ಪಟ್ಟಣಗಳಿಂದ ಜನರನ್ನು ಸ್ಥಳಾಂತರಿಸುವ ಸಾಮರ್ಥ್ಯದ ಅಧ್ಯಯನಕ್ಕೂ ಸಂಪುಟ ಅನುಮೋದನೆ ನೀಡಿತು ಎಂದು ಮುಖ್ಯ ಕಾರ್ಯದರ್ಶಿ ಎಸ್.ಎಸ್. ಸಂಧು ಅವರು ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>ಸಹಕಾರಿ ಬ್ಯಾಂಕುಗಳು ಸಾಲಗಳ ಮರುಪಾವತಿಯನ್ನು ಒಂದು ವರ್ಷ ನಿಷೇಧಿಸುವ ನಿರ್ಧಾರ ತಕ್ಷಣವೇ ಜಾರಿಗೆ ತರಲಾಗುವುದು. ವಾಣಿಜ್ಯ ಬ್ಯಾಂಕುಗಳೂ ಇದನ್ನು ಪಾಲಿಸುವಂತೆ ಕೇಂದ್ರಕ್ಕೂ ಮನವಿ ಮಾಡಲಾಗುವುದು ಎಂದರು.</p>.<p>ಕೋಟಿ ಫಾರ್ಮ್, ಪಿಪಾಲ್ಕೋಟಿ, ಗೌಚಾರ್, ಗೌಖ್ ಸಿಲಾಂಗ್ ಮತ್ತು ಧಾಕ್ ಹಳ್ಳಿಗಳ ಸಂತ್ರಸ್ತರ ಪುನರ್ವಸತಿಗಾಗಿ ಸಿದ್ಧಮನೆಗಳ ನಿರ್ಮಾಣಕ್ಕೆ, ಬಾಡಿಗೆ ಮನೆಗಳಿಗೆ ಸ್ಥಳಾಂತರವಾಗುವ ಸಂತ್ರಸ್ತರಿಗೆ ತಿಂಗಳಿಗೆ ನಿಗದಿಪಡಿಸಿದ್ದ ₹4 ಸಾವಿರ ಬಾಡಿಗೆಯನ್ನು ₹5 ಸಾವಿರಕ್ಕೆ ಏರಿಸಲು ಅನುಮತಿಸಲಾಯಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಉತ್ತರಾಖಂಡದ ಭೂಕುಸಿತ ವಲಯವಾಗಿ ಪರಿಗಣಿಸಿರುವ ಜೋಶಿಮಠ ಪಟ್ಟಣ ಕೇವಲ 12 ದಿನಗಳಲ್ಲಿ 5.4 ಸೆಂ.ಮೀನಷ್ಟು ವೇಗವಾಗಿ ಕುಸಿದಿರುವುದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಬಿಡುಗಡೆ ಮಾಡಿರುವ ಕಾರ್ಟೊಸ್ಯಾಟ್ -2 ಎಸ್ ಉಪಗ್ರಹ ಚಿತ್ರಗಳಲ್ಲಿ ಕಂಡುಬಂದಿದೆ. ತ್ವರಿತಗತಿಯಲ್ಲಿ ಪರಿಹಾರ ಕಾರ್ಯಾಚರಣೆ ಕೈಗೊಳ್ಳಲು ಇದು ಎಚ್ಚರಿಕೆಯ ಗಂಟೆ ಬಾರಿಸಿದೆ. </p>.<p>ಜೋಶಿಮಠದಲ್ಲಿ ಜನವರಿ 2ರಂದು ಸಂಭವಿಸಿದ ಭೂಕುಸಿತದಿಂದ ಪಟ್ಟಣದ ಜನವಸತಿ ಪ್ರದೇಶದ ಕುಸಿಯುವಿಕೆ ವೇಗ ತೀವ್ರಗೊಮಂಡಿದೆ. ಪ್ರಸಿದ್ಧ ಯಾತ್ರಾ ತಾಣಗಳಾದ ಬದರೀನಾಥ ಮತ್ತು ಹೇಮಕುಂಡ್ ಸಾಹೀಬ್ ಹಾಗೂ ಅಂತರರಾಷ್ಟ್ರೀಯ ಸ್ಕೀಯಿಂಗ್ ಕ್ರೀಡೆಯ ಗಮ್ಯತಾಣ ಔಲಿಯ ಹೆಬ್ಬಾಗಿಲು ಎನಿಸಿರುವ ಈ ಪಟ್ಟಣದ ಅಸ್ತಿತ್ವಕ್ಕೆ ಭೂಕುಸಿತದ ಸಮಸ್ಯೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ.</p>.<p>ಹಿಮಾಲಯ ಪರ್ವತಶ್ರೇಣಿಯ ಈ ಪಟ್ಟಣದಲ್ಲಿ 2022 ಏಪ್ರಿಲ್ ಮತ್ತು ನವೆಂಬರ್ ನಡುವೆ ಭೂಕುಸಿತ ನಿಧಾನದಲ್ಲಿತ್ತು. ಈ ಅವಧಿಯಲ್ಲಿ 8.9 ಸೆಂ.ಮೀಯಷ್ಟು ಕುಸಿದಿರುವುದು ಇಸ್ರೊದ ರಾಷ್ಟ್ರೀಯ ದೂರಸಂವೇದಿ ಕೇಂದ್ರದ (ಎನ್ಆರ್ಎಸ್ಸಿ) ಪ್ರಾಥಮಿಕ ಅಧ್ಯಯನದಲ್ಲಿ ಕಂಡುಬಂದಿತ್ತು. ಆದರೆ, 2022ರ ಡಿಸೆಂಬರ್ 27ರಿಂದ 2023ರ ಜ.8ರ ನಡುವೆ ಭೂ ಕುಸಿತದ ವೇಗ ತೀವ್ರಗೊಂಡಿದೆ. ಕೇವಲ 12 ದಿನಗಳಲ್ಲಿ ವ್ಯಾಪಕ ಪ್ರಮಾಣದ ಕುಸಿತವಾಗಿದೆ. </p>.<p>‘ಈ ಪ್ರದೇಶವು ಕೆಲವೇ ದಿನಗಳಲ್ಲಿ 5 ಸೆಂ.ಮೀ. ಕುಸಿದಿದೆ. ಇದರ ವ್ಯಾಪ್ತಿ ವಾಸಸ್ಥಳ ಹೆಚ್ಚು ಆವರಿಸಿದೆ. ಆದರೆ, ಇದು ಪಟ್ಟಣದ ಕೇಂದ್ರ ಭಾಗಕ್ಕೆ ಮಾತ್ರ ಸೀಮಿತವಾಗಿದೆ. ಭೂಕುಸಿತದ ಮುಕುಟ ಭಾಗ 2,180 ಮೀಟರ್ ಎತ್ತರದಲ್ಲಿ ಜೋಶಿಮಠ-ಔಲಿ ರಸ್ತೆ ಬಳಿಯ ವಸತಿ ಸ್ಥಳದಲ್ಲಿ ಗುರುತಿಸಲಾಗಿದೆ’ ಎಂದು ಎನ್ಆರ್ಎಸ್ಸಿ ವರದಿ ಹೇಳಿದೆ. </p>.<p>ಇಸ್ರೊ ಬಿಡುಗಡೆ ಮಾಡಿರುವ ಈ ಚಿತ್ರಗಳಲ್ಲಿ ಜೋಶಿಮಠ ಪಟ್ಟಣದ ಕೇಂದ್ರ ಭಾಗ ವ್ಯಾಪಿಸಿರುವ ಸೇನೆಯ ಹೆಲಿಪ್ಯಾಡ್ ಮತ್ತು ನರಸಿಂಗ ದೇವಸ್ಥಾನ ಭೂಕುಸಿತದ ವಲಯದಲ್ಲಿ ಕಾಣಿಸಿವೆ. </p>.<p>ಹೆಚ್ಚು ಅಪಾಯದ ಸ್ಥಳದಿಂದ ಜನರ ಸ್ಥಳಾಂತರ ಮುಂದುವರಿದಿದೆ. ಈ ವರೆಗೆ 589 ಮಂದಿಯ 169 ಕುಟುಂಬಗಳನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಸುಮಾರು 3,630 ಸಂತ್ರಸ್ತರಿಗೆ ಆಶ್ರಯ ಕಲ್ಪಿಸುವ 835 ಕೊಠಡಿಗಳ ಪರಿಹಾರ ಕೇಂದ್ರಗಳನ್ನು ಜೋಶಿಮಠ ಮತ್ತು ಪಿಪಾಲ್ಕೋಟಿಯಲ್ಲಿ ತೆರೆಯಲಾಗಿದೆ. ಈವರೆಗೆ 42 ಸಂತ್ರಸ್ತ ಕುಟುಂಬಗಳಿಗೆ ರಾಜ್ಯ ಸರ್ಕಾರ ತಲಾ ₹1.5 ಲಕ್ಷ ಮಧ್ಯಂತರ ಪರಿಹಾರವನ್ನು ಪಾವತಿಸಿದೆ.</p>.<p><strong>ಸಂತ್ರಸ್ತರ 6 ತಿಂಗಳ ವಿದ್ಯುತ್, ನೀರಿನ ಶುಲ್ಕ ಮನ್ನಾ</strong></p>.<p><strong>ಡೆಹ್ರಾಡೂನ್:</strong> ಭೂಕುಸಿತ ಪೀಡಿತ ಜೋಶಿಮಠದಲ್ಲಿ ತೊಂದರೆಗೆ ಸಿಲುಕಿದ ಸಂತ್ರಸ್ತರಿಗೆ ಆರು ತಿಂಗಳ ವಿದ್ಯುತ್ ಮತ್ತು ಕುಡಿಯುವ ನೀರಿನ ಶುಲ್ಕ ಮನ್ನಾ ಮಾಡಲು, ಸಂತ್ರಸ್ತರ ಬ್ಯಾಂಕ್ ಸಾಲಗಳ ಮರುಪಾವತಿಯನ್ನು ಒಂದು ವರ್ಷ ತಡೆಹಿಡಿಯಲು ಉತ್ತರಾಖಂಡ ಸರ್ಕಾರ ಶುಕ್ರವಾರ ನಿರ್ಧರಿಸಿತು.</p>.<p>ಅಲ್ಲದೇ, ಸಂತ್ರಸ್ತ ಕುಟುಂಬಗಳ ತಲಾ ಇಬ್ಬರಿಗೆ ಉದ್ಯೋಗ ಖಾತ್ರಿಯಡಿ ಕೆಲಸ ನೀಡಲು ತೀರ್ಮಾನಿಸಲಾಯಿತು. ಜೋಶಿಮಠದ ಭೂಕುಸಿತಕ್ಕೆ ಸರ್ಕಾರಿ ಸ್ವಾಮ್ಯದ ವಿದ್ಯುತ್ ಉತ್ಪಾದನಾ ಸಂಸ್ಥೆ ಎನ್ಟಿಪಿಸಿ ಕಾರಣವಾಗಿದ್ದರೆ ಆ ಬಗ್ಗೆಯೂ ತನಿಖೆ ನಡೆಸಲು ಸರ್ಕಾರ ನಿರ್ಧರಿಸಿದೆ. ಆದರೆ, ಈ ಪ್ರದೇಶದ ಭೂಕುಸಿತದಲ್ಲಿ ಸಂಸ್ಥೆಯ ಯಾವುದೇ ಪಾತ್ರವಿಲ್ಲವೆಂದು ವಿದ್ಯುತ್ ಸಚಿವಾಲಯಕ್ಕೆ ಎನ್ಟಿಪಿಸಿ ತಿಳಿಸಿದೆ. </p>.<p>ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನೇತೃತ್ವದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು. ಅಲ್ಲದೇ, ಬೆಟ್ಟಗಳಲ್ಲಿರುವ ಎಲ್ಲ ಪಟ್ಟಣಗಳಿಂದ ಜನರನ್ನು ಸ್ಥಳಾಂತರಿಸುವ ಸಾಮರ್ಥ್ಯದ ಅಧ್ಯಯನಕ್ಕೂ ಸಂಪುಟ ಅನುಮೋದನೆ ನೀಡಿತು ಎಂದು ಮುಖ್ಯ ಕಾರ್ಯದರ್ಶಿ ಎಸ್.ಎಸ್. ಸಂಧು ಅವರು ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>ಸಹಕಾರಿ ಬ್ಯಾಂಕುಗಳು ಸಾಲಗಳ ಮರುಪಾವತಿಯನ್ನು ಒಂದು ವರ್ಷ ನಿಷೇಧಿಸುವ ನಿರ್ಧಾರ ತಕ್ಷಣವೇ ಜಾರಿಗೆ ತರಲಾಗುವುದು. ವಾಣಿಜ್ಯ ಬ್ಯಾಂಕುಗಳೂ ಇದನ್ನು ಪಾಲಿಸುವಂತೆ ಕೇಂದ್ರಕ್ಕೂ ಮನವಿ ಮಾಡಲಾಗುವುದು ಎಂದರು.</p>.<p>ಕೋಟಿ ಫಾರ್ಮ್, ಪಿಪಾಲ್ಕೋಟಿ, ಗೌಚಾರ್, ಗೌಖ್ ಸಿಲಾಂಗ್ ಮತ್ತು ಧಾಕ್ ಹಳ್ಳಿಗಳ ಸಂತ್ರಸ್ತರ ಪುನರ್ವಸತಿಗಾಗಿ ಸಿದ್ಧಮನೆಗಳ ನಿರ್ಮಾಣಕ್ಕೆ, ಬಾಡಿಗೆ ಮನೆಗಳಿಗೆ ಸ್ಥಳಾಂತರವಾಗುವ ಸಂತ್ರಸ್ತರಿಗೆ ತಿಂಗಳಿಗೆ ನಿಗದಿಪಡಿಸಿದ್ದ ₹4 ಸಾವಿರ ಬಾಡಿಗೆಯನ್ನು ₹5 ಸಾವಿರಕ್ಕೆ ಏರಿಸಲು ಅನುಮತಿಸಲಾಯಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>