<p><strong>ಭೂಪಾಲ್</strong>: ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ತಣ್ಣಗಾದ ಹಾಗೂ ಕಳಪೆ ಟೀ ಪೂರೈಸಿದ ಆರೋಪದ ಮೇಲೆ ಅಧಿಕಾರಿಯೊಬ್ಬರಿಗೆ ನೋಟಿಸ್ ನೀಡಲಾಗಿದೆ.</p>.<p>ಛಾತರ್ಪುರ್ ಜಿಲ್ಲೆಯ ಪಿಡಬ್ಲೂಡಿ ಇಲಾಖೆಯ ಕಿರಿಯ ಅಧಿಕಾರಿ ರಾಕೇಶ್ ಕನೌಹಾ ಅವರಿಗೆ ರಾಜನಗರ್ ವಿಭಾಗದ ಸಹಾಯಕ ಕಮೀಷನರ್ ಡಿ.ಪಿ ದ್ವಿವೇದಿ ಅವರು ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.</p>.<p><strong>ಏನಾಗಿತ್ತು?</strong></p>.<p>ಸಿಎಂ ಚೌಹಾಣ್ ಅವರು ಸ್ಥಳೀಯ ಸಂಸ್ಥೆ ಚುನಾವಣೆ ಪ್ರಚಾರದಲ್ಲಿದ್ದರು. ಈ ಸಲುವಾಗಿ ಅವರು ಖಜರಾಹೊ ವಿಮಾನ ನಿಲ್ದಾಣದಲ್ಲಿ ವಿಶ್ರಾಂತಿಗೆ ಎಂದು ಕೆಲಕಾಲ ತಂಗಿದ್ದರು. ಈ ವೇಳೆ ಅವರಿಗೆ ಉಪಹಾರ ಹಾಗೂ ಟೀಯನ್ನು ಪೂರೈಕೆ ಮಾಡಲಾಗಿತ್ತು. ರಾಕೇಶ್ ಅವರು ಸಿಎಂ ಆತಿಥ್ಯದ ಹೊಣೆ ಹೊತ್ತಿದ್ದರು.</p>.<p>ಪೂರೈಸಿದ ಟೀ ಕಳಪೆಯಾಗಿದ್ದಲ್ಲದೇ ತಣ್ಣಗಾಗಿ ಹೋಗಿದ್ದು ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಇದು ವಿಐಪಿ ಒಬ್ಬರ ಶಿಷ್ಟಾಚಾರದ ಉಲ್ಲಂಘನೆ ಹಾಗೂ ಜಿಲ್ಲೆಗೆ ಅವಮಾನ ಎಂದು ತಿಳಿದು ರಾಕೇಶ್ ಅವರಿಗೆ ನೋಟಿಸ್ ನೀಡಲಾಗಿದೆ.</p>.<p>ನೋಟಿಸ್ಗೆ ಉತ್ತರಿಸಲು ಎರಡು ದಿನವನ್ನು ರಾಕೇಶ್ ಅವರಿಗೆ ನೀಡಲಾಗಿದೆ. ಸೂಕ್ತ ಕಾರಣ ನೀಡದಿದ್ದರೇ ಅವರ ವಿರುದ್ಧ ನಿಯಮಾನುಸಾರ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಕಮೀಷನರ್ ದ್ವಿವೇದಿ ತಿಳಿಸಿರುವುದಾಗಿ ‘ದಿ ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ.</p>.<p><a href="https://www.prajavani.net/entertainment/cinema/actress-priya-anand-clarifies-about-her-controversial-remark-on-nityanand-swami-953681.html" itemprop="url">ನಿತ್ಯಾನಂದ ಸ್ವಾಮಿಯನ್ನ ಮದುವೆಯಾಗುತ್ತೇನೆ ಎಂದಿದ್ದ ನಟಿ ಪ್ರಿಯಾ ಆನಂದ್ ಸ್ಪಷ್ಟನೆ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭೂಪಾಲ್</strong>: ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ತಣ್ಣಗಾದ ಹಾಗೂ ಕಳಪೆ ಟೀ ಪೂರೈಸಿದ ಆರೋಪದ ಮೇಲೆ ಅಧಿಕಾರಿಯೊಬ್ಬರಿಗೆ ನೋಟಿಸ್ ನೀಡಲಾಗಿದೆ.</p>.<p>ಛಾತರ್ಪುರ್ ಜಿಲ್ಲೆಯ ಪಿಡಬ್ಲೂಡಿ ಇಲಾಖೆಯ ಕಿರಿಯ ಅಧಿಕಾರಿ ರಾಕೇಶ್ ಕನೌಹಾ ಅವರಿಗೆ ರಾಜನಗರ್ ವಿಭಾಗದ ಸಹಾಯಕ ಕಮೀಷನರ್ ಡಿ.ಪಿ ದ್ವಿವೇದಿ ಅವರು ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.</p>.<p><strong>ಏನಾಗಿತ್ತು?</strong></p>.<p>ಸಿಎಂ ಚೌಹಾಣ್ ಅವರು ಸ್ಥಳೀಯ ಸಂಸ್ಥೆ ಚುನಾವಣೆ ಪ್ರಚಾರದಲ್ಲಿದ್ದರು. ಈ ಸಲುವಾಗಿ ಅವರು ಖಜರಾಹೊ ವಿಮಾನ ನಿಲ್ದಾಣದಲ್ಲಿ ವಿಶ್ರಾಂತಿಗೆ ಎಂದು ಕೆಲಕಾಲ ತಂಗಿದ್ದರು. ಈ ವೇಳೆ ಅವರಿಗೆ ಉಪಹಾರ ಹಾಗೂ ಟೀಯನ್ನು ಪೂರೈಕೆ ಮಾಡಲಾಗಿತ್ತು. ರಾಕೇಶ್ ಅವರು ಸಿಎಂ ಆತಿಥ್ಯದ ಹೊಣೆ ಹೊತ್ತಿದ್ದರು.</p>.<p>ಪೂರೈಸಿದ ಟೀ ಕಳಪೆಯಾಗಿದ್ದಲ್ಲದೇ ತಣ್ಣಗಾಗಿ ಹೋಗಿದ್ದು ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಇದು ವಿಐಪಿ ಒಬ್ಬರ ಶಿಷ್ಟಾಚಾರದ ಉಲ್ಲಂಘನೆ ಹಾಗೂ ಜಿಲ್ಲೆಗೆ ಅವಮಾನ ಎಂದು ತಿಳಿದು ರಾಕೇಶ್ ಅವರಿಗೆ ನೋಟಿಸ್ ನೀಡಲಾಗಿದೆ.</p>.<p>ನೋಟಿಸ್ಗೆ ಉತ್ತರಿಸಲು ಎರಡು ದಿನವನ್ನು ರಾಕೇಶ್ ಅವರಿಗೆ ನೀಡಲಾಗಿದೆ. ಸೂಕ್ತ ಕಾರಣ ನೀಡದಿದ್ದರೇ ಅವರ ವಿರುದ್ಧ ನಿಯಮಾನುಸಾರ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಕಮೀಷನರ್ ದ್ವಿವೇದಿ ತಿಳಿಸಿರುವುದಾಗಿ ‘ದಿ ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ.</p>.<p><a href="https://www.prajavani.net/entertainment/cinema/actress-priya-anand-clarifies-about-her-controversial-remark-on-nityanand-swami-953681.html" itemprop="url">ನಿತ್ಯಾನಂದ ಸ್ವಾಮಿಯನ್ನ ಮದುವೆಯಾಗುತ್ತೇನೆ ಎಂದಿದ್ದ ನಟಿ ಪ್ರಿಯಾ ಆನಂದ್ ಸ್ಪಷ್ಟನೆ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>