ಚುನಾವಣೆ ಸಂದರ್ಭದಲ್ಲಿ ಘೋಷಿಸುವ ಮಹಿಳಾ ಕೇಂದ್ರಿತ ಕಾರ್ಯಕ್ರಮಗಳು ಆಡಳಿತಾರೂಢ ಪಕ್ಷ ಅಥವಾ ಮೈತ್ರಿಕೂಟಕ್ಕೆ ನ್ಯಾಯಸಮ್ಮತವಲ್ಲದ ಅನುಕೂಲ ಒದಗಿಸುತ್ತವೆ. ಇಂತ ನಡೆ ಮುಕ್ತ ಹಾಗೂ ನ್ಯಾಯಯುತ ಚುನಾವಣೆಗೆ ವಿರುದ್ಧವಾದುದು.
– ರಶೀದ್ ಕಿದ್ವಾಯಿ, ರಾಜಕೀಯ ವಿಶ್ಲೇಷಕ ಹಾಗೂ ಲೇಖಕ
ಮಹಿಳೆಯರು ಹಾಗೂ ವಿದ್ಯಾರ್ಥಿನಿಯರನ್ನು ಗುರಿಯಾಗಿಸಿ ಜಾರಿಗೊಳಿಸಿದ ಯೋಜನೆಗಳು ಎನ್ಡಿಎ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿವೆ. ವಿವಿಧ ಆಮಿಷಗಳನ್ನು ಒಡ್ಡಿ ಮಹಿಳಾ ಮತದಾರರ ಮನ ಗೆಲ್ಲಲು ಮಹಾಘಟಬಂಧನ ಪ್ರಯತ್ನಿಸಿತು. ಆದರೆ ಅದರ ಆಶ್ವಾಸನೆಗಳನ್ನು ಮಹಿಳೆಯರು ನಂಬಲೇ ಇಲ್ಲ.
–ನಿಖಿಲ್ ಆನಂದ, ಬಿಜೆಪಿ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ
ಮದ್ಯ ಮಾರಾಟ ನಿಷೇಧ, ಮಹಿಳೆಯರ ಮೀಸಲಾತಿಯಲ್ಲಿ ಹೆಚ್ಚಳ ವಿದ್ಯಾರ್ಥಿನಿಯರಿಗೆ ಸೈಕಲ್ ವಿತರಣೆಯಂತಹ ಕ್ರಮಗಳು ಮಹಿಳೆಯರು ನಿತೀಶ್ ಕುಮಾರ್ ಪರ ನಿಲ್ಲಲು ಕಾರಣವಾದವು. ಮದ್ಯ ನಿಷೇಧದ ನಂತರ ಕೌಟುಂಬಿಕ ದೌರ್ಜನ್ಯ ಗಣನೀಯವಾಗಿ ತಗ್ಗಿದೆ ಎಂದು ಮಹಿಳೆಯರೇ ಹೇಳುತ್ತಿದ್ದಾರೆ.