<p><strong>ನವದೆಹಲಿ:</strong> ಕೇಂದ್ರದ ಮೋದಿ ಸರ್ಕಾರದ ‘ಏಕದೇಶ ಏಕ ಚುನಾವಣೆ‘ ಪ್ರಸ್ತಾಪವನ್ನು ಆಮ್ ಆದ್ಮಿ ಪಕ್ಷವು ತಿರಸ್ಕರಿಸಿದೆ. ಇದು ಅಪರೇಷನ್ ಕಮಲದಡಿ ಶಾಸಕರ ಮಾರಾಟವನ್ನು ಕಾನೂನುಬದ್ಧಗೊಳಿಸುವ ಬಿಜೆಪಿಯ ತಂತ್ರ ಎಂದು ಅದು ಹೇಳಿದೆ.</p>.<p>ನರೇಂದ್ರ ಮೋದಿ ಅವರು ಪ್ರಸ್ತಾಪ ಮಾಡುತ್ತಿರುವ ಚುನಾವಣೆ ಪ್ರಕ್ರಿಯೆಯು ಸಂಸದೀಯ ಮಾದರಿಯ ಸರ್ಕಾರವನ್ನು ತೆಗೆದುಹಾಕಿ ಅಧ್ಯಕ್ಷ ಪದ್ಧತಿಯನ್ನು ಜಾರಿಗೆ ತರುವ ಹುನ್ನಾರ ಎಂದು ಎಎಪಿ ಕಿಡಿಕಾರಿದೆ.</p>.<p>‘ಶ್ರೀಮಂತ ಪಕ್ಷಗಳು ತಮ್ಮ ಹಣ ಹಾಗೂ ತೋಳು ಬಲದಿಂದ ದೇಶದ ಸಮಸ್ಯೆಗಳನ್ನು ಮುಚ್ಚಿಹಾಕುತ್ತವೆ. ಒಂದು ವೇಳೆ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ಏಕಕಾಲದಲ್ಲಿ ನಡೆದರೆ ಮತದಾರರ ನಿರ್ಧಾರ ಬದಲಾಗಲಿದೆ‘ ಎಂದು ಪಕ್ಷದ ವಕ್ತಾರೆ ಅತಿಶಿ ಅವರು ಹೇಳಿದ್ದಾರೆ.</p>.<p>‘ಒಂದು ದೇಶ ಒಂದು ಚುನಾವಣೆ ಪ್ರಸ್ತಾಪವನ್ನು ಎಎಪಿ ಪಕ್ಷವು ತೀವ್ರವಾಗಿ ವಿರೋಧಿಸುತ್ತದೆ. ಇದು ಸಂವಿಧಾನ ಬಾಹಿರ ಹಾಗೂ ಪ್ರಜಾಪ್ರಭುತ್ವದ ಮೂಲ ತತ್ವಗಳಿಗೆ ವಿರುದ್ಧವಾದು. ಈ ಪ್ರಸ್ತಾಪವು ಅಪರೇಷನ್ ಕಮಲ ಮೂಲಕ ಶಾಸಕರ ವ್ಯಾಪಾರ ಕಾನೂನುಬದ್ಧಗೊಳಿಸುವ ಹುನ್ನಾರ‘ ಎಂದು ಅವರು ಹೇಳಿದ್ದಾರೆ.</p>.<p>ಏಕಕಾಲದಲ್ಲಿ ಚುನಾವಣೆ ನಡೆಸುವ ಕುರಿತು ಅಭಿಪ್ರಾಯ ಬಯಸಿ ವಿವಿಧ ರಾಜಕೀಯ ಪಕ್ಷಗಳು, ಚುನಾವಣಾ ಆಯೋಗಕ್ಕೆ ಕಾನೂನು ಆಯೋಗವು ಪತ್ರ ಬರೆದಿತ್ತು. ಈ ಬಗ್ಗೆ ಅತಿಶಿ ಪ್ರತಿಕ್ರಿಯೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಕೇಂದ್ರದ ಮೋದಿ ಸರ್ಕಾರದ ‘ಏಕದೇಶ ಏಕ ಚುನಾವಣೆ‘ ಪ್ರಸ್ತಾಪವನ್ನು ಆಮ್ ಆದ್ಮಿ ಪಕ್ಷವು ತಿರಸ್ಕರಿಸಿದೆ. ಇದು ಅಪರೇಷನ್ ಕಮಲದಡಿ ಶಾಸಕರ ಮಾರಾಟವನ್ನು ಕಾನೂನುಬದ್ಧಗೊಳಿಸುವ ಬಿಜೆಪಿಯ ತಂತ್ರ ಎಂದು ಅದು ಹೇಳಿದೆ.</p>.<p>ನರೇಂದ್ರ ಮೋದಿ ಅವರು ಪ್ರಸ್ತಾಪ ಮಾಡುತ್ತಿರುವ ಚುನಾವಣೆ ಪ್ರಕ್ರಿಯೆಯು ಸಂಸದೀಯ ಮಾದರಿಯ ಸರ್ಕಾರವನ್ನು ತೆಗೆದುಹಾಕಿ ಅಧ್ಯಕ್ಷ ಪದ್ಧತಿಯನ್ನು ಜಾರಿಗೆ ತರುವ ಹುನ್ನಾರ ಎಂದು ಎಎಪಿ ಕಿಡಿಕಾರಿದೆ.</p>.<p>‘ಶ್ರೀಮಂತ ಪಕ್ಷಗಳು ತಮ್ಮ ಹಣ ಹಾಗೂ ತೋಳು ಬಲದಿಂದ ದೇಶದ ಸಮಸ್ಯೆಗಳನ್ನು ಮುಚ್ಚಿಹಾಕುತ್ತವೆ. ಒಂದು ವೇಳೆ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ಏಕಕಾಲದಲ್ಲಿ ನಡೆದರೆ ಮತದಾರರ ನಿರ್ಧಾರ ಬದಲಾಗಲಿದೆ‘ ಎಂದು ಪಕ್ಷದ ವಕ್ತಾರೆ ಅತಿಶಿ ಅವರು ಹೇಳಿದ್ದಾರೆ.</p>.<p>‘ಒಂದು ದೇಶ ಒಂದು ಚುನಾವಣೆ ಪ್ರಸ್ತಾಪವನ್ನು ಎಎಪಿ ಪಕ್ಷವು ತೀವ್ರವಾಗಿ ವಿರೋಧಿಸುತ್ತದೆ. ಇದು ಸಂವಿಧಾನ ಬಾಹಿರ ಹಾಗೂ ಪ್ರಜಾಪ್ರಭುತ್ವದ ಮೂಲ ತತ್ವಗಳಿಗೆ ವಿರುದ್ಧವಾದು. ಈ ಪ್ರಸ್ತಾಪವು ಅಪರೇಷನ್ ಕಮಲ ಮೂಲಕ ಶಾಸಕರ ವ್ಯಾಪಾರ ಕಾನೂನುಬದ್ಧಗೊಳಿಸುವ ಹುನ್ನಾರ‘ ಎಂದು ಅವರು ಹೇಳಿದ್ದಾರೆ.</p>.<p>ಏಕಕಾಲದಲ್ಲಿ ಚುನಾವಣೆ ನಡೆಸುವ ಕುರಿತು ಅಭಿಪ್ರಾಯ ಬಯಸಿ ವಿವಿಧ ರಾಜಕೀಯ ಪಕ್ಷಗಳು, ಚುನಾವಣಾ ಆಯೋಗಕ್ಕೆ ಕಾನೂನು ಆಯೋಗವು ಪತ್ರ ಬರೆದಿತ್ತು. ಈ ಬಗ್ಗೆ ಅತಿಶಿ ಪ್ರತಿಕ್ರಿಯೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>