'ನೀರಿನ ಬಗ್ಗೆ ಜನರು ಹೊಂದಿರುವ ನಂಬಿಕೆಗೆ ಯಾವುದೇ ವೈಜ್ಞಾನಿಕ ಕಾರಣಗಳಿಲ್ಲ. ಒಂದು ಕೊಡ ನೀರಿನ ಸ್ನಾನ ಮಾಡುವುದರಿಂದ ಮನುಷ್ಯರಲ್ಲಿ ಫಲವತ್ತತೆ ಹೆಚ್ಚುತ್ತದೆ ಎಂಬುದನ್ನು ನಾನು ನಂಬುವುದಿಲ್ಲ. ಅದೇರೀತಿ, ಮರೀಚಿ ಕುಂಡದ ಸುತ್ತಲು ಅನೇಕ ಅಶೋಕ ವೃಕ್ಷಗಳಿವೆ. ಅವುಗಳ ಬೇರುಗಳು, ಕೊಳದ ತಳದಲ್ಲಿವೆ. ಹೀಗಾಗಿ ನೀರಿನಲ್ಲಿ ಔಷದೀಯ ಅಂಶಗಳು ಇಲ್ಲ ಎಂದೂ ಹೇಳಲಾಗದು' ಎಂದು ಖ್ಯಾತ ಸ್ತ್ರೀರೋಗ ತಜ್ಞ ಡಾ. ಸಂತೋಷ್ ಮಿಶ್ರಾ ಹೇಳಿದ್ದಾರೆ.