<p><strong>ಬೆಂಗಳೂರು:</strong> ಮೂರು ವರ್ಷಗಳ ಹಿಂದೆ ವಿಷವುಣಿಸಿ ತಮ್ಮನ್ನು ಕೊಲೆ ಮಾಡುವ ಯತ್ನ ನಡೆಸಲಾಗಿತ್ತು ಎಂಬ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ (ಇಸ್ರೋ) ಹಿರಿಯ ವಿಜ್ಞಾನಿಯ ಹೇಳಿಕೆ ಭಾರಿ ವಿವಾದವನ್ನು ಹುಟ್ಟು ಹಾಕಿದೆ.</p>.<p>ತಪನ್ ಮಿಶ್ರಾ ಎಂಬ ವಿಜ್ಞಾನಿ ಗಂಭೀರ ಆರೋಪ ಮಾಡಿದ್ದು, 2017 ಮೇ 23ರಂದು ಇಸ್ರೋ ಕೇಂದ್ರ ಕಚೇರಿಯಲ್ಲಿ ನಡೆದ ಪ್ರಚಾರ ಸಂದರ್ಶನದಲ್ಲಿ ಮಾರಣಾಂತಿಕ ಆರ್ಸೆನಿಕ್ ಟ್ರೈ ಆಕ್ಸೆೈಡ್ ನೀಡಿ ಕೊಲೆ ಯತ್ನ ನಡೆಸಲಾಗಿತ್ತು ಎಂದು ತಿಳಿಸಿದ್ದಾರೆ.</p>.<p>ವಿಷವನ್ನು ಬಹುಶಃ ದೋಸೆ, ಚಟ್ನಿ ಹಾಗೂ ಊಟದ ಬಳಿಕದ ಸ್ನ್ಯಾಕ್ಗಳಲ್ಲಿ ಬೆರೆಸಿರಬಹುದು ಎಂದು ಇಸ್ರೋದಲ್ಲಿ ಹಿರಿಯ ಸಲಹೆಗಾರನಾಗಿ ದುಡಿಯುತ್ತಿರುವ ಹಾಗೂ ಈ ತಿಂಗಳಲ್ಲಿ ನಿವೃತ್ತಿ ಹೊಂದಲಿರುವ ಮಿಶ್ರಾ ತಿಳಿಸಿದರು.</p>.<p>ಈ ಹಿಂದೆ ಅವರು ಅಹಮದಾಬಾದ್ ಮೂಲದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಪ್ಲಿಕೇಷನ್ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.</p>.<p>ಇದನ್ನೂ ಓದಿ:<a href="https://www.prajavani.net/india-news/central-vista-project-sc-central-government-793810.html" itemprop="url">ಸೆಂಟ್ರಲ್ ವಿಸ್ತಾ ಯೋಜನೆಗೆ ಹಸಿರು ನಿಶಾನೆ </a></p>.<p>ಫೇಸ್ಬುಕ್ನಲ್ಲಿ ಈ ವಿವರಗಳನ್ನು ಬಹಿರಂಗಪಡಿಸಿದ್ದಾರೆ. 'ಲಾಂಗ್ ಕೆಪ್ಟ್ ಸೀಕ್ರೆಟ್' ಎಂಬ ಶೀರ್ಷಿಕೆಯೊಂದಿಗೆ ಮಿಶ್ರಾ ರಹಸ್ಯವನ್ನು ಬಹಿರಂಗಪಡಿಸಿದ್ದು, 2017ರಲ್ಲಿ ಗೃಹ ವ್ಯವಹಾರಗಳ ಭದ್ರತಾ ಸಿಬ್ಬಂದಿ ಭೇಟಿಯಾಗಿ ಆರ್ಸೆನಿಕ್ ವಿಷವುಣಿಸುವ ಬಗ್ಗೆ ಎಚ್ಚರಿಕೆ ನೀಡಿದ್ದು, ಬಳಿಕ ವೈದ್ಯರೂ ನೆರವಾಗಿದ್ದರು ಎಂದು ಬರೆದಿದ್ದಾರೆ.</p>.<p>ವಿಷಪ್ರಾಸನದ ಬಳಿಕ ಗಂಭೀರ ಆರೋಗ್ಯ ಸಮಸ್ಯೆ ಕಾಡಿರುವುದಾಗಿ ತಿಳಿಸಿದ್ದಾರೆ. ತೀವ್ರ ಉಸಿರಾಟದ ತೊಂದರೆ, ಚರ್ಮದಲ್ಲಿ ಸೋಂಕು, ಶಿಲಿಂಧ್ರಗಳ ಸೋಂಕು ಉಂಟಾಗಿರುವುದಾಗಿ ಮಿಶ್ರಾ ಹೇಳಿದ್ದಾರೆ.</p>.<p>ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ದಿಲ್ಲಿ ಏಮ್ಸ್ ವೈದ್ಯಕೀಯ ವರದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಎಲ್ಲ ಘಟನೆಗಳ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.</p>.<p>ಸಿಂಥೆಟಿಕ್ ಅಪರ್ಚರ್ ರಾಡಾರ್ ಅನ್ನು ನಿರ್ಮಿಸುವಲ್ಲಿನ ಪರಿಣಿತಿಯಂತೆ ಬಹುದೊಡ್ಡ ಮಿಲಿಟರಿ ಮತ್ತು ವಾಣಿಜ್ಯ ಕೊಡುಗೆ ಹೊಂದಿರುವ ವಿಜ್ಞಾನಿಯನ್ನು ನಾಶ ಮಾಡುವ ಉದ್ದೇಶದಂತೆ ಬೇಹುಗಾರಿಕಾ ದಾಳಿಯಾಗಿರಬಹುದು ಎಂದು ಆರೋಪಿಸಿದರು.</p>.<p>ಆದರೆ ಮಿಶ್ರಾ ಹೇಳಿಕೆಗೆ ಇಸ್ರೋ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಮೂರು ವರ್ಷಗಳ ಹಿಂದೆ ವಿಷವುಣಿಸಿ ತಮ್ಮನ್ನು ಕೊಲೆ ಮಾಡುವ ಯತ್ನ ನಡೆಸಲಾಗಿತ್ತು ಎಂಬ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ (ಇಸ್ರೋ) ಹಿರಿಯ ವಿಜ್ಞಾನಿಯ ಹೇಳಿಕೆ ಭಾರಿ ವಿವಾದವನ್ನು ಹುಟ್ಟು ಹಾಕಿದೆ.</p>.<p>ತಪನ್ ಮಿಶ್ರಾ ಎಂಬ ವಿಜ್ಞಾನಿ ಗಂಭೀರ ಆರೋಪ ಮಾಡಿದ್ದು, 2017 ಮೇ 23ರಂದು ಇಸ್ರೋ ಕೇಂದ್ರ ಕಚೇರಿಯಲ್ಲಿ ನಡೆದ ಪ್ರಚಾರ ಸಂದರ್ಶನದಲ್ಲಿ ಮಾರಣಾಂತಿಕ ಆರ್ಸೆನಿಕ್ ಟ್ರೈ ಆಕ್ಸೆೈಡ್ ನೀಡಿ ಕೊಲೆ ಯತ್ನ ನಡೆಸಲಾಗಿತ್ತು ಎಂದು ತಿಳಿಸಿದ್ದಾರೆ.</p>.<p>ವಿಷವನ್ನು ಬಹುಶಃ ದೋಸೆ, ಚಟ್ನಿ ಹಾಗೂ ಊಟದ ಬಳಿಕದ ಸ್ನ್ಯಾಕ್ಗಳಲ್ಲಿ ಬೆರೆಸಿರಬಹುದು ಎಂದು ಇಸ್ರೋದಲ್ಲಿ ಹಿರಿಯ ಸಲಹೆಗಾರನಾಗಿ ದುಡಿಯುತ್ತಿರುವ ಹಾಗೂ ಈ ತಿಂಗಳಲ್ಲಿ ನಿವೃತ್ತಿ ಹೊಂದಲಿರುವ ಮಿಶ್ರಾ ತಿಳಿಸಿದರು.</p>.<p>ಈ ಹಿಂದೆ ಅವರು ಅಹಮದಾಬಾದ್ ಮೂಲದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಪ್ಲಿಕೇಷನ್ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.</p>.<p>ಇದನ್ನೂ ಓದಿ:<a href="https://www.prajavani.net/india-news/central-vista-project-sc-central-government-793810.html" itemprop="url">ಸೆಂಟ್ರಲ್ ವಿಸ್ತಾ ಯೋಜನೆಗೆ ಹಸಿರು ನಿಶಾನೆ </a></p>.<p>ಫೇಸ್ಬುಕ್ನಲ್ಲಿ ಈ ವಿವರಗಳನ್ನು ಬಹಿರಂಗಪಡಿಸಿದ್ದಾರೆ. 'ಲಾಂಗ್ ಕೆಪ್ಟ್ ಸೀಕ್ರೆಟ್' ಎಂಬ ಶೀರ್ಷಿಕೆಯೊಂದಿಗೆ ಮಿಶ್ರಾ ರಹಸ್ಯವನ್ನು ಬಹಿರಂಗಪಡಿಸಿದ್ದು, 2017ರಲ್ಲಿ ಗೃಹ ವ್ಯವಹಾರಗಳ ಭದ್ರತಾ ಸಿಬ್ಬಂದಿ ಭೇಟಿಯಾಗಿ ಆರ್ಸೆನಿಕ್ ವಿಷವುಣಿಸುವ ಬಗ್ಗೆ ಎಚ್ಚರಿಕೆ ನೀಡಿದ್ದು, ಬಳಿಕ ವೈದ್ಯರೂ ನೆರವಾಗಿದ್ದರು ಎಂದು ಬರೆದಿದ್ದಾರೆ.</p>.<p>ವಿಷಪ್ರಾಸನದ ಬಳಿಕ ಗಂಭೀರ ಆರೋಗ್ಯ ಸಮಸ್ಯೆ ಕಾಡಿರುವುದಾಗಿ ತಿಳಿಸಿದ್ದಾರೆ. ತೀವ್ರ ಉಸಿರಾಟದ ತೊಂದರೆ, ಚರ್ಮದಲ್ಲಿ ಸೋಂಕು, ಶಿಲಿಂಧ್ರಗಳ ಸೋಂಕು ಉಂಟಾಗಿರುವುದಾಗಿ ಮಿಶ್ರಾ ಹೇಳಿದ್ದಾರೆ.</p>.<p>ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ದಿಲ್ಲಿ ಏಮ್ಸ್ ವೈದ್ಯಕೀಯ ವರದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಎಲ್ಲ ಘಟನೆಗಳ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.</p>.<p>ಸಿಂಥೆಟಿಕ್ ಅಪರ್ಚರ್ ರಾಡಾರ್ ಅನ್ನು ನಿರ್ಮಿಸುವಲ್ಲಿನ ಪರಿಣಿತಿಯಂತೆ ಬಹುದೊಡ್ಡ ಮಿಲಿಟರಿ ಮತ್ತು ವಾಣಿಜ್ಯ ಕೊಡುಗೆ ಹೊಂದಿರುವ ವಿಜ್ಞಾನಿಯನ್ನು ನಾಶ ಮಾಡುವ ಉದ್ದೇಶದಂತೆ ಬೇಹುಗಾರಿಕಾ ದಾಳಿಯಾಗಿರಬಹುದು ಎಂದು ಆರೋಪಿಸಿದರು.</p>.<p>ಆದರೆ ಮಿಶ್ರಾ ಹೇಳಿಕೆಗೆ ಇಸ್ರೋ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>