<p><strong>ಲಖನೌ</strong>: ಮಹಾಕುಂಭ ಮೇಳದಲ್ಲಿ ಭಾಗವಹಿಸಿ, ಹತ್ತಿರದಿಂದ ನೋಡಿದವರಿಗೆ ಮಾತ್ರ ಅದರ ನಿಜವಾದ ಮಹತ್ವ ಅರಿವಾಗಲಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬುಧವಾರ ತಿಳಿಸಿದ್ದಾರೆ. </p><p>ವಿಧಾನ ಪರಿಷತ್ತಿನಲ್ಲಿ ಮಾತನಾಡಿದ ಅವರು, ಮಹಾಕುಂಭ ಮೇಳ ಸಮಯದಲ್ಲಿ ಅನೇಕ ಜನರು, ಪಕ್ಷಗಳು, ಸಂಸ್ಥೆಗಳು ಆಧಾರರಹಿತ ಹೇಳಿಕೆಗಳನ್ನು ನೀಡಿದ್ದವು. ಆದರೆ ಅಂತಹ ಹೇಳಿಕೆಗಳಿಂದ ನಾವು ವಿಚಲಿತರಾಗಲಿಲ್ಲ. ನಾವು ಭವ್ಯ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದೇವೆ ಎಂದು ಆದಿತ್ಯನಾಥ್ ಹೇಳಿದ್ದಾರೆ.</p>.ನಿವೃತ್ತಿ ಘೋಷಿಸಿದ ಟೇಬಲ್ ಟೆನಿಸ್ ದಂತಕಥೆ ಅಚಂತ ಶರತ್ ಕಮಲ್.ಅಧಿಕ ಸುಂಕ: ಅಮೆರಿಕ ವಿರುದ್ಧ WTOನಲ್ಲಿ ದೂರು ದಾಖಲಿಸಿದ ಕೆನಡಾ. <p>‘ಭಗವದ್ಗೀತೆಯನ್ನು ಉಲ್ಲೇಖಿಸಿದ ಆದಿತ್ಯನಾಥ್, ಭಗವಾನ್ ಕೃಷ್ಣನು ಪ್ರತಿಯೊಬ್ಬ ವ್ಯಕ್ತಿಯೂ ತನ್ನನ್ನು ಹೇಗೆ ನೆನಪಿಸಿಕೊಳ್ಳಬೇಕೆಂದು ಹೇಳುತ್ತಾನೆ. ಅದೇ ರೀತಿ ಕುಂಭಮೇಳದ ಬಗ್ಗೆ ಜನರು ಯಾವ ದೃಷ್ಟಿಕೋನದಿಂದ ನೋಡುತ್ತಾರೆ ಎಂಬುದು ಮುಖ್ಯವಾಗುತ್ತದೆ ಎಂದು ಆದಿತ್ಯನಾಥ್ ತಿಳಿಸಿದ್ದಾರೆ.</p><p>ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಕ್ತ ಸಂವಾದದ ಮಹತ್ವವನ್ನು ಒತ್ತಿ ಹೇಳಿದ ಆದಿತ್ಯನಾಥ್, ಸದಸ್ಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಾಗ ಸದನದ ಸಭ್ಯತೆಯನ್ನು ಕಾಪಾಡಿಕೊಳ್ಳಬೇಕೆಂದು ಒತ್ತಾಯಿಸಿದರು .</p><p>ಇತ್ತೀಚೆಗೆ ಪ್ರಯಾಗ್ರಾಜ್ನಲ್ಲಿ 45 ದಿನಗಳ ಮಹಾಕುಂಭ ಮೇಳವು ಆಧ್ಯಾತ್ಮಿಕ, ಸಾಮಾಜಿಕ ಮತ್ತು ಆರ್ಥಿಕ ಪರಿಣಾಮದ ಸಂಕೇತವಾಗಿದೆ ಎಂದು ಆದಿತ್ಯನಾಥ್ ತಿಳಿಸಿದ್ದಾರೆ.</p>.ಇಲ್ಲಿಯವರೆಗೆ ಪರಿಪೂರ್ಣವಾದ ಆಟವನ್ನು ಆಡಿಲ್ಲ, ಫೈನಲ್ನಲ್ಲಿ ನಿರೀಕ್ಷೆ: ಗಂಭೀರ್.ಹಿಂದಿ ವಿರುದ್ಧ ಪ್ರತಿಜ್ಞೆ ಮಾಡುವಾಗ ಮಹಿಳೆಯ ಬಳೆ ಕದಿಯಲು ಯತ್ನಿಸಿದ DMK ನಾಯಕ?.ಮಣಿಪುರದಲ್ಲಿ 2 ಬಾರಿ ಕಂಪಿಸಿದ ಭೂಮಿ: ಹಲವು ಕಟ್ಟಡಗಳಲ್ಲಿ ಬಿರುಕು!.ನನ್ನ ಮಗ ನಕಾರಾತ್ಮಕ ಸ್ವಜನಪಕ್ಷಪಾತದ ಬಲಿಪಶು: ಅಮಿತಾಭ್ ಬಚ್ಚನ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ</strong>: ಮಹಾಕುಂಭ ಮೇಳದಲ್ಲಿ ಭಾಗವಹಿಸಿ, ಹತ್ತಿರದಿಂದ ನೋಡಿದವರಿಗೆ ಮಾತ್ರ ಅದರ ನಿಜವಾದ ಮಹತ್ವ ಅರಿವಾಗಲಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬುಧವಾರ ತಿಳಿಸಿದ್ದಾರೆ. </p><p>ವಿಧಾನ ಪರಿಷತ್ತಿನಲ್ಲಿ ಮಾತನಾಡಿದ ಅವರು, ಮಹಾಕುಂಭ ಮೇಳ ಸಮಯದಲ್ಲಿ ಅನೇಕ ಜನರು, ಪಕ್ಷಗಳು, ಸಂಸ್ಥೆಗಳು ಆಧಾರರಹಿತ ಹೇಳಿಕೆಗಳನ್ನು ನೀಡಿದ್ದವು. ಆದರೆ ಅಂತಹ ಹೇಳಿಕೆಗಳಿಂದ ನಾವು ವಿಚಲಿತರಾಗಲಿಲ್ಲ. ನಾವು ಭವ್ಯ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದೇವೆ ಎಂದು ಆದಿತ್ಯನಾಥ್ ಹೇಳಿದ್ದಾರೆ.</p>.ನಿವೃತ್ತಿ ಘೋಷಿಸಿದ ಟೇಬಲ್ ಟೆನಿಸ್ ದಂತಕಥೆ ಅಚಂತ ಶರತ್ ಕಮಲ್.ಅಧಿಕ ಸುಂಕ: ಅಮೆರಿಕ ವಿರುದ್ಧ WTOನಲ್ಲಿ ದೂರು ದಾಖಲಿಸಿದ ಕೆನಡಾ. <p>‘ಭಗವದ್ಗೀತೆಯನ್ನು ಉಲ್ಲೇಖಿಸಿದ ಆದಿತ್ಯನಾಥ್, ಭಗವಾನ್ ಕೃಷ್ಣನು ಪ್ರತಿಯೊಬ್ಬ ವ್ಯಕ್ತಿಯೂ ತನ್ನನ್ನು ಹೇಗೆ ನೆನಪಿಸಿಕೊಳ್ಳಬೇಕೆಂದು ಹೇಳುತ್ತಾನೆ. ಅದೇ ರೀತಿ ಕುಂಭಮೇಳದ ಬಗ್ಗೆ ಜನರು ಯಾವ ದೃಷ್ಟಿಕೋನದಿಂದ ನೋಡುತ್ತಾರೆ ಎಂಬುದು ಮುಖ್ಯವಾಗುತ್ತದೆ ಎಂದು ಆದಿತ್ಯನಾಥ್ ತಿಳಿಸಿದ್ದಾರೆ.</p><p>ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಕ್ತ ಸಂವಾದದ ಮಹತ್ವವನ್ನು ಒತ್ತಿ ಹೇಳಿದ ಆದಿತ್ಯನಾಥ್, ಸದಸ್ಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಾಗ ಸದನದ ಸಭ್ಯತೆಯನ್ನು ಕಾಪಾಡಿಕೊಳ್ಳಬೇಕೆಂದು ಒತ್ತಾಯಿಸಿದರು .</p><p>ಇತ್ತೀಚೆಗೆ ಪ್ರಯಾಗ್ರಾಜ್ನಲ್ಲಿ 45 ದಿನಗಳ ಮಹಾಕುಂಭ ಮೇಳವು ಆಧ್ಯಾತ್ಮಿಕ, ಸಾಮಾಜಿಕ ಮತ್ತು ಆರ್ಥಿಕ ಪರಿಣಾಮದ ಸಂಕೇತವಾಗಿದೆ ಎಂದು ಆದಿತ್ಯನಾಥ್ ತಿಳಿಸಿದ್ದಾರೆ.</p>.ಇಲ್ಲಿಯವರೆಗೆ ಪರಿಪೂರ್ಣವಾದ ಆಟವನ್ನು ಆಡಿಲ್ಲ, ಫೈನಲ್ನಲ್ಲಿ ನಿರೀಕ್ಷೆ: ಗಂಭೀರ್.ಹಿಂದಿ ವಿರುದ್ಧ ಪ್ರತಿಜ್ಞೆ ಮಾಡುವಾಗ ಮಹಿಳೆಯ ಬಳೆ ಕದಿಯಲು ಯತ್ನಿಸಿದ DMK ನಾಯಕ?.ಮಣಿಪುರದಲ್ಲಿ 2 ಬಾರಿ ಕಂಪಿಸಿದ ಭೂಮಿ: ಹಲವು ಕಟ್ಟಡಗಳಲ್ಲಿ ಬಿರುಕು!.ನನ್ನ ಮಗ ನಕಾರಾತ್ಮಕ ಸ್ವಜನಪಕ್ಷಪಾತದ ಬಲಿಪಶು: ಅಮಿತಾಭ್ ಬಚ್ಚನ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>