<p><strong>ಗಂಡೈಕೊಂಡ ಚೋಳಪುರಂ:</strong> ‘ಭಾರತದ ಭದ್ರತೆ ಮತ್ತು ಸಾರ್ವಭೌಮತ್ವದ ಮೇಲೆ ದಾಳಿ ನಡೆಸಿದಲ್ಲಿ ದೇಶದ ಪ್ರತ್ಯುತ್ತರ ಹೇಗಿರುತ್ತದೆ ಎಂಬುದನ್ನು ‘ಆಪರೇಷನ್ ಸಿಂಧೂರ’ದ ಮೂಲಕ ಜಗತ್ತಿಗೆ ತೋರಿಸಿದ್ದೇವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು. </p>.<p>ಎರಡು ದಿನ ತಮಿಳುನಾಡು ಪ್ರವಾಸ ಆರಂಭಿಸಿರುವ ನರೇಂದ್ರ ಮೋದಿ ಅವರು, ಚೋಳ ಸಾಮ್ರಾಜ್ಯದ ರಾಜ ರಾಜೇಂದ್ರ ಚೋಳ–1 ಅವರ ಜನ್ಮದಿನದ ಗೌರವಾರ್ಥವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಭಾರತವನ್ನು ಗುರಿಯಾಗಿಸಿ ದಾಳಿ ನಡೆಸಿ ಸುರಕ್ಷಿತವಾಗಿ ಅಡಗಿ ಕೂರುವ ಜಾಗ ಈ ಭೂಮಿಯ ಮೇಲೆಯೇ ಇಲ್ಲ ಎಂಬುದನ್ನು ಈ ಕಾರ್ಯಾಚರಣೆಯು ಸಾಬೀತುಪಡಿಸಿದೆ ಎಂದರು.</p>.ಆಪರೇಷನ್ ಸಿಂಧೂರ ಮುಂದುವರಿದಿದೆ, ಮಿಲಿಟರಿ ಸದಾ ಸನ್ನದ್ಧವಾಗಿರಬೇಕು: ಸಿಡಿಎಸ್.<p>‘ಆಪರೇಷನ್ ಸಿಂಧೂರ ಕಾರ್ಯಾಚರಣೆಯು ದೇಶದಾದ್ಯಂತ ಹೊಸ ಆತ್ಮವಿಶ್ವಾಸವನ್ನು ನೀಡಿದೆ. ಇದರಿಂದ ಭಾರತದ ಸಾಮರ್ಥ್ಯವು ಜಗತ್ತಿನ ಎದುರು ಅನಾವರಣಗೊಂಡಿದೆ’ ಎಂದು ಅಭಿಪ್ರಾಯಪಟ್ಟರು.</p>.<p>ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಾ ಹಲವರು ಬ್ರಿಟನ್ನಿನ ‘ಮ್ಯಾಗ್ನಾ ಕಾರ್ಟಾ’ ವ್ಯವಸ್ಥೆಯನ್ನು ನೆನೆಯುತ್ತಾರೆ. ಆದರೆ ಚೋಳದ ಕಾಲದ ಕುದವೋಳೈ ವ್ಯವಸ್ಥೆಯು ‘ಮ್ಯಾಗ್ನಾ ಕಾರ್ಟಾ’ ವ್ಯವಸ್ಥೆಗೂ ಹಳೆಯದಾದದ್ದು ಎಂದು ಹೇಳಿದರು. </p>.<p>ಕುದವೋಳೈ ಎಂಬುದು ಚೋಳರ ಕಾಲ ಚುನಾವಣಾ ವ್ಯವಸ್ಥೆ.</p>.Operation Sindoor | ಭಯೋತ್ಪಾದನೆ ವಿರುದ್ಧದ ಭಾರತದ ಕಠಿಣ ನಿಲುವು ಸಾಬೀತು: ಮೋದಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಡೈಕೊಂಡ ಚೋಳಪುರಂ:</strong> ‘ಭಾರತದ ಭದ್ರತೆ ಮತ್ತು ಸಾರ್ವಭೌಮತ್ವದ ಮೇಲೆ ದಾಳಿ ನಡೆಸಿದಲ್ಲಿ ದೇಶದ ಪ್ರತ್ಯುತ್ತರ ಹೇಗಿರುತ್ತದೆ ಎಂಬುದನ್ನು ‘ಆಪರೇಷನ್ ಸಿಂಧೂರ’ದ ಮೂಲಕ ಜಗತ್ತಿಗೆ ತೋರಿಸಿದ್ದೇವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು. </p>.<p>ಎರಡು ದಿನ ತಮಿಳುನಾಡು ಪ್ರವಾಸ ಆರಂಭಿಸಿರುವ ನರೇಂದ್ರ ಮೋದಿ ಅವರು, ಚೋಳ ಸಾಮ್ರಾಜ್ಯದ ರಾಜ ರಾಜೇಂದ್ರ ಚೋಳ–1 ಅವರ ಜನ್ಮದಿನದ ಗೌರವಾರ್ಥವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಭಾರತವನ್ನು ಗುರಿಯಾಗಿಸಿ ದಾಳಿ ನಡೆಸಿ ಸುರಕ್ಷಿತವಾಗಿ ಅಡಗಿ ಕೂರುವ ಜಾಗ ಈ ಭೂಮಿಯ ಮೇಲೆಯೇ ಇಲ್ಲ ಎಂಬುದನ್ನು ಈ ಕಾರ್ಯಾಚರಣೆಯು ಸಾಬೀತುಪಡಿಸಿದೆ ಎಂದರು.</p>.ಆಪರೇಷನ್ ಸಿಂಧೂರ ಮುಂದುವರಿದಿದೆ, ಮಿಲಿಟರಿ ಸದಾ ಸನ್ನದ್ಧವಾಗಿರಬೇಕು: ಸಿಡಿಎಸ್.<p>‘ಆಪರೇಷನ್ ಸಿಂಧೂರ ಕಾರ್ಯಾಚರಣೆಯು ದೇಶದಾದ್ಯಂತ ಹೊಸ ಆತ್ಮವಿಶ್ವಾಸವನ್ನು ನೀಡಿದೆ. ಇದರಿಂದ ಭಾರತದ ಸಾಮರ್ಥ್ಯವು ಜಗತ್ತಿನ ಎದುರು ಅನಾವರಣಗೊಂಡಿದೆ’ ಎಂದು ಅಭಿಪ್ರಾಯಪಟ್ಟರು.</p>.<p>ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಾ ಹಲವರು ಬ್ರಿಟನ್ನಿನ ‘ಮ್ಯಾಗ್ನಾ ಕಾರ್ಟಾ’ ವ್ಯವಸ್ಥೆಯನ್ನು ನೆನೆಯುತ್ತಾರೆ. ಆದರೆ ಚೋಳದ ಕಾಲದ ಕುದವೋಳೈ ವ್ಯವಸ್ಥೆಯು ‘ಮ್ಯಾಗ್ನಾ ಕಾರ್ಟಾ’ ವ್ಯವಸ್ಥೆಗೂ ಹಳೆಯದಾದದ್ದು ಎಂದು ಹೇಳಿದರು. </p>.<p>ಕುದವೋಳೈ ಎಂಬುದು ಚೋಳರ ಕಾಲ ಚುನಾವಣಾ ವ್ಯವಸ್ಥೆ.</p>.Operation Sindoor | ಭಯೋತ್ಪಾದನೆ ವಿರುದ್ಧದ ಭಾರತದ ಕಠಿಣ ನಿಲುವು ಸಾಬೀತು: ಮೋದಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>