<p><strong>ನವದೆಹಲಿ</strong>: 'ಶಾಂತಿ' ಎನ್ನುವುದು ಕೇವಲ ಭ್ರಮೆ ಮಾತ್ರವೇ. ಏಕೆಂದರೆ ಭಾರತವು ಶಾಂತಿಯನ್ನು ಪರಿಪಾಲನೆ ಮಾಡಿದರೂ ಅನಿಶ್ಚಿತತೆಯ ಸಮಯದಲ್ಲಿ ಎಲ್ಲದಕ್ಕೂ ಸಿದ್ಧವಾಗಿರಬೇಕು ಎಂದ ರಕ್ಷಣಾ ಸಚಿವ ರಾಜನಾಥ ಸಿಂಗ್, ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಸಶಸ್ತ್ರ ಪಡೆಗಳು ಪ್ರದರ್ಶಿಸಿದ ಶೌರ್ಯವನ್ನು ಶ್ಲಾಘಿಸಿದ್ದಾರೆ.</p><p>ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ದೇಶಿಯವಾಗಿ ನಿರ್ಮಿಸಲಾದ ಉಪಕರಣಗಳ ಕಾರ್ಯಕ್ಷಮತೆಯಿಂದಾಗಿ ಭಾರತ ನಿರ್ಮಿತ ಮಿಲಿಟರಿ ಉತ್ಪನ್ನಗಳಿಗೆ ಜಾಗತಿಕವಾಗಿ ಬೇಡಿಕೆ ಹೆಚ್ಚಾಗಿದೆ ಎಂದರು.</p>.ಟೆಸ್ಟ್ ಕ್ರಿಕೆಟ್: 400 ರನ್ ಹೊಡೆದಿದ್ದ ಲಾರಾ ದಾಖಲೆಗೆ ಬಂತಾ ಕುತ್ತು?.ರೈಲು ನಿಲ್ದಾಣದಲ್ಲಿ ಹೆರಿಗೆ ಮಾಡಿಸಿದ್ದ ಮೇಜರ್ಗೆ ಸೇನೆಯ ಜನರಲ್ ಮೆಚ್ಚುಗೆ. <p>ಜಗತ್ತು ನಮ್ಮ ರಕ್ಷಣಾ ವಲಯದತ್ತ ನೋಡುತ್ತಿದೆ. ನಾವು ಆಮದು ಮಾಡಿಕೊಳ್ಳುತ್ತಿದ್ದ ಹೆಚ್ಚಿನ ಉಪಕರಣಗಳು ಈಗ ಭಾರತದಲ್ಲಿಯೇ ತಯಾರಾಗುತ್ತಿವೆ. ಬದ್ಧತೆಯಿಂದಾಗಿ ನಮ್ಮ ಸುಧಾರಣೆಗಳು ಯಶಸ್ವಿಯಾಗುತ್ತಿವೆ ಎಂದು ಸಿಂಗ್ ಹೇಳಿದ್ದಾರೆ.</p><p>ರಕ್ಷಣಾ ಸಚಿವರು ಡಿಎಡಿಯ ಹೊಸ ಧ್ಯೇಯವಾಕ್ಯ ಎಚ್ಚರ, ಚುರುಕು, ಹೊಂದಿಕೊಳ್ಳುವಿಕೆಯನ್ನು ಶ್ಲಾಘಿಸಿದರು. ಇವು ಕೇವಲ ಪದಗಳಲ್ಲ, ವೇಗವಾಗಿ ಅಭಿವೃದ್ಧಿ ಹೊಂದಿರುವ ರಕ್ಷಣಾ ವ್ಯವಸ್ಥೆಗೆ ಹೊಂದಿಕೊಂಡು ಕಾರ್ಯನಿರ್ವಹಿಸುವುದು ಅಗತ್ಯವಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.</p>.ನಾಗಾಲ್ಯಾಂಡ್ನಲ್ಲಿ ಭಾರಿ ಮಳೆ: ಮೂವರು ಸಾವು, ವಿಮಾನ ಹಾರಾಟ ಸ್ಥಗಿತ.ಬಿಹಾರ ವಿಧಾನಸಭಾ ಚುನಾವಣೆ: RJDಗೆ ಸಮಾಜವಾದಿ ಪಕ್ಷ ಸಂಪೂರ್ಣ ಬೆಂಬಲ; ಅಖಿಲೇಶ್ . <p>'ಶಾಂತಿ' ಸಮಯ ಎನ್ನುವುದು ಕೇವಲ ಭ್ರಮೆ ಅಷ್ಟೇ. ಶಾಂತಿಯನ್ನು ಪರಿಪಾಲನೆ ಮಾಡಿದರೂ ಕೆಲವು ಸಂದರ್ಭಗಳಲ್ಲಿ ನಾವು ಅನಿಶ್ಚಿತತೆಯ ಸಮಯಕ್ಕೂ ಸಿದ್ಧರಾಗಿರಬೇಕು. ಹಠಾತ್ ಬೆಳವಣಿಗೆಗಳು ಕಾರ್ಯಾಚರಣೆಯಲ್ಲಿ ಸಂಪೂರ್ಣ ಬದಲಾವಣೆಯನ್ನು ತರಬಹುದು ಎಂದು ಸಿಂಗ್ ಹೇಳಿದ್ದಾರೆ.</p><p>ರಕ್ಷಣಾ ಕ್ಷೇತ್ರದ ಹೆಚ್ಚುತ್ತಿರುವ ಕಾರ್ಯತಂತ್ರ ಮತ್ತು ಆರ್ಥಿಕತೆಯಿಂದಾಗಿ ರಕ್ಷಣಾ ವೆಚ್ಚವನ್ನು ಕೇವಲ ಖರ್ಚು ಎಂಬ ಗ್ರಹಿಕೆಯಿಂದ ಹೂಡಿಕೆಯತ್ತ ಬದಲಾಯಿಸಬೇಕೆಂದು ಸಿಂಗ್ ತಿಳಿಸಿದ್ದಾರೆ.</p>.ಭಯೋತ್ಪಾದನೆಯ ಪೋಷಕರು, ಸಂತ್ರಸ್ತರನ್ನು ಒಂದೇ ತಕ್ಕಡಿಯಲ್ಲಿ ತೂಗಲು ಆಗದು: ಮೋದಿ.ಮತದಾರರ ಪಟ್ಟಿ ಪರಿಷ್ಕರಣೆ: ಚು. ಆಯೋಗದ ವಿರುದ್ಧದ ಅರ್ಜಿಗಳ ವಿಚಾರಣೆಗೆ SC ಸಮ್ಮತಿ.ನೆಲಮಂಗಲ | ಮಾಜಿ ಪ್ರೇಯಸಿಗೆ ಅಶ್ಲೀಲ ಸಂದೇಶ: ಯುವಕನನ್ನು ವಿವಸ್ತ್ರಗೊಳಿಸಿ ಹಲ್ಲೆ.ಮಂತ್ರಾಲಯ, ಆಂಜನೇಯ ಸ್ವಾಮಿ ದರ್ಶನ ಪಡೆದ ಯುವ ರಾಜ್ಕುಮಾರ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: 'ಶಾಂತಿ' ಎನ್ನುವುದು ಕೇವಲ ಭ್ರಮೆ ಮಾತ್ರವೇ. ಏಕೆಂದರೆ ಭಾರತವು ಶಾಂತಿಯನ್ನು ಪರಿಪಾಲನೆ ಮಾಡಿದರೂ ಅನಿಶ್ಚಿತತೆಯ ಸಮಯದಲ್ಲಿ ಎಲ್ಲದಕ್ಕೂ ಸಿದ್ಧವಾಗಿರಬೇಕು ಎಂದ ರಕ್ಷಣಾ ಸಚಿವ ರಾಜನಾಥ ಸಿಂಗ್, ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಸಶಸ್ತ್ರ ಪಡೆಗಳು ಪ್ರದರ್ಶಿಸಿದ ಶೌರ್ಯವನ್ನು ಶ್ಲಾಘಿಸಿದ್ದಾರೆ.</p><p>ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ದೇಶಿಯವಾಗಿ ನಿರ್ಮಿಸಲಾದ ಉಪಕರಣಗಳ ಕಾರ್ಯಕ್ಷಮತೆಯಿಂದಾಗಿ ಭಾರತ ನಿರ್ಮಿತ ಮಿಲಿಟರಿ ಉತ್ಪನ್ನಗಳಿಗೆ ಜಾಗತಿಕವಾಗಿ ಬೇಡಿಕೆ ಹೆಚ್ಚಾಗಿದೆ ಎಂದರು.</p>.ಟೆಸ್ಟ್ ಕ್ರಿಕೆಟ್: 400 ರನ್ ಹೊಡೆದಿದ್ದ ಲಾರಾ ದಾಖಲೆಗೆ ಬಂತಾ ಕುತ್ತು?.ರೈಲು ನಿಲ್ದಾಣದಲ್ಲಿ ಹೆರಿಗೆ ಮಾಡಿಸಿದ್ದ ಮೇಜರ್ಗೆ ಸೇನೆಯ ಜನರಲ್ ಮೆಚ್ಚುಗೆ. <p>ಜಗತ್ತು ನಮ್ಮ ರಕ್ಷಣಾ ವಲಯದತ್ತ ನೋಡುತ್ತಿದೆ. ನಾವು ಆಮದು ಮಾಡಿಕೊಳ್ಳುತ್ತಿದ್ದ ಹೆಚ್ಚಿನ ಉಪಕರಣಗಳು ಈಗ ಭಾರತದಲ್ಲಿಯೇ ತಯಾರಾಗುತ್ತಿವೆ. ಬದ್ಧತೆಯಿಂದಾಗಿ ನಮ್ಮ ಸುಧಾರಣೆಗಳು ಯಶಸ್ವಿಯಾಗುತ್ತಿವೆ ಎಂದು ಸಿಂಗ್ ಹೇಳಿದ್ದಾರೆ.</p><p>ರಕ್ಷಣಾ ಸಚಿವರು ಡಿಎಡಿಯ ಹೊಸ ಧ್ಯೇಯವಾಕ್ಯ ಎಚ್ಚರ, ಚುರುಕು, ಹೊಂದಿಕೊಳ್ಳುವಿಕೆಯನ್ನು ಶ್ಲಾಘಿಸಿದರು. ಇವು ಕೇವಲ ಪದಗಳಲ್ಲ, ವೇಗವಾಗಿ ಅಭಿವೃದ್ಧಿ ಹೊಂದಿರುವ ರಕ್ಷಣಾ ವ್ಯವಸ್ಥೆಗೆ ಹೊಂದಿಕೊಂಡು ಕಾರ್ಯನಿರ್ವಹಿಸುವುದು ಅಗತ್ಯವಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.</p>.ನಾಗಾಲ್ಯಾಂಡ್ನಲ್ಲಿ ಭಾರಿ ಮಳೆ: ಮೂವರು ಸಾವು, ವಿಮಾನ ಹಾರಾಟ ಸ್ಥಗಿತ.ಬಿಹಾರ ವಿಧಾನಸಭಾ ಚುನಾವಣೆ: RJDಗೆ ಸಮಾಜವಾದಿ ಪಕ್ಷ ಸಂಪೂರ್ಣ ಬೆಂಬಲ; ಅಖಿಲೇಶ್ . <p>'ಶಾಂತಿ' ಸಮಯ ಎನ್ನುವುದು ಕೇವಲ ಭ್ರಮೆ ಅಷ್ಟೇ. ಶಾಂತಿಯನ್ನು ಪರಿಪಾಲನೆ ಮಾಡಿದರೂ ಕೆಲವು ಸಂದರ್ಭಗಳಲ್ಲಿ ನಾವು ಅನಿಶ್ಚಿತತೆಯ ಸಮಯಕ್ಕೂ ಸಿದ್ಧರಾಗಿರಬೇಕು. ಹಠಾತ್ ಬೆಳವಣಿಗೆಗಳು ಕಾರ್ಯಾಚರಣೆಯಲ್ಲಿ ಸಂಪೂರ್ಣ ಬದಲಾವಣೆಯನ್ನು ತರಬಹುದು ಎಂದು ಸಿಂಗ್ ಹೇಳಿದ್ದಾರೆ.</p><p>ರಕ್ಷಣಾ ಕ್ಷೇತ್ರದ ಹೆಚ್ಚುತ್ತಿರುವ ಕಾರ್ಯತಂತ್ರ ಮತ್ತು ಆರ್ಥಿಕತೆಯಿಂದಾಗಿ ರಕ್ಷಣಾ ವೆಚ್ಚವನ್ನು ಕೇವಲ ಖರ್ಚು ಎಂಬ ಗ್ರಹಿಕೆಯಿಂದ ಹೂಡಿಕೆಯತ್ತ ಬದಲಾಯಿಸಬೇಕೆಂದು ಸಿಂಗ್ ತಿಳಿಸಿದ್ದಾರೆ.</p>.ಭಯೋತ್ಪಾದನೆಯ ಪೋಷಕರು, ಸಂತ್ರಸ್ತರನ್ನು ಒಂದೇ ತಕ್ಕಡಿಯಲ್ಲಿ ತೂಗಲು ಆಗದು: ಮೋದಿ.ಮತದಾರರ ಪಟ್ಟಿ ಪರಿಷ್ಕರಣೆ: ಚು. ಆಯೋಗದ ವಿರುದ್ಧದ ಅರ್ಜಿಗಳ ವಿಚಾರಣೆಗೆ SC ಸಮ್ಮತಿ.ನೆಲಮಂಗಲ | ಮಾಜಿ ಪ್ರೇಯಸಿಗೆ ಅಶ್ಲೀಲ ಸಂದೇಶ: ಯುವಕನನ್ನು ವಿವಸ್ತ್ರಗೊಳಿಸಿ ಹಲ್ಲೆ.ಮಂತ್ರಾಲಯ, ಆಂಜನೇಯ ಸ್ವಾಮಿ ದರ್ಶನ ಪಡೆದ ಯುವ ರಾಜ್ಕುಮಾರ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>