<p><strong>ಜಬಲ್ಪುರ</strong>: ಪಹಲ್ಗಾಮ್ನಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಗೆ ಪ್ರತಿಯಾಗಿ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಕ್ಕಾಗಿ ಇಡೀ ದೇಶ, ಸೇನೆ ಹಾಗೂ ಯೋಧರು ಪ್ರಧಾನಿ ನರೇಂದ್ರ ಮೋದಿ ಅವರು ಪಾದಗಳಿಗೆ ನಮಸ್ಕರಿಸಿದ್ದಾರೆ ಎಂದು ಮಧ್ಯಪ್ರದೇಶ ಉಪ ಮುಖ್ಯಮಂತ್ರಿ ಜಗದೀಶ್ ದೇವಡಾ ಶುಕ್ರವಾರ ಹೇಳಿದ್ದಾರೆ.</p><p>ನಾಗರಿಕ ರಕ್ಷಣಾ ಸ್ವಯಂಸೇವಕರ ಸಮಾರಂಭದಲ್ಲಿ ದೇವಡಾ ಈ ಹೇಳಿಕೆ ನೀಡಿದ್ದಾರೆ.</p><p>ಮಧ್ಯಪ್ರದೇಶದ ಹಣಕಾಸು ಸಚಿವರೂ ಆಗಿರುವ ದೇವಡಾ, 'ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇವೆ. ಅವರ ಪಾದಕ್ಕೆ ಇಡೀ ದೇಶ, ಅದರ ಸೇನೆ ಹಾಗೂ ಯೋಧರು ಶಿರಭಾಗಿ ನಮಸ್ಕರಿಸಿದ್ದಾರೆ. ಇಡೀ ದೇಶವೇ ಅವರ ಪಾದಗಳಿಗೆ ನಮಿಸಿದೆ' ಎಂದು ಹೇಳಿದ್ದಾರೆ.</p><p>'ಆಪರೇಷನ್ ಸಿಂಧೂರ' ಮೂಲಕ ಪಾಕಿಸ್ತಾನಕ್ಕೆ ನೀಡಿರುವ ಪ್ರತಿಕ್ರಿಯೆಯನ್ನು ಶ್ಲಾಘಿಸಲು ಪದಗಳೇ ಸಾಲವು ಎಂದಿರುವ ದೇವಡಾ, 'ಮೋದಿ ಅವರಿಗೆ ದೊಡ್ಡ ಚಪ್ಪಾಳೆ ನೀಡೋಣ' ಎಂದಿದ್ದಾರೆ.</p><p>ಪಹಲ್ಗಾಮ್ ದಾಳಿ ಬಳಿಕ ಜನರು ಭಾರಿ ಆಕ್ರೋಶಗೊಂಡಿದ್ದರು. ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದನಾ ನೆಲೆಗಳನ್ನು ಗುರಿಯಾಗಿಸಿ 'ಆಪರೇಷನ್ ಸಿಂಧೂರ' ನಡೆಯುವವರೆಗೆ ದೇಶದ ಪ್ರತಿಯೊಬ್ಬರೂ ಸಂಕಟ ಅನುಭವಿಸಿದ್ದರು ಎಂದಿದ್ದಾರೆ.</p><p>ಜಮ್ಮು ಮತ್ತು ಕಾಶ್ಮಿರದ ಅನಂತನಾಗ್ ಜಿಲ್ಲೆಯ ಪ್ರವಾಸಿ ತಾಣ ಪಹಲ್ಗಾಮ್ನಲ್ಲಿ ಉಗ್ರರು ಏಪ್ರಿಲ್ 22ರಂದು ಗುಂಡಿನ ದಾಳಿ ನಡೆಸಿದ್ದರು. 26 ಜನರು ಹತ್ಯೆಯಾಗಿ, ಹಲವರು ಗಾಯಗೊಂಡಿದ್ದರು.</p><p>ಎರಡು ವಾರದ ನಂತರ 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ನಡೆಸಿದ್ದ ಭಾರತೀಯ ಸೇನೆ, ಉಗ್ರರ ಕೆಲವು ನೆಲೆಗಳು ಹಾಗೂ ನೂರಾರು ಭಯೋತ್ಪಾದಕರನ್ನ ಹತ್ಯೆಗೈದಿತ್ತು.</p>.ಭಾರತದಲ್ಲಿ ಏಷ್ಯಾಕಪ್ ಹಾಕಿ: ಪಹಲ್ಗಾಮ್ ದಾಳಿಯ ಪರಿಣಾಮ; ಪಾಕ್ ತಂಡ ಅನುಮಾನ.Operation Sindoor | ಭದ್ರತಾ ಸ್ಥಿತಿ: ಸಂಪುಟ ಸಮಿತಿ ಪರಾಮರ್ಶೆ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಬಲ್ಪುರ</strong>: ಪಹಲ್ಗಾಮ್ನಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಗೆ ಪ್ರತಿಯಾಗಿ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಕ್ಕಾಗಿ ಇಡೀ ದೇಶ, ಸೇನೆ ಹಾಗೂ ಯೋಧರು ಪ್ರಧಾನಿ ನರೇಂದ್ರ ಮೋದಿ ಅವರು ಪಾದಗಳಿಗೆ ನಮಸ್ಕರಿಸಿದ್ದಾರೆ ಎಂದು ಮಧ್ಯಪ್ರದೇಶ ಉಪ ಮುಖ್ಯಮಂತ್ರಿ ಜಗದೀಶ್ ದೇವಡಾ ಶುಕ್ರವಾರ ಹೇಳಿದ್ದಾರೆ.</p><p>ನಾಗರಿಕ ರಕ್ಷಣಾ ಸ್ವಯಂಸೇವಕರ ಸಮಾರಂಭದಲ್ಲಿ ದೇವಡಾ ಈ ಹೇಳಿಕೆ ನೀಡಿದ್ದಾರೆ.</p><p>ಮಧ್ಯಪ್ರದೇಶದ ಹಣಕಾಸು ಸಚಿವರೂ ಆಗಿರುವ ದೇವಡಾ, 'ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇವೆ. ಅವರ ಪಾದಕ್ಕೆ ಇಡೀ ದೇಶ, ಅದರ ಸೇನೆ ಹಾಗೂ ಯೋಧರು ಶಿರಭಾಗಿ ನಮಸ್ಕರಿಸಿದ್ದಾರೆ. ಇಡೀ ದೇಶವೇ ಅವರ ಪಾದಗಳಿಗೆ ನಮಿಸಿದೆ' ಎಂದು ಹೇಳಿದ್ದಾರೆ.</p><p>'ಆಪರೇಷನ್ ಸಿಂಧೂರ' ಮೂಲಕ ಪಾಕಿಸ್ತಾನಕ್ಕೆ ನೀಡಿರುವ ಪ್ರತಿಕ್ರಿಯೆಯನ್ನು ಶ್ಲಾಘಿಸಲು ಪದಗಳೇ ಸಾಲವು ಎಂದಿರುವ ದೇವಡಾ, 'ಮೋದಿ ಅವರಿಗೆ ದೊಡ್ಡ ಚಪ್ಪಾಳೆ ನೀಡೋಣ' ಎಂದಿದ್ದಾರೆ.</p><p>ಪಹಲ್ಗಾಮ್ ದಾಳಿ ಬಳಿಕ ಜನರು ಭಾರಿ ಆಕ್ರೋಶಗೊಂಡಿದ್ದರು. ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದನಾ ನೆಲೆಗಳನ್ನು ಗುರಿಯಾಗಿಸಿ 'ಆಪರೇಷನ್ ಸಿಂಧೂರ' ನಡೆಯುವವರೆಗೆ ದೇಶದ ಪ್ರತಿಯೊಬ್ಬರೂ ಸಂಕಟ ಅನುಭವಿಸಿದ್ದರು ಎಂದಿದ್ದಾರೆ.</p><p>ಜಮ್ಮು ಮತ್ತು ಕಾಶ್ಮಿರದ ಅನಂತನಾಗ್ ಜಿಲ್ಲೆಯ ಪ್ರವಾಸಿ ತಾಣ ಪಹಲ್ಗಾಮ್ನಲ್ಲಿ ಉಗ್ರರು ಏಪ್ರಿಲ್ 22ರಂದು ಗುಂಡಿನ ದಾಳಿ ನಡೆಸಿದ್ದರು. 26 ಜನರು ಹತ್ಯೆಯಾಗಿ, ಹಲವರು ಗಾಯಗೊಂಡಿದ್ದರು.</p><p>ಎರಡು ವಾರದ ನಂತರ 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ನಡೆಸಿದ್ದ ಭಾರತೀಯ ಸೇನೆ, ಉಗ್ರರ ಕೆಲವು ನೆಲೆಗಳು ಹಾಗೂ ನೂರಾರು ಭಯೋತ್ಪಾದಕರನ್ನ ಹತ್ಯೆಗೈದಿತ್ತು.</p>.ಭಾರತದಲ್ಲಿ ಏಷ್ಯಾಕಪ್ ಹಾಕಿ: ಪಹಲ್ಗಾಮ್ ದಾಳಿಯ ಪರಿಣಾಮ; ಪಾಕ್ ತಂಡ ಅನುಮಾನ.Operation Sindoor | ಭದ್ರತಾ ಸ್ಥಿತಿ: ಸಂಪುಟ ಸಮಿತಿ ಪರಾಮರ್ಶೆ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>