<p class="title">ಕೊಚ್ಚಿ, ಕೇರಳ (ಪಿಟಿಐ): ಅಂಗಾಂಗ ಕಸಿಗಾಗಿ ಜನರನ್ನು ಇರಾನ್ಗೆ ಕಳ್ಳಸಾಗಣೆ ಮಾಡಿದ ಪ್ರಮುಖ ಆರೋಪಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬಂಧಿಸಿದೆ.</p>.<p class="title">‘ನವೆಂಬರ್ 8ರಂದು ಇರಾನ್ನಿಂದ ಕೊಚ್ಚಿಗೆ ಬಂದಿಳಿದ ಎರ್ನಾಕುಲಂ ಮೂಲದ ಮಧು ಜಯಕುಮಾರ್ ಅವರನ್ನು ಬಂಧಿಸಲಾಯಿತು’ ಎಂದು ಮೂಲಗಳು ತಿಳಿಸಿವೆ. </p>.<p class="title">ಮಧು ಅವರನ್ನು ನ.12ರಂದು ಕೊಚ್ಚಿಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಲಯವು, ನ.19ರವರೆಗೆ ಎನ್ಐಎ ಕಸ್ಟಡಿಗೆ ಒಪ್ಪಿಸಿದೆ. </p>.<p class="title">ಆತನನ್ನು ವಶಕ್ಕೆ ಪಡೆದಿರುವ ಎನ್ಐಎ ಅಧಿಕಾರಿಗಳು ಕೊಚ್ಚಿಯ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಿದ್ದಾರೆ.</p>.<p class="title">ಅಂಗಾಂಗ ಕಳ್ಳಸಾಗಣೆ ಜಾಲದಲ್ಲಿ ಭಾಗಿಯಾದ ಶಂಕೆ ಆಧರಿಸಿ ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2024ರ ಮೇ 18ರಂದು ಯುವಕನೊಬ್ಬನನ್ನು ಬಂಧಿಸಲಾಗಿತ್ತು. ಆರಂಭದಲ್ಲಿ ಎರ್ನಾಕುಲಂನ ಗ್ರಾಮೀಣ ಪೊಲೀಸರೇ ವಿಚಾರಣೆ ನಡೆಸಿದ್ದರು. ಬಳಿಕ ಈ ಪ್ರಕರಣವನ್ನು ಎನ್ಐಎಗೆ ವಹಿಸಲಾಗಿತ್ತು. </p>.<p class="title">ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬದ ಸದಸ್ಯರನ್ನು ಪತ್ತೆಹಚ್ಚುತ್ತಿದ್ದ ಆರೋಪಿಯು, ಕಾನೂನುಬದ್ಧ ಅಂಗಾಂಗ ದಾನದ ಆಮಿಷವೊಡ್ಡಿ ಇರಾನ್ಗೆ ಕರೆದೊಯ್ಯುತ್ತಿದ್ದ. ಅವರನ್ನು ಅಲ್ಲಿಗೆ ಕರೆದೊಯ್ದು, ಇರಾನ್ನ ಆಸ್ಪತ್ರೆಗಳಲ್ಲಿ ಅಗತ್ಯಬಿದ್ದವರಿಗೆ ಅಂಗಾಂಗ ಕಸಿ ಮಾಡಿಸುತ್ತಿದ್ದ. </p>.<p class="title">ಈ ಅಕ್ರಮವನ್ನು ಪತ್ತೆಹಚ್ಚಿದ ಎನ್ಐಎ ಕಳೆದ ವರ್ಷ ಮಧು, ಸಬಿತ್ ಹಾಗೂ ಸಜಿತ್ ಶ್ಯಾಮ್ ಹಾಗೂ ಬೆಲ್ಲಂಕೊಂಡ ರಾಮ್ಪ್ರಸಾದ್ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿತ್ತು. 2025ರ ಫೆಬ್ರುವರಿ ತಿಂಗಳಲ್ಲಿ ಇರಾನ್ನ ನೆಲಸಿದ್ದ ಮಧು ವಿರುದ್ಧ ಇಂಟರ್ಪೋಲ್ ರೆಡ್ಕಾರ್ನರ್ ನೋಟಿಸ್ ಜಾರಿ ಮಾಡಿತ್ತು. </p>.<p class="title">ಮಧು ಬಂಧನದಿಂದ ಅಂಗಾಂಗ ಕಸಿಗಾಗಿ ಜನರ ಕಳ್ಳಸಾಗಣೆ ಮಾಡಿದ್ದ ಪ್ರಮುಖ ಆರೋಪಿ ಸಿಕ್ಕಿದಂತಾಗಿದೆ. ಈತನೇ ಇರಾನ್ನಲ್ಲಿರುವ ಆಸ್ಪತ್ರೆಗಳ ನಡುವೆ ಸಮನ್ವಯ ಸಾಧಿಸಿದ್ದ’ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title">ಕೊಚ್ಚಿ, ಕೇರಳ (ಪಿಟಿಐ): ಅಂಗಾಂಗ ಕಸಿಗಾಗಿ ಜನರನ್ನು ಇರಾನ್ಗೆ ಕಳ್ಳಸಾಗಣೆ ಮಾಡಿದ ಪ್ರಮುಖ ಆರೋಪಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬಂಧಿಸಿದೆ.</p>.<p class="title">‘ನವೆಂಬರ್ 8ರಂದು ಇರಾನ್ನಿಂದ ಕೊಚ್ಚಿಗೆ ಬಂದಿಳಿದ ಎರ್ನಾಕುಲಂ ಮೂಲದ ಮಧು ಜಯಕುಮಾರ್ ಅವರನ್ನು ಬಂಧಿಸಲಾಯಿತು’ ಎಂದು ಮೂಲಗಳು ತಿಳಿಸಿವೆ. </p>.<p class="title">ಮಧು ಅವರನ್ನು ನ.12ರಂದು ಕೊಚ್ಚಿಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಲಯವು, ನ.19ರವರೆಗೆ ಎನ್ಐಎ ಕಸ್ಟಡಿಗೆ ಒಪ್ಪಿಸಿದೆ. </p>.<p class="title">ಆತನನ್ನು ವಶಕ್ಕೆ ಪಡೆದಿರುವ ಎನ್ಐಎ ಅಧಿಕಾರಿಗಳು ಕೊಚ್ಚಿಯ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಿದ್ದಾರೆ.</p>.<p class="title">ಅಂಗಾಂಗ ಕಳ್ಳಸಾಗಣೆ ಜಾಲದಲ್ಲಿ ಭಾಗಿಯಾದ ಶಂಕೆ ಆಧರಿಸಿ ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2024ರ ಮೇ 18ರಂದು ಯುವಕನೊಬ್ಬನನ್ನು ಬಂಧಿಸಲಾಗಿತ್ತು. ಆರಂಭದಲ್ಲಿ ಎರ್ನಾಕುಲಂನ ಗ್ರಾಮೀಣ ಪೊಲೀಸರೇ ವಿಚಾರಣೆ ನಡೆಸಿದ್ದರು. ಬಳಿಕ ಈ ಪ್ರಕರಣವನ್ನು ಎನ್ಐಎಗೆ ವಹಿಸಲಾಗಿತ್ತು. </p>.<p class="title">ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬದ ಸದಸ್ಯರನ್ನು ಪತ್ತೆಹಚ್ಚುತ್ತಿದ್ದ ಆರೋಪಿಯು, ಕಾನೂನುಬದ್ಧ ಅಂಗಾಂಗ ದಾನದ ಆಮಿಷವೊಡ್ಡಿ ಇರಾನ್ಗೆ ಕರೆದೊಯ್ಯುತ್ತಿದ್ದ. ಅವರನ್ನು ಅಲ್ಲಿಗೆ ಕರೆದೊಯ್ದು, ಇರಾನ್ನ ಆಸ್ಪತ್ರೆಗಳಲ್ಲಿ ಅಗತ್ಯಬಿದ್ದವರಿಗೆ ಅಂಗಾಂಗ ಕಸಿ ಮಾಡಿಸುತ್ತಿದ್ದ. </p>.<p class="title">ಈ ಅಕ್ರಮವನ್ನು ಪತ್ತೆಹಚ್ಚಿದ ಎನ್ಐಎ ಕಳೆದ ವರ್ಷ ಮಧು, ಸಬಿತ್ ಹಾಗೂ ಸಜಿತ್ ಶ್ಯಾಮ್ ಹಾಗೂ ಬೆಲ್ಲಂಕೊಂಡ ರಾಮ್ಪ್ರಸಾದ್ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿತ್ತು. 2025ರ ಫೆಬ್ರುವರಿ ತಿಂಗಳಲ್ಲಿ ಇರಾನ್ನ ನೆಲಸಿದ್ದ ಮಧು ವಿರುದ್ಧ ಇಂಟರ್ಪೋಲ್ ರೆಡ್ಕಾರ್ನರ್ ನೋಟಿಸ್ ಜಾರಿ ಮಾಡಿತ್ತು. </p>.<p class="title">ಮಧು ಬಂಧನದಿಂದ ಅಂಗಾಂಗ ಕಸಿಗಾಗಿ ಜನರ ಕಳ್ಳಸಾಗಣೆ ಮಾಡಿದ್ದ ಪ್ರಮುಖ ಆರೋಪಿ ಸಿಕ್ಕಿದಂತಾಗಿದೆ. ಈತನೇ ಇರಾನ್ನಲ್ಲಿರುವ ಆಸ್ಪತ್ರೆಗಳ ನಡುವೆ ಸಮನ್ವಯ ಸಾಧಿಸಿದ್ದ’ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>