<p><strong>ನವದೆಹಲಿ</strong>: ಎರಡು ದಿನಗಳ ಕಸ್ಟಡಿ ಪೆರೋಲ್ ಮೇಲೆ ಹೊರಬಂದಿರುವ ಸಂಸದ ಎಂಜಿನಿಯರ್ ರಶೀದ್(ಶೇಕ್ ಅಬ್ದುಲ್ ರಶೀದ್), ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರಿಕರ ಸಾವಿನ ಬಗ್ಗೆ ಸಂಪೂರ್ಣ ತನಿಖೆ ನಡೆಸುವಂತೆ ಸಂಸತ್ನಲ್ಲಿ ಒತ್ತಾಯಿಸಿದರು.</p><p>ಶೂನ್ಯ ವೇಳೆಯಲ್ಲಿ ಮಾತನಾಡಿದ ಅವರು, ‘ನಮ್ಮ ರಕ್ತ ಅಗ್ಗವಾಗಿಲ್ಲ’ ಎಂದರು.</p><p>‘ಇತ್ತೀಚೆಗೆ ವಾಸಿಂ ಅಹಮ್ಮದ್ ಮಿರ್ ಮತ್ತು ಕಖಾನ್ ದಿನ್ ಎಂಬ ವ್ಯಕ್ತಿಗಳಿಬ್ಬರು ಭದ್ರತಾ ಪಡೆಗಳಿಂದ ಹತರಾಗಿರುವ ಆರೋಪವಿದೆ. ಇದರ ಬಗ್ಗೆ ತನಿಖೆ ನಡೆಸಬೇಕು’ ಎಂದು ಹೇಳಿದರು.</p><p>ಇದೇ ವೇಳೆ ಸುಮಾರು ಆರು ತಿಂಗಳಿಂದ ದೇಶದ ಇತರ ಭಾಗಗಳೊಂದಿಗೆ ಸಂಪರ್ಕ ಕಳೆದುಕೊಂಡಿರುವ ಕುಪ್ವಾರದ ದೂರದ ಪ್ರದೇಶಗಳಿಗೆ ಸುರಂಗ ಮಾರ್ಗ ನಿರ್ಮಿಸುವಂತೆಯೂ ಆಗ್ರಹಿಸಿದರು.</p><p>ಬಾರಾಮುಲ್ಲಾ ಕ್ಷೇತ್ರದ ಸಂಸದರಾಗಿರುವ ರಶೀದ್ ಅವರು, ಭಯೋತ್ಪಾದಕರಿಗೆ ಹಣಕಾಸಿನ ನೆರವು ನೀಡಿದ ಆರೋಪದ ಮೇಲೆ 2019ರಿಂದ ತಿಹಾರ್ ಜೈಲಿನಲ್ಲಿದ್ದಾರೆ. ಫೆ.11 ಮತ್ತು 13ರಂದು ಅಧಿವೇಶನದಲ್ಲಿ ಭಾಗವಹಿಸಲು ಅನುಮತಿ ನೀಡಿ ಸೋಮವಾರ ದೆಹಲಿ ಹೈಕೋರ್ಟ್ ಅವರಿಗೆ ಕಸ್ಟಡಿ ಪೆರೋಲ್ ನೀಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಎರಡು ದಿನಗಳ ಕಸ್ಟಡಿ ಪೆರೋಲ್ ಮೇಲೆ ಹೊರಬಂದಿರುವ ಸಂಸದ ಎಂಜಿನಿಯರ್ ರಶೀದ್(ಶೇಕ್ ಅಬ್ದುಲ್ ರಶೀದ್), ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರಿಕರ ಸಾವಿನ ಬಗ್ಗೆ ಸಂಪೂರ್ಣ ತನಿಖೆ ನಡೆಸುವಂತೆ ಸಂಸತ್ನಲ್ಲಿ ಒತ್ತಾಯಿಸಿದರು.</p><p>ಶೂನ್ಯ ವೇಳೆಯಲ್ಲಿ ಮಾತನಾಡಿದ ಅವರು, ‘ನಮ್ಮ ರಕ್ತ ಅಗ್ಗವಾಗಿಲ್ಲ’ ಎಂದರು.</p><p>‘ಇತ್ತೀಚೆಗೆ ವಾಸಿಂ ಅಹಮ್ಮದ್ ಮಿರ್ ಮತ್ತು ಕಖಾನ್ ದಿನ್ ಎಂಬ ವ್ಯಕ್ತಿಗಳಿಬ್ಬರು ಭದ್ರತಾ ಪಡೆಗಳಿಂದ ಹತರಾಗಿರುವ ಆರೋಪವಿದೆ. ಇದರ ಬಗ್ಗೆ ತನಿಖೆ ನಡೆಸಬೇಕು’ ಎಂದು ಹೇಳಿದರು.</p><p>ಇದೇ ವೇಳೆ ಸುಮಾರು ಆರು ತಿಂಗಳಿಂದ ದೇಶದ ಇತರ ಭಾಗಗಳೊಂದಿಗೆ ಸಂಪರ್ಕ ಕಳೆದುಕೊಂಡಿರುವ ಕುಪ್ವಾರದ ದೂರದ ಪ್ರದೇಶಗಳಿಗೆ ಸುರಂಗ ಮಾರ್ಗ ನಿರ್ಮಿಸುವಂತೆಯೂ ಆಗ್ರಹಿಸಿದರು.</p><p>ಬಾರಾಮುಲ್ಲಾ ಕ್ಷೇತ್ರದ ಸಂಸದರಾಗಿರುವ ರಶೀದ್ ಅವರು, ಭಯೋತ್ಪಾದಕರಿಗೆ ಹಣಕಾಸಿನ ನೆರವು ನೀಡಿದ ಆರೋಪದ ಮೇಲೆ 2019ರಿಂದ ತಿಹಾರ್ ಜೈಲಿನಲ್ಲಿದ್ದಾರೆ. ಫೆ.11 ಮತ್ತು 13ರಂದು ಅಧಿವೇಶನದಲ್ಲಿ ಭಾಗವಹಿಸಲು ಅನುಮತಿ ನೀಡಿ ಸೋಮವಾರ ದೆಹಲಿ ಹೈಕೋರ್ಟ್ ಅವರಿಗೆ ಕಸ್ಟಡಿ ಪೆರೋಲ್ ನೀಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>