<p><strong>ಹೈದರಾಬಾದ್:</strong> ಮುಂಬರುವ ಬಿಹಾರ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಎಐಎಂಐಎಂ ಅಧ್ಯಕ್ಷ ಅಸಾದುದ್ಧೀನ್ ಓವೈಸಿ ಮುಂದಡಿ ಇಟ್ಟಿದ್ದಾರೆ.</p><p>ಬಿಹಾರದಲ್ಲಿ ಸೆ. 24ರಿಂದ ಮೂರು ದಿನಗಳವರೆಗೆ ಚುನಾವಣೆ ಪ್ರಚಾರ ನಡೆಸಲಿದ್ದಾರೆ.</p><p>ಸೆ. 24ರಂದು ಅಸಾದುದ್ಧೀನ್ ಓವೈಸಿ ಅವರು ಕಿಶನ್ಗಂಜ್ನಿಂದ ‘ಸೀಮಾಂಚಲ್ ನ್ಯಾಯ ಯಾತ್ರೆ’ಗೆ ಚಾಲನೆ ನೀಡಲಿದ್ದಾರೆ. ಸೀಮಾಂಚಲ್ ಪ್ರದೇಶದಲ್ಲಿ ಮೂರು ದಿನ ಕಾಲ ನ್ಯಾಯ ಯಾತ್ರೆ ನಡೆಯಲಿದೆ ಎಂದು ಪಕ್ಷದ ಅಧಿಕೃತ ಮೂಲಗಳು ತಿಳಿಸಿವೆ.</p><p>ಯಾತ್ರೆಯ ಸಮಯದಲ್ಲಿ ಓವೈಸಿ ಅವರು ಸೀಮಾಂಚಲ್ನ 25ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ರೋಡ್ ಶೋ ಮತ್ತು ಕಾರ್ನರ್ ಸಭೆಗಳನ್ನು ನಡೆಸಲಿದ್ದಾರೆ ಎಂದು ಎಐಎಂಐಎಂ ಮಂಗಳವಾರ ತಿಳಿಸಿದೆ.</p><p>ಅಭಿವೃದ್ಧಿಗಾಗಿ ಜನರನ್ನು ಒಂದುಗೂಡಿಸಲು ಮತ್ತು ಸೀಮಾಂಚಲ್ಗೆ ನ್ಯಾಯ ಒದಗಿಸಲು ಯಾತ್ರೆ ನಡೆಸುತ್ತಿರುವುದಾಗಿ ಪಕ್ಷ ಹೇಳಿಕೊಂಡಿದೆ.</p><p>ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೀಮಾಂಚಲ್ನ 25 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಎಐಎಂಐಎಂ ಐದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.</p><p>ಹಿಂದುಳಿದಿರುವ ಸೀಮಾಂಚಲ್ನ ಅಭಿವೃದ್ಧಿಗಾಗಿ ಸಂವಿಧಾನದ 371ನೇ ವಿಧಿಯಡಿ ‘ಸೀಮಾಂಚಲ್ ಅಭಿವೃದ್ಧಿ ಮಂಡಳಿ‘ ಸ್ಥಾಪಿಸುವಂತೆ ಓವೈಸಿ ಲೋಕಸಭೆಯಲ್ಲಿ ಖಾಸಗಿ ಮಸೂದೆ ಮಂಡಿಸಿದ್ದರು. </p>.ನುಡಿ–ಕಿಡಿ | ದೇವೇಂದ್ರ ಫಡಣವೀಸ್ vs ಅಸಾದುದ್ದೀನ್ ಓವೈಸಿ.ಸಿಎಎ ಜಾರಿ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಅಸಾದುದ್ದೀನ್ ಓವೈಸಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್:</strong> ಮುಂಬರುವ ಬಿಹಾರ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಎಐಎಂಐಎಂ ಅಧ್ಯಕ್ಷ ಅಸಾದುದ್ಧೀನ್ ಓವೈಸಿ ಮುಂದಡಿ ಇಟ್ಟಿದ್ದಾರೆ.</p><p>ಬಿಹಾರದಲ್ಲಿ ಸೆ. 24ರಿಂದ ಮೂರು ದಿನಗಳವರೆಗೆ ಚುನಾವಣೆ ಪ್ರಚಾರ ನಡೆಸಲಿದ್ದಾರೆ.</p><p>ಸೆ. 24ರಂದು ಅಸಾದುದ್ಧೀನ್ ಓವೈಸಿ ಅವರು ಕಿಶನ್ಗಂಜ್ನಿಂದ ‘ಸೀಮಾಂಚಲ್ ನ್ಯಾಯ ಯಾತ್ರೆ’ಗೆ ಚಾಲನೆ ನೀಡಲಿದ್ದಾರೆ. ಸೀಮಾಂಚಲ್ ಪ್ರದೇಶದಲ್ಲಿ ಮೂರು ದಿನ ಕಾಲ ನ್ಯಾಯ ಯಾತ್ರೆ ನಡೆಯಲಿದೆ ಎಂದು ಪಕ್ಷದ ಅಧಿಕೃತ ಮೂಲಗಳು ತಿಳಿಸಿವೆ.</p><p>ಯಾತ್ರೆಯ ಸಮಯದಲ್ಲಿ ಓವೈಸಿ ಅವರು ಸೀಮಾಂಚಲ್ನ 25ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ರೋಡ್ ಶೋ ಮತ್ತು ಕಾರ್ನರ್ ಸಭೆಗಳನ್ನು ನಡೆಸಲಿದ್ದಾರೆ ಎಂದು ಎಐಎಂಐಎಂ ಮಂಗಳವಾರ ತಿಳಿಸಿದೆ.</p><p>ಅಭಿವೃದ್ಧಿಗಾಗಿ ಜನರನ್ನು ಒಂದುಗೂಡಿಸಲು ಮತ್ತು ಸೀಮಾಂಚಲ್ಗೆ ನ್ಯಾಯ ಒದಗಿಸಲು ಯಾತ್ರೆ ನಡೆಸುತ್ತಿರುವುದಾಗಿ ಪಕ್ಷ ಹೇಳಿಕೊಂಡಿದೆ.</p><p>ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೀಮಾಂಚಲ್ನ 25 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಎಐಎಂಐಎಂ ಐದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.</p><p>ಹಿಂದುಳಿದಿರುವ ಸೀಮಾಂಚಲ್ನ ಅಭಿವೃದ್ಧಿಗಾಗಿ ಸಂವಿಧಾನದ 371ನೇ ವಿಧಿಯಡಿ ‘ಸೀಮಾಂಚಲ್ ಅಭಿವೃದ್ಧಿ ಮಂಡಳಿ‘ ಸ್ಥಾಪಿಸುವಂತೆ ಓವೈಸಿ ಲೋಕಸಭೆಯಲ್ಲಿ ಖಾಸಗಿ ಮಸೂದೆ ಮಂಡಿಸಿದ್ದರು. </p>.ನುಡಿ–ಕಿಡಿ | ದೇವೇಂದ್ರ ಫಡಣವೀಸ್ vs ಅಸಾದುದ್ದೀನ್ ಓವೈಸಿ.ಸಿಎಎ ಜಾರಿ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಅಸಾದುದ್ದೀನ್ ಓವೈಸಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>