<p class="bodytext"><strong>ನವದೆಹಲಿ:</strong> ‘70 ಟನ್ಗಳಷ್ಟು ಆಮ್ಲಜನಕವಿರುವ ನಾಲ್ಕು ಟ್ಯಾಂಕರ್ಗಳ ಮೊದಲ ‘ಆಕ್ಸಿಜನ್ ಎಕ್ಸ್ಪ್ರೆಸ್’ ರೈಲು ಭಾನುವಾರ ರಾಯಘಡದ ಜಿಂದಾಲ್ ಸ್ಟೀಲ್ ವರ್ಕ್ಸ್ ಸ್ಥಾವರದಿಂದ ತೆರಳಿದ್ದು, ಸೋಮವಾರ ರಾತ್ರಿ ದೆಹಲಿಗೆ ತಲುಪುವ ನಿರೀಕ್ಷೆ ಇದೆ’ಎಂದು ಕೇಂದ್ರ ರೈಲ್ವೆ ಮಂಡಳಿಯ ಅಧ್ಯಕ್ಷ ಸುನೀತ್ ಶರ್ಮಾ ತಿಳಿಸಿದ್ದಾರೆ.</p>.<p class="bodytext">‘ವೈದ್ಯಕೀಯ ಅಮ್ಲಜನಕವನ್ನು ಅಂಗುಲ್, ಕಾಳಿಂಗನಗರ, ರೂರ್ಕೆಲಾ ಮತ್ತು ರಾಯಘಡದ ಮೂಲಕ ದೆಹಲಿ ಮತ್ತು ಎನ್ಸಿಆರ್ ಪ್ರದೇಶಕ್ಕೆ ಸಾಗಿಸುವ ಯೋಜನೆಯನ್ನು ರೈಲ್ವೆ ಮಂಡಳಿ ರೂಪಿಸಿದೆ. ಆಮ್ಲಜನಕವನ್ನು ಪಡೆಯಲು ರಸ್ತೆಗಳಲ್ಲಿ ಟ್ಯಾಂಕರ್ಗಳನ್ನು ಸಿದ್ಧಗೊಳಿಸಲು ದೆಹಲಿ ಸರ್ಕಾರಕ್ಕೆ ಸೂಚಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.</p>.<p class="bodytext"><strong>ಓದಿ:</strong><a href="https://www.prajavani.net/india-news/central-govt-asked-ports-to-waive-off-charges-for-oxygen-and-related-equipment-carrier-ships-825443.html" itemprop="url">ಆಮ್ಲಜನಕ ಸಾಗಾಟದ ಹಡಗಿಗೆ ಶುಲ್ಕ ಬೇಡ: ಬಂದರಿಗೆ ಕೇಂದ್ರ ಸೂಚನೆ</a></p>.<p class="bodytext">‘ದೆಹಲಿ ಸರ್ಕಾರವು, ರೈಲ್ವೆಗೆ ಬರೆದ ಪತ್ರದಲ್ಲಿ ಒಟ್ಟು ಒಂಬತ್ತು ಸ್ಥಳಗಳಿಂದ ವೈದ್ಯಕೀಯ ಆಮ್ಲಜನಕವನ್ನು ಲೋಡ್ ಮಾಡಲು ಕೋರಿದೆ. ಇದನ್ನು ಪರಿಶೀಲಿಸಲಾಗಿದ್ದು, ಇದುವರೆಗೆ 7 ಸ್ಥಳಗಳಲ್ಲಿ ಆಮ್ಲಜನಕ ಸಾಗಿಸಬಹುದು ಎಂದು ತಿಳಿಸಲಾಗಿದೆ. ಇತರ ಎರಡು ಸ್ಥಳಗಳಲ್ಲಿ ತಾಂತ್ರಿಕ ಕಾರಣಗಳಿಂದಾಗಿ ಆಮ್ಲಜನಕ ಸಾಗಿಸಲು ಸಾಧ್ಯವಾಗಿಲ್ಲ’ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.</p>.<p class="bodytext">ಕೋವಿಡ್ನಿಂದಾಗಿ ದೆಹಲಿಯಲ್ಲಿ 348 ಸಾವುಗಳು ವರದಿಯಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿನ ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಮ್ಲಜನಕದ ತೀವ್ರ ಕೊರತೆ ಎದುರಾಗಿದೆ. 24 ಗಂಟೆಗಳ ಅವಧಿಯಲ್ಲಿ ದೆಹಲಿಯಲ್ಲಿ 24,331 ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಮೂಲಗಳು ತಿಳಿಸಿವೆ.</p>.<p class="bodytext"><strong>ಓದಿ:</strong><a href="https://www.prajavani.net/india-news/covid-crisis-over-550-oxygen-generation-plants-to-be-set-up-in-govt-hospitals-through-pm-cares-fund-825418.html" itemprop="url">ಪಿಎಂ ಕೇರ್ಸ್ ಫಂಡ್ ನೆರವಿನಲ್ಲಿ 551 ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆ: ಪಿಎಂಒ</a></p>.<p class="bodytext">ದೇಶದಲ್ಲಿ ಕೋವಿಡ್ ಪ್ರಕರಣಗಳು ದಾಖಲೆಯ ಮಟ್ಟದಲ್ಲಿ ಏರಿಕೆಯಾದ ಬಳಿಕ ಆಮ್ಲಜನಕಕ್ಕೆ ಹೆಚ್ಚಿನ ಬೇಡಿಕೆ ಉಂಟಾಗಿದೆ. ಹಾಗಾಗಿ, ರೈಲ್ವೆ ಇಲಾಖೆಯು ದೇಶದಾದ್ಯಂತ ವೈದ್ಯಕೀಯ ದ್ರವ ಆಮ್ಲಜನಕ ಮತ್ತು ಆಮ್ಲಜನಕದ ಸಿಲಿಂಡರ್ಗಳನ್ನು ಸಾಗಿಸಲು ‘ಆಕ್ಸಿಜನ್ ಎಕ್ಸ್ಪ್ರೆಸ್’ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="bodytext"><strong>ನವದೆಹಲಿ:</strong> ‘70 ಟನ್ಗಳಷ್ಟು ಆಮ್ಲಜನಕವಿರುವ ನಾಲ್ಕು ಟ್ಯಾಂಕರ್ಗಳ ಮೊದಲ ‘ಆಕ್ಸಿಜನ್ ಎಕ್ಸ್ಪ್ರೆಸ್’ ರೈಲು ಭಾನುವಾರ ರಾಯಘಡದ ಜಿಂದಾಲ್ ಸ್ಟೀಲ್ ವರ್ಕ್ಸ್ ಸ್ಥಾವರದಿಂದ ತೆರಳಿದ್ದು, ಸೋಮವಾರ ರಾತ್ರಿ ದೆಹಲಿಗೆ ತಲುಪುವ ನಿರೀಕ್ಷೆ ಇದೆ’ಎಂದು ಕೇಂದ್ರ ರೈಲ್ವೆ ಮಂಡಳಿಯ ಅಧ್ಯಕ್ಷ ಸುನೀತ್ ಶರ್ಮಾ ತಿಳಿಸಿದ್ದಾರೆ.</p>.<p class="bodytext">‘ವೈದ್ಯಕೀಯ ಅಮ್ಲಜನಕವನ್ನು ಅಂಗುಲ್, ಕಾಳಿಂಗನಗರ, ರೂರ್ಕೆಲಾ ಮತ್ತು ರಾಯಘಡದ ಮೂಲಕ ದೆಹಲಿ ಮತ್ತು ಎನ್ಸಿಆರ್ ಪ್ರದೇಶಕ್ಕೆ ಸಾಗಿಸುವ ಯೋಜನೆಯನ್ನು ರೈಲ್ವೆ ಮಂಡಳಿ ರೂಪಿಸಿದೆ. ಆಮ್ಲಜನಕವನ್ನು ಪಡೆಯಲು ರಸ್ತೆಗಳಲ್ಲಿ ಟ್ಯಾಂಕರ್ಗಳನ್ನು ಸಿದ್ಧಗೊಳಿಸಲು ದೆಹಲಿ ಸರ್ಕಾರಕ್ಕೆ ಸೂಚಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.</p>.<p class="bodytext"><strong>ಓದಿ:</strong><a href="https://www.prajavani.net/india-news/central-govt-asked-ports-to-waive-off-charges-for-oxygen-and-related-equipment-carrier-ships-825443.html" itemprop="url">ಆಮ್ಲಜನಕ ಸಾಗಾಟದ ಹಡಗಿಗೆ ಶುಲ್ಕ ಬೇಡ: ಬಂದರಿಗೆ ಕೇಂದ್ರ ಸೂಚನೆ</a></p>.<p class="bodytext">‘ದೆಹಲಿ ಸರ್ಕಾರವು, ರೈಲ್ವೆಗೆ ಬರೆದ ಪತ್ರದಲ್ಲಿ ಒಟ್ಟು ಒಂಬತ್ತು ಸ್ಥಳಗಳಿಂದ ವೈದ್ಯಕೀಯ ಆಮ್ಲಜನಕವನ್ನು ಲೋಡ್ ಮಾಡಲು ಕೋರಿದೆ. ಇದನ್ನು ಪರಿಶೀಲಿಸಲಾಗಿದ್ದು, ಇದುವರೆಗೆ 7 ಸ್ಥಳಗಳಲ್ಲಿ ಆಮ್ಲಜನಕ ಸಾಗಿಸಬಹುದು ಎಂದು ತಿಳಿಸಲಾಗಿದೆ. ಇತರ ಎರಡು ಸ್ಥಳಗಳಲ್ಲಿ ತಾಂತ್ರಿಕ ಕಾರಣಗಳಿಂದಾಗಿ ಆಮ್ಲಜನಕ ಸಾಗಿಸಲು ಸಾಧ್ಯವಾಗಿಲ್ಲ’ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.</p>.<p class="bodytext">ಕೋವಿಡ್ನಿಂದಾಗಿ ದೆಹಲಿಯಲ್ಲಿ 348 ಸಾವುಗಳು ವರದಿಯಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿನ ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಮ್ಲಜನಕದ ತೀವ್ರ ಕೊರತೆ ಎದುರಾಗಿದೆ. 24 ಗಂಟೆಗಳ ಅವಧಿಯಲ್ಲಿ ದೆಹಲಿಯಲ್ಲಿ 24,331 ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಮೂಲಗಳು ತಿಳಿಸಿವೆ.</p>.<p class="bodytext"><strong>ಓದಿ:</strong><a href="https://www.prajavani.net/india-news/covid-crisis-over-550-oxygen-generation-plants-to-be-set-up-in-govt-hospitals-through-pm-cares-fund-825418.html" itemprop="url">ಪಿಎಂ ಕೇರ್ಸ್ ಫಂಡ್ ನೆರವಿನಲ್ಲಿ 551 ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆ: ಪಿಎಂಒ</a></p>.<p class="bodytext">ದೇಶದಲ್ಲಿ ಕೋವಿಡ್ ಪ್ರಕರಣಗಳು ದಾಖಲೆಯ ಮಟ್ಟದಲ್ಲಿ ಏರಿಕೆಯಾದ ಬಳಿಕ ಆಮ್ಲಜನಕಕ್ಕೆ ಹೆಚ್ಚಿನ ಬೇಡಿಕೆ ಉಂಟಾಗಿದೆ. ಹಾಗಾಗಿ, ರೈಲ್ವೆ ಇಲಾಖೆಯು ದೇಶದಾದ್ಯಂತ ವೈದ್ಯಕೀಯ ದ್ರವ ಆಮ್ಲಜನಕ ಮತ್ತು ಆಮ್ಲಜನಕದ ಸಿಲಿಂಡರ್ಗಳನ್ನು ಸಾಗಿಸಲು ‘ಆಕ್ಸಿಜನ್ ಎಕ್ಸ್ಪ್ರೆಸ್’ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>