<p><strong>ಲಖನೌ:</strong> ‘ಪಹಲ್ಗಾಮ್ನಲ್ಲಿ ದಾಳಿ ನಡೆಸಿದ ಉಗ್ರರು ಹತರಾದವರ ಧರ್ಮ ಕೇಳಿದ್ದರೆ ಹೊರತು ಜಾತಿಯನ್ನಲ್ಲ’ ಎಂಬ ಪೋಸ್ಟರ್ಗಳನ್ನು ಬಿಜೆಪಿ ತನ್ನ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿತ್ತು ಎನ್ನಲಾಗಿದ್ದು, ಇದೇ ವಿಚಾರವನ್ನಿಟ್ಟುಕೊಂಡು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಬಿಜೆಪಿ ವಿರುದ್ಧ ಬುಧವಾರ ವಾಗ್ದಾಳಿ ನಡೆಸಿದ್ದಾರೆ.</p>.<p>‘ಧರ್ಮ ಪೂಛಾ, ಜಾತಿ ನಹಿ..ಯಾದ್ ರಖೆಂಗೆ’(ಅವರು ಧರ್ಮವನ್ನು ಕೇಳಿದ್ದಾರೆ, ಜಾತಿಯನ್ನಲ್ಲ... ನೆನಪಿನಲ್ಲಿಟ್ಟುಕೊಳ್ಳುತ್ತೇವೆ) ಎಂಬ ಪೋಸ್ಟರ್ಅನ್ನು ಬಿಜೆಪಿಯ ಛತ್ತೀಸಗಢ ಘಟಕವು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದೆ ಎನ್ನಲಾಗುತ್ತಿದೆ.</p>.<p>‘ತಾನೊಂದು ಸಂವೇದನಾರಹಿತ ಪಕ್ಷ ಎಂಬುದನ್ನು ಬಿಜೆಪಿ ಸಾಬೀತು ಮಾಡಿದೆ. ಪಕ್ಷದ ಈ ಪಾಪಕ್ಕಾಗಿ, ಅದರ ಕಟ್ಟಾ ಬೆಂಬಲಿಗರು ಕೂಡ ಬಿಜೆಪಿಯನ್ನು ಕ್ಷಮಿಸಲಾರರು. ಸಂಕಷ್ಟದ ಸಂದರ್ಭಗಳೆಲ್ಲೆಲ್ಲಾ ತನ್ನ ರಾಜಕೀಯ ಲಾಭವನ್ನೇ ಬಿಜೆಪಿ ಹುಡುಕುತ್ತಿರುತ್ತದೆ’ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.</p>.<p>‘ಜನರು ಕಾಶ್ಮೀರಕ್ಕೆ ಭೇಟಿ ನೀಡಬೇಕು ಎಂದು ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳು ಬಯಸುತ್ತವೆ. ಹೀಗಿರುವಾಗ ಅಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗಾಗಿ ಅವರು ಸೂಕ್ತ ಭದ್ರತೆಯನ್ನು ಏಕೆ ಕೈಗೊಳ್ಳಲಿಲ್ಲ. ಇದು ರಾಜಕೀಯ ವೈಫಲ್ಯವೂ ಆಗಿದೆ’ ಎಂದು ಟೀಕಿಸಿದ್ದಾರೆ.</p>.<div><blockquote>ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯು ಕೇಂದ್ರ ಸರ್ಕಾರದ ವೈಫಲ್ಯ ತೋರಿಸುತ್ತದೆ. ಕೇಂದ್ರ ಜಾಗೃತವಾಗಿದ್ದಲ್ಲಿ ಈ ದಾಳಿಯನ್ನು ತಪ್ಪಿಸಬಹುದಿತ್ತು</blockquote><span class="attribution">ಅಖಿಲೇಶ್ ಯಾದವ್ ಎಸ್ಪಿ ಮುಖ್ಯಸ್ಥ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ:</strong> ‘ಪಹಲ್ಗಾಮ್ನಲ್ಲಿ ದಾಳಿ ನಡೆಸಿದ ಉಗ್ರರು ಹತರಾದವರ ಧರ್ಮ ಕೇಳಿದ್ದರೆ ಹೊರತು ಜಾತಿಯನ್ನಲ್ಲ’ ಎಂಬ ಪೋಸ್ಟರ್ಗಳನ್ನು ಬಿಜೆಪಿ ತನ್ನ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿತ್ತು ಎನ್ನಲಾಗಿದ್ದು, ಇದೇ ವಿಚಾರವನ್ನಿಟ್ಟುಕೊಂಡು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಬಿಜೆಪಿ ವಿರುದ್ಧ ಬುಧವಾರ ವಾಗ್ದಾಳಿ ನಡೆಸಿದ್ದಾರೆ.</p>.<p>‘ಧರ್ಮ ಪೂಛಾ, ಜಾತಿ ನಹಿ..ಯಾದ್ ರಖೆಂಗೆ’(ಅವರು ಧರ್ಮವನ್ನು ಕೇಳಿದ್ದಾರೆ, ಜಾತಿಯನ್ನಲ್ಲ... ನೆನಪಿನಲ್ಲಿಟ್ಟುಕೊಳ್ಳುತ್ತೇವೆ) ಎಂಬ ಪೋಸ್ಟರ್ಅನ್ನು ಬಿಜೆಪಿಯ ಛತ್ತೀಸಗಢ ಘಟಕವು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದೆ ಎನ್ನಲಾಗುತ್ತಿದೆ.</p>.<p>‘ತಾನೊಂದು ಸಂವೇದನಾರಹಿತ ಪಕ್ಷ ಎಂಬುದನ್ನು ಬಿಜೆಪಿ ಸಾಬೀತು ಮಾಡಿದೆ. ಪಕ್ಷದ ಈ ಪಾಪಕ್ಕಾಗಿ, ಅದರ ಕಟ್ಟಾ ಬೆಂಬಲಿಗರು ಕೂಡ ಬಿಜೆಪಿಯನ್ನು ಕ್ಷಮಿಸಲಾರರು. ಸಂಕಷ್ಟದ ಸಂದರ್ಭಗಳೆಲ್ಲೆಲ್ಲಾ ತನ್ನ ರಾಜಕೀಯ ಲಾಭವನ್ನೇ ಬಿಜೆಪಿ ಹುಡುಕುತ್ತಿರುತ್ತದೆ’ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.</p>.<p>‘ಜನರು ಕಾಶ್ಮೀರಕ್ಕೆ ಭೇಟಿ ನೀಡಬೇಕು ಎಂದು ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳು ಬಯಸುತ್ತವೆ. ಹೀಗಿರುವಾಗ ಅಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗಾಗಿ ಅವರು ಸೂಕ್ತ ಭದ್ರತೆಯನ್ನು ಏಕೆ ಕೈಗೊಳ್ಳಲಿಲ್ಲ. ಇದು ರಾಜಕೀಯ ವೈಫಲ್ಯವೂ ಆಗಿದೆ’ ಎಂದು ಟೀಕಿಸಿದ್ದಾರೆ.</p>.<div><blockquote>ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯು ಕೇಂದ್ರ ಸರ್ಕಾರದ ವೈಫಲ್ಯ ತೋರಿಸುತ್ತದೆ. ಕೇಂದ್ರ ಜಾಗೃತವಾಗಿದ್ದಲ್ಲಿ ಈ ದಾಳಿಯನ್ನು ತಪ್ಪಿಸಬಹುದಿತ್ತು</blockquote><span class="attribution">ಅಖಿಲೇಶ್ ಯಾದವ್ ಎಸ್ಪಿ ಮುಖ್ಯಸ್ಥ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>