<p><strong>ಮುಂಬೈ:</strong> ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರದ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದಿಂದ ದೇಶದ ಆರ್ಥಿಕತೆಗೆ ಯಾವುದೇ ಪೆಟ್ಟುಬಿದ್ದಿಲ್ಲ ಎಂದು ಶುಕ್ರವಾರ ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ. </p><p>ಈ ಸಂಘರ್ಷವು ಆರ್ಥಿಕತೆಯ ಮೇಲೆ ಅತಿ ಕಡಿಮೆ ಪ್ರಮಾಣದ ಪರಿಣಾಮವನ್ನಷ್ಟೇ ಉಂಟುಮಾಡಿದೆ. ಉತ್ತರ ಭಾರತದ ಹಲವೆಡೆ ವಿಮಾನಯಾನ ಕುಂಟಿತಗೊಂಡಿದ್ದರಿಂದ ಕೆಲವು ದಿನಗಳ ಕಾಲ ಆರ್ಥಿಕತೆಯ ಮೇಲೆ ಅದರ ಹೊಡೆತ ಬಿದ್ದಿತ್ತು, ಆದರೆ ಅದರಿಂದ ಯಾವುದೇ ದೊಡ್ಡ ಪ್ರಮಾಣದ ನಷ್ಟವಾಗಿಲ್ಲ ಎಂದರು.</p><p>ಸಂಘರ್ಷದ ತೀವ್ರತೆಯಿದ್ದ ಕೆಲವು ದಿನಗಳ ಕಾಲ ಆ ಪ್ರದೇಶಗಳಲ್ಲಿ ಬೆಲೆ ಏರಿಕೆಯಾಗಿತ್ತಾದರೂ, ಇದೀಗ ಪರಿಸ್ಥಿತಿ ಮತ್ತೆ ಮೊದಲಿನಂತಾಗಿದೆ. ಇದು ದೇಶದ ಆರ್ಥಿಕತೆಯ ಮೇಲೆ ಯಾವುದೇ ದೊಡ್ಡ ಪರಿಣಾಮ ಬೀರಲಿಲ್ಲ ಎಂದು ಸ್ಪಷ್ಟಪಡಿಸಿದರು. </p><p>ಕೋವಿಡ್ –19 ಪ್ರಕರಣಗಳು ಹೆಚ್ಚಾಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಆರ್ಬಿಐ ಗವರ್ನರ್, ‘ಕೋವಿಡ್ ಇದೀಗ ಕೇವಲ ಒಂದು ವೈರಾಣುವಷ್ಟೇ. ಅದು ಹಾಗೆ ಇರುತ್ತದೆ ಎಂದು ಆಶಿಸುತ್ತೇನೆ’ ಎಂದರು.</p><p>ಏ.22ರಂದು ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತವು ‘ಅಪರೇಷನ್ ಸಿಂಧೂರ’ಮೂಲಕ ಪಾಕಿಸ್ತಾನದಲ್ಲಿದ್ದ ಉಗ್ರನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರದ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದಿಂದ ದೇಶದ ಆರ್ಥಿಕತೆಗೆ ಯಾವುದೇ ಪೆಟ್ಟುಬಿದ್ದಿಲ್ಲ ಎಂದು ಶುಕ್ರವಾರ ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ. </p><p>ಈ ಸಂಘರ್ಷವು ಆರ್ಥಿಕತೆಯ ಮೇಲೆ ಅತಿ ಕಡಿಮೆ ಪ್ರಮಾಣದ ಪರಿಣಾಮವನ್ನಷ್ಟೇ ಉಂಟುಮಾಡಿದೆ. ಉತ್ತರ ಭಾರತದ ಹಲವೆಡೆ ವಿಮಾನಯಾನ ಕುಂಟಿತಗೊಂಡಿದ್ದರಿಂದ ಕೆಲವು ದಿನಗಳ ಕಾಲ ಆರ್ಥಿಕತೆಯ ಮೇಲೆ ಅದರ ಹೊಡೆತ ಬಿದ್ದಿತ್ತು, ಆದರೆ ಅದರಿಂದ ಯಾವುದೇ ದೊಡ್ಡ ಪ್ರಮಾಣದ ನಷ್ಟವಾಗಿಲ್ಲ ಎಂದರು.</p><p>ಸಂಘರ್ಷದ ತೀವ್ರತೆಯಿದ್ದ ಕೆಲವು ದಿನಗಳ ಕಾಲ ಆ ಪ್ರದೇಶಗಳಲ್ಲಿ ಬೆಲೆ ಏರಿಕೆಯಾಗಿತ್ತಾದರೂ, ಇದೀಗ ಪರಿಸ್ಥಿತಿ ಮತ್ತೆ ಮೊದಲಿನಂತಾಗಿದೆ. ಇದು ದೇಶದ ಆರ್ಥಿಕತೆಯ ಮೇಲೆ ಯಾವುದೇ ದೊಡ್ಡ ಪರಿಣಾಮ ಬೀರಲಿಲ್ಲ ಎಂದು ಸ್ಪಷ್ಟಪಡಿಸಿದರು. </p><p>ಕೋವಿಡ್ –19 ಪ್ರಕರಣಗಳು ಹೆಚ್ಚಾಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಆರ್ಬಿಐ ಗವರ್ನರ್, ‘ಕೋವಿಡ್ ಇದೀಗ ಕೇವಲ ಒಂದು ವೈರಾಣುವಷ್ಟೇ. ಅದು ಹಾಗೆ ಇರುತ್ತದೆ ಎಂದು ಆಶಿಸುತ್ತೇನೆ’ ಎಂದರು.</p><p>ಏ.22ರಂದು ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತವು ‘ಅಪರೇಷನ್ ಸಿಂಧೂರ’ಮೂಲಕ ಪಾಕಿಸ್ತಾನದಲ್ಲಿದ್ದ ಉಗ್ರನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>