<p><strong>ನವದೆಹಲಿ</strong>: ವಿರೋಧ ಪಕ್ಷಗಳ ಮೈತ್ರಿಕೂಟವಾಗಿರುವ 'ಇಂಡಿಯಾ'ದ ಸಂಸದರನ್ನು ಮೊಘಲ್ ಸಾಮ್ರಾಟ ಔರಂಗಜೇಬನ ಅಭಿಮಾನಿಗಳು ಎಂದು ಕರೆಯಬೇಕು ಎಂದು ಶಿವಸೇನಾ ಸಂಸದ ನರೇಶ್ ಮಹಾಸ್ಕೆ ಲೋಕಸಭೆಯಲ್ಲಿ ಕೇಳಿಕೆ ನೀಡಿದ್ದಾರೆ. ಇದು ವಿರೋಧ ಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.</p><p>'ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯ ಮಸೂದೆ, 2025' ಕುರಿತ ಚರ್ಚೆಯ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಅದ ಮಿತ್ರ ಪಕ್ಷಗಳ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ ನರೇಶ್, ಅವರ (ವಿರೋಧ ಪಕ್ಷಗಳ) ಆಡಳಿತವನ್ನು ಔರಂಗಜೇಬನ ಆಡಳಿತಕ್ಕೆ ಹೋಲಿಸಿದ್ದಾರೆ.</p><p>'ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ಆಡಳಿತದ ಹೆಸರಿನಲ್ಲಿ ಭ್ರಷ್ಟಾಚಾರ ನಡೆಯುತ್ತಿತ್ತು. ನಮ್ಮ ಸರ್ಕಾರವು ಸಮೃದ್ಧಿ ಸಾಧಿಸುವತ್ತ ಹೆಜ್ಜೆ ಇಟ್ಟಿದೆ. ಆದರೆ, ರೈತರ ಹಣವನ್ನು ದೋಚಿದ್ದ ಕಾಂಗ್ರೆಸ್, ಆಡಳಿತವನ್ನು ಭ್ರಷ್ಟಾಚಾರದ ತಾಣವನ್ನಾಗಿಸಿತ್ತು' ಎಂದು ದೂರಿದ್ದಾರೆ.</p><p>ವಿರೋಧ ಪಕ್ಷಗಳು ಔರಂಗಜೇಬನ ಮೇಲೆಯೇ ಕೇಂದ್ರೀಕೃತವಾಗಿವೆ ಎಂದೂ ಆರೋಪಿಸಿದ್ದಾರೆ.</p><p>'ಔರಂಗಜೇಬನು ಹಿಂದೂಗಳ ನಾಶಕ್ಕಾಗಿ ಜಿಜ್ಯಾ (ಜಿಜಿಯಾ) ತೆರಿಗೆ ವಿಧಿಸಿದ್ದ ಹಾಗೆಯೇ, ಕಾಂಗ್ರೆಸ್ ಮತ್ತು ಉದ್ಧವ್ ಠಾಕ್ರೆ ಬಣದ ಸರ್ಕಾರವು ಹಗರಣಗಳ ಮೂಲಕ ಮಹಾರಾಷ್ಟ್ರವನ್ನು ಲೂಟಿ ಮಾಡಿದೆ' ಎಂದು ದೂರಿದ್ದಾರೆ.</p><p>ಇದೇ ವೇಳೆ ಅವರು, ಇಂಡಿಯಾ ಮೈತ್ರಿಕೂಟದ ಸದಸ್ಯರನ್ನು ಔರಂಗಜೇಬನ ಅಭಿಮಾನಿಗಳು ಎಂದು ಕರೆಯಬೇಕು ಎಂದು ಪ್ರತಿಪಾದಿಸಿದ್ದಾರೆ.</p><p>ಈ ಹೇಳಿಕೆಯು ಪ್ರತಿಪಕ್ಷಗಳ ನಾಯಕರು ಕೆರಳುವಂತೆ ಮಾಡಿತು. 'ಔರಂಗಜೇಬನಿಗೂ, ಮಸೂದೆಗೂ ಏನು ಸಂಬಂಧ?' ಎಂದು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) ಸಂಸದ ಅರವಿಂದ್ ಸಾವಂತ್ ಪ್ರಶ್ನಿಸಿದ್ದಾರೆ. ಇತರ ನಾಯಕರೂ ನರೇಶ್ ವಿರುದ್ಧ ಕಿಡಿಕಾರಿದ್ದಾರೆ.</p><p><strong>ಗ್ರಾಮೀಣ ಆಡಳಿತ ಸಂಸ್ಥೆಯನ್ನು ವಿವಿ ಆಗಿಸಲು ಮಸೂದೆ<br></strong>ಗುಜರಾತ್ನ ಆನಂದ್ ಜಿಲ್ಲೆಯಲ್ಲಿರುವ ಗ್ರಾಮೀಣ ಆಡಳಿತ ಸಂಸ್ಥೆಯನ್ನು ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯವನ್ನಾಸುವ ನಿಟ್ಟಿನಲ್ಲಿ 'ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯ ಮಸೂದೆ, 2025' ಅನ್ನು ಪರಿಚಯಿಸಲಾಗುತ್ತಿದೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ವಿರೋಧ ಪಕ್ಷಗಳ ಮೈತ್ರಿಕೂಟವಾಗಿರುವ 'ಇಂಡಿಯಾ'ದ ಸಂಸದರನ್ನು ಮೊಘಲ್ ಸಾಮ್ರಾಟ ಔರಂಗಜೇಬನ ಅಭಿಮಾನಿಗಳು ಎಂದು ಕರೆಯಬೇಕು ಎಂದು ಶಿವಸೇನಾ ಸಂಸದ ನರೇಶ್ ಮಹಾಸ್ಕೆ ಲೋಕಸಭೆಯಲ್ಲಿ ಕೇಳಿಕೆ ನೀಡಿದ್ದಾರೆ. ಇದು ವಿರೋಧ ಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.</p><p>'ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯ ಮಸೂದೆ, 2025' ಕುರಿತ ಚರ್ಚೆಯ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಅದ ಮಿತ್ರ ಪಕ್ಷಗಳ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ ನರೇಶ್, ಅವರ (ವಿರೋಧ ಪಕ್ಷಗಳ) ಆಡಳಿತವನ್ನು ಔರಂಗಜೇಬನ ಆಡಳಿತಕ್ಕೆ ಹೋಲಿಸಿದ್ದಾರೆ.</p><p>'ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ಆಡಳಿತದ ಹೆಸರಿನಲ್ಲಿ ಭ್ರಷ್ಟಾಚಾರ ನಡೆಯುತ್ತಿತ್ತು. ನಮ್ಮ ಸರ್ಕಾರವು ಸಮೃದ್ಧಿ ಸಾಧಿಸುವತ್ತ ಹೆಜ್ಜೆ ಇಟ್ಟಿದೆ. ಆದರೆ, ರೈತರ ಹಣವನ್ನು ದೋಚಿದ್ದ ಕಾಂಗ್ರೆಸ್, ಆಡಳಿತವನ್ನು ಭ್ರಷ್ಟಾಚಾರದ ತಾಣವನ್ನಾಗಿಸಿತ್ತು' ಎಂದು ದೂರಿದ್ದಾರೆ.</p><p>ವಿರೋಧ ಪಕ್ಷಗಳು ಔರಂಗಜೇಬನ ಮೇಲೆಯೇ ಕೇಂದ್ರೀಕೃತವಾಗಿವೆ ಎಂದೂ ಆರೋಪಿಸಿದ್ದಾರೆ.</p><p>'ಔರಂಗಜೇಬನು ಹಿಂದೂಗಳ ನಾಶಕ್ಕಾಗಿ ಜಿಜ್ಯಾ (ಜಿಜಿಯಾ) ತೆರಿಗೆ ವಿಧಿಸಿದ್ದ ಹಾಗೆಯೇ, ಕಾಂಗ್ರೆಸ್ ಮತ್ತು ಉದ್ಧವ್ ಠಾಕ್ರೆ ಬಣದ ಸರ್ಕಾರವು ಹಗರಣಗಳ ಮೂಲಕ ಮಹಾರಾಷ್ಟ್ರವನ್ನು ಲೂಟಿ ಮಾಡಿದೆ' ಎಂದು ದೂರಿದ್ದಾರೆ.</p><p>ಇದೇ ವೇಳೆ ಅವರು, ಇಂಡಿಯಾ ಮೈತ್ರಿಕೂಟದ ಸದಸ್ಯರನ್ನು ಔರಂಗಜೇಬನ ಅಭಿಮಾನಿಗಳು ಎಂದು ಕರೆಯಬೇಕು ಎಂದು ಪ್ರತಿಪಾದಿಸಿದ್ದಾರೆ.</p><p>ಈ ಹೇಳಿಕೆಯು ಪ್ರತಿಪಕ್ಷಗಳ ನಾಯಕರು ಕೆರಳುವಂತೆ ಮಾಡಿತು. 'ಔರಂಗಜೇಬನಿಗೂ, ಮಸೂದೆಗೂ ಏನು ಸಂಬಂಧ?' ಎಂದು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) ಸಂಸದ ಅರವಿಂದ್ ಸಾವಂತ್ ಪ್ರಶ್ನಿಸಿದ್ದಾರೆ. ಇತರ ನಾಯಕರೂ ನರೇಶ್ ವಿರುದ್ಧ ಕಿಡಿಕಾರಿದ್ದಾರೆ.</p><p><strong>ಗ್ರಾಮೀಣ ಆಡಳಿತ ಸಂಸ್ಥೆಯನ್ನು ವಿವಿ ಆಗಿಸಲು ಮಸೂದೆ<br></strong>ಗುಜರಾತ್ನ ಆನಂದ್ ಜಿಲ್ಲೆಯಲ್ಲಿರುವ ಗ್ರಾಮೀಣ ಆಡಳಿತ ಸಂಸ್ಥೆಯನ್ನು ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯವನ್ನಾಸುವ ನಿಟ್ಟಿನಲ್ಲಿ 'ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯ ಮಸೂದೆ, 2025' ಅನ್ನು ಪರಿಚಯಿಸಲಾಗುತ್ತಿದೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>