<p><strong>ನವದೆಹಲಿ (ಪಿಟಿಐ):</strong> ‘ದೇಶ ವಿಭಜನೆ ಪ್ರಕ್ರಿಯೆಯು ಕೇವಲ ಭಯೋತ್ಪಾದಕರನ್ನಷ್ಟೇ ಪ್ರತ್ಯೇಕಗೊಳಿಸಲಿಲ್ಲ, ಭಾವನೆಗಳನ್ನೂ ಪ್ರತ್ಯೇಕವಾಗಿಸಿತು‘ ಎಂದು ಆರ್ಎಸ್ಎಸ್ ಮುಖಂಡ ರಾಮ್ ಮಾಧವ್ ಹೇಳಿದರು.</p>.<p class="title">‘ಪ್ರತ್ಯೇಕತಾವಾದದಲ್ಲಿ ನಂಬಿಕೆ ಹೊಂದಿರುವ ಶಕ್ತಿಗಳನ್ನು ಹತ್ತಿಕ್ಕುವುದರ ಜೊತೆಗೇ ‘ಭಾವನೆಗಳನ್ನು ಬೆಸೆಯುವ’ ಮಾರ್ಗಗಳನ್ನು ಹುಡುಕುವುದು ಈಗಿನ ಅಗತ್ಯವಾಗಿದೆ’ ಎಂದೂ ಅವರು ಪ್ರತಿಪಾದಿಸಿದರು.</p>.<p class="title">‘ಭಾರತ: ವಿಭಜನೆ ಮತ್ತು ಆ ನಂತರ: ತಲ್ಲಣಗಳ ಸ್ಮರಣಾ ದಿನ’ ಕುರಿತು ಜೆಎನ್ಯು ಶನಿವಾರ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಮಟ್ಟದ ವೆಬಿನಾರ್ನಲ್ಲಿ ಅವರು, ಸ್ವಾತಂತ್ರ್ಯ ಹೋರಾಟದ ಅವಧಿಯಲ್ಲಿ ಮಹಮ್ಮದ್ ಅಲಿ ಜಿನ್ನಾರನ್ನು ದೈತ್ಯವಾಗಿ ಬೆಳೆಯಲು ಬಿಡಲಾಯಿತು. ಇದೇ ವಿಭಜನೆಯ ದೃಢಸಂಕಲ್ಪಕ್ಕೆ ಕಾರಣವಾಯಿತು’ ಎಂದರು.</p>.<p class="title">ಮಹಮ್ಮದ್ ಅಲಿ ಜಿನ್ನಾ ಅವರು 20ನೇ ಶತಮಾನದ ಆರಂಭದಿಂದ, ಆಗಸ್ಟ್ 14,1947ರಲ್ಲಿ ಪಾಕಿಸ್ತಾನ ರಚನೆಯವರೆಗೂ ಆಲ್ ಇಂಡಿಯಾ ಮುಸ್ಲಿಂ ಲೀಗ್ ನಾಯಕರಾಗಿದ್ದರು.</p>.<p class="title">ಅಖಂಡ ಭಾರತದ ವಿಭಜನೆ ಎಂಬುದು ಆ ಕಾಲಘಟ್ಟದಲ್ಲಿ ಇತರೆ ದೇಶಗಳಲ್ಲಿ ಆದ ವಿಭಜನೆಯಂತೆ ಕೇವಲ ಗಡಿ ನಿಗದಿಪಡಿಸುವುದಷ್ಟೇ ಆಗಿರಲಿಲ್ಲ. ಆಚರಣೆಗಳು ಭಿನ್ನವಾಗಿದ್ದರೂ ಒಟ್ಟಿಗೇ ಬದುಕುತ್ತಿದ್ದ ಹಿಂದೂ, ಮುಸಲ್ಮಾನರ ಪ್ರತ್ಯೇಕ ದೇಶಗಳು ರಚನೆಯಾದವು. ಈ ವಿಭಜನೆಯು ಕೇವಲ ಭಯೋತ್ಪಾದಕರನ್ನಷ್ಟೇ ಪ್ರತ್ಯೇಕವಾಗಿಸಲಿಲ್ಲ. ಭಾವನೆಗಳನ್ನು ಪ್ರತ್ಯೇಕವಾಗಿಸಿತು. ಭಾವನೆಗಳ ಪ್ರತ್ಯೇಕತೆ ಎಂಬುದನ್ನು ಎಚ್ಚರಿಕೆ ಮತ್ತು ಗಂಭೀರವಾಗಿ ಪರಿಗಣಿಸಬೇಕು. ಈ ಕಾರಣದಿಂದ ಸಂಯುಕ್ತ ಭಾರತ ಸಮಾಜವನ್ನು ನಿರ್ಮಿಸಲು ಪ್ರತ್ಯೇಕತಾವಾದ ಮತ್ತು ಕೋಮುವಾದ ಚಿಂತನೆಗಳನ್ನು ಹತ್ತಿಕ್ಕಬೇಕು. ರಾಷ್ಟ್ರೀಯವಾದ ಚಿಂತನೆಗೆ ಉತ್ತೇಜನ ನೀಡಬೇಕು ಎಂದರು.</p>.<p class="bodytext">‘ಅಖಂಡ ಭಾರತ‘ದ ಕಲ್ಪನೆ ಎಂದರೆ ಕೇವಲ ಭೌಗೋಳಿಕ ಗಡಿಗಳನ್ನು ಸೇರಿಸುವುದಷ್ಟೇ ಅಲ್ಲ. ದೇಶ ವಿಭಜನೆಯ ಸಂದರ್ಭದಲ್ಲಿ ಮಾನಸಿಕವಾಗಿ ಮೂಡಿರುವ ಗಡಿಯನ್ನು, ಪ್ರತ್ಯೇಕತಾ ಭಾವನೆಯನ್ನು ತೆಗೆದುಹಾಕುವ ದೃಷ್ಟಿಕೋನದಿಂದ ನೋಡಬೇಕಾಗುತ್ತದೆ ಎಂದು ಹೇಳಿದರು.</p>.<p>ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯರೂ ಆದ ಮಾಧವ್, ದೇಶ ವಿಭಜನೆಯ ಬೆಳವಣಿಗೆಯನ್ನು ‘ತಪ್ಪು ತೀರ್ಮಾನದ ಕಾರಣ ಉಂಟಾದ ಪ್ರಮಾದ‘ ಎಂದು ಬಣ್ಣಿಸಿದರು.</p>.<p>ಪ್ರಧಾನಿ ನರೇಂದ್ರ ಮೋದಿ ಅವರು ಈಚೆಗೆ ಆಗಸ್ಟ್ 14 ಅನ್ನು ದೇಶ ವಿಭಜನೆಯ ನೋವುಗಳ ಸ್ಮರಣಾ ದಿನವಾಗಿ ಆಚರಿಸಲಾಗುವುದು ಎಂದು ಪ್ರಕಟಿಸಿದ್ದರು. ಆಗ, ವಿಭಜನೆ ವೇಳೆ ಅಸಂಖ್ಯ ಜನರು ವಸತಿ ಕಳೆದುಕೊಂಡರೆ, ವಿಭಜನೆಯ ಹಿಂಸೆ, ದ್ವೇಷದಿಂದ ಅನೇಕರು ಜೀವ ಕಳೆದುಕೊಂಡರು ಎಂದಿದ್ದರು.</p>.<p><a href="https://www.prajavani.net/world-news/sneha-dubey-speech-at-united-nations-slams-pakistan-pm-imran-khan-869819.html" itemprop="url">ವಿಶ್ವಸಂಸ್ಥೆಯಲ್ಲಿ ಪಾಕ್ ಪಿಎಂ ಇಮ್ರಾನ್ ಬೆವರಿಳಿಸಿದ ಅಧಿಕಾರಿಣಿ ಸ್ನೇಹಾ ದುಭೆ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ‘ದೇಶ ವಿಭಜನೆ ಪ್ರಕ್ರಿಯೆಯು ಕೇವಲ ಭಯೋತ್ಪಾದಕರನ್ನಷ್ಟೇ ಪ್ರತ್ಯೇಕಗೊಳಿಸಲಿಲ್ಲ, ಭಾವನೆಗಳನ್ನೂ ಪ್ರತ್ಯೇಕವಾಗಿಸಿತು‘ ಎಂದು ಆರ್ಎಸ್ಎಸ್ ಮುಖಂಡ ರಾಮ್ ಮಾಧವ್ ಹೇಳಿದರು.</p>.<p class="title">‘ಪ್ರತ್ಯೇಕತಾವಾದದಲ್ಲಿ ನಂಬಿಕೆ ಹೊಂದಿರುವ ಶಕ್ತಿಗಳನ್ನು ಹತ್ತಿಕ್ಕುವುದರ ಜೊತೆಗೇ ‘ಭಾವನೆಗಳನ್ನು ಬೆಸೆಯುವ’ ಮಾರ್ಗಗಳನ್ನು ಹುಡುಕುವುದು ಈಗಿನ ಅಗತ್ಯವಾಗಿದೆ’ ಎಂದೂ ಅವರು ಪ್ರತಿಪಾದಿಸಿದರು.</p>.<p class="title">‘ಭಾರತ: ವಿಭಜನೆ ಮತ್ತು ಆ ನಂತರ: ತಲ್ಲಣಗಳ ಸ್ಮರಣಾ ದಿನ’ ಕುರಿತು ಜೆಎನ್ಯು ಶನಿವಾರ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಮಟ್ಟದ ವೆಬಿನಾರ್ನಲ್ಲಿ ಅವರು, ಸ್ವಾತಂತ್ರ್ಯ ಹೋರಾಟದ ಅವಧಿಯಲ್ಲಿ ಮಹಮ್ಮದ್ ಅಲಿ ಜಿನ್ನಾರನ್ನು ದೈತ್ಯವಾಗಿ ಬೆಳೆಯಲು ಬಿಡಲಾಯಿತು. ಇದೇ ವಿಭಜನೆಯ ದೃಢಸಂಕಲ್ಪಕ್ಕೆ ಕಾರಣವಾಯಿತು’ ಎಂದರು.</p>.<p class="title">ಮಹಮ್ಮದ್ ಅಲಿ ಜಿನ್ನಾ ಅವರು 20ನೇ ಶತಮಾನದ ಆರಂಭದಿಂದ, ಆಗಸ್ಟ್ 14,1947ರಲ್ಲಿ ಪಾಕಿಸ್ತಾನ ರಚನೆಯವರೆಗೂ ಆಲ್ ಇಂಡಿಯಾ ಮುಸ್ಲಿಂ ಲೀಗ್ ನಾಯಕರಾಗಿದ್ದರು.</p>.<p class="title">ಅಖಂಡ ಭಾರತದ ವಿಭಜನೆ ಎಂಬುದು ಆ ಕಾಲಘಟ್ಟದಲ್ಲಿ ಇತರೆ ದೇಶಗಳಲ್ಲಿ ಆದ ವಿಭಜನೆಯಂತೆ ಕೇವಲ ಗಡಿ ನಿಗದಿಪಡಿಸುವುದಷ್ಟೇ ಆಗಿರಲಿಲ್ಲ. ಆಚರಣೆಗಳು ಭಿನ್ನವಾಗಿದ್ದರೂ ಒಟ್ಟಿಗೇ ಬದುಕುತ್ತಿದ್ದ ಹಿಂದೂ, ಮುಸಲ್ಮಾನರ ಪ್ರತ್ಯೇಕ ದೇಶಗಳು ರಚನೆಯಾದವು. ಈ ವಿಭಜನೆಯು ಕೇವಲ ಭಯೋತ್ಪಾದಕರನ್ನಷ್ಟೇ ಪ್ರತ್ಯೇಕವಾಗಿಸಲಿಲ್ಲ. ಭಾವನೆಗಳನ್ನು ಪ್ರತ್ಯೇಕವಾಗಿಸಿತು. ಭಾವನೆಗಳ ಪ್ರತ್ಯೇಕತೆ ಎಂಬುದನ್ನು ಎಚ್ಚರಿಕೆ ಮತ್ತು ಗಂಭೀರವಾಗಿ ಪರಿಗಣಿಸಬೇಕು. ಈ ಕಾರಣದಿಂದ ಸಂಯುಕ್ತ ಭಾರತ ಸಮಾಜವನ್ನು ನಿರ್ಮಿಸಲು ಪ್ರತ್ಯೇಕತಾವಾದ ಮತ್ತು ಕೋಮುವಾದ ಚಿಂತನೆಗಳನ್ನು ಹತ್ತಿಕ್ಕಬೇಕು. ರಾಷ್ಟ್ರೀಯವಾದ ಚಿಂತನೆಗೆ ಉತ್ತೇಜನ ನೀಡಬೇಕು ಎಂದರು.</p>.<p class="bodytext">‘ಅಖಂಡ ಭಾರತ‘ದ ಕಲ್ಪನೆ ಎಂದರೆ ಕೇವಲ ಭೌಗೋಳಿಕ ಗಡಿಗಳನ್ನು ಸೇರಿಸುವುದಷ್ಟೇ ಅಲ್ಲ. ದೇಶ ವಿಭಜನೆಯ ಸಂದರ್ಭದಲ್ಲಿ ಮಾನಸಿಕವಾಗಿ ಮೂಡಿರುವ ಗಡಿಯನ್ನು, ಪ್ರತ್ಯೇಕತಾ ಭಾವನೆಯನ್ನು ತೆಗೆದುಹಾಕುವ ದೃಷ್ಟಿಕೋನದಿಂದ ನೋಡಬೇಕಾಗುತ್ತದೆ ಎಂದು ಹೇಳಿದರು.</p>.<p>ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯರೂ ಆದ ಮಾಧವ್, ದೇಶ ವಿಭಜನೆಯ ಬೆಳವಣಿಗೆಯನ್ನು ‘ತಪ್ಪು ತೀರ್ಮಾನದ ಕಾರಣ ಉಂಟಾದ ಪ್ರಮಾದ‘ ಎಂದು ಬಣ್ಣಿಸಿದರು.</p>.<p>ಪ್ರಧಾನಿ ನರೇಂದ್ರ ಮೋದಿ ಅವರು ಈಚೆಗೆ ಆಗಸ್ಟ್ 14 ಅನ್ನು ದೇಶ ವಿಭಜನೆಯ ನೋವುಗಳ ಸ್ಮರಣಾ ದಿನವಾಗಿ ಆಚರಿಸಲಾಗುವುದು ಎಂದು ಪ್ರಕಟಿಸಿದ್ದರು. ಆಗ, ವಿಭಜನೆ ವೇಳೆ ಅಸಂಖ್ಯ ಜನರು ವಸತಿ ಕಳೆದುಕೊಂಡರೆ, ವಿಭಜನೆಯ ಹಿಂಸೆ, ದ್ವೇಷದಿಂದ ಅನೇಕರು ಜೀವ ಕಳೆದುಕೊಂಡರು ಎಂದಿದ್ದರು.</p>.<p><a href="https://www.prajavani.net/world-news/sneha-dubey-speech-at-united-nations-slams-pakistan-pm-imran-khan-869819.html" itemprop="url">ವಿಶ್ವಸಂಸ್ಥೆಯಲ್ಲಿ ಪಾಕ್ ಪಿಎಂ ಇಮ್ರಾನ್ ಬೆವರಿಳಿಸಿದ ಅಧಿಕಾರಿಣಿ ಸ್ನೇಹಾ ದುಭೆ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>