<p><strong>ಮೊರೆನಾ:</strong> ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಹೈ–ಟೆನ್ಷನ್ ವಿದ್ಯುತ್ ತಂತಿ ತಗುಲಿ 6 ನವಿಲುಗಳು ಮೃತಪಟ್ಟಿವೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.</p><p>ದಿಮಿನಿ ಪ್ರದೇಶದ ಸ್ಮೃತಿ ಗ್ರಾಮದ ದೇಗುಲವ ಮುಂಭಾಗದಲ್ಲಿ ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದೆ.</p>.ರಾಯಚೂರು | ನಾಯಿ, ನವಿಲು ತಿಂದು ಊರು ಪ್ರವೇಶಿಸಿದ ಚಿರತೆ: ಜನರಲ್ಲಿ ಆತಂಕ.<p>ದೇಗುಲದ ಸಮೀಪ ಇರುವ ಗದ್ದೆಯಲ್ಲಿ ವಿಹರಿಸುತ್ತಿದ್ದ ನವಿಲುಗಳಿಗೆ ಹೈ–ಟೆನ್ಷನ್ ವಿದ್ಯುತ್ ತಂತಿ ಸ್ಪರ್ಶಿಸಿದ್ದು, ತಕ್ಷಣವೇ ಅಸುನೀಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.</p><p>ಘಟನೆ ಬಳಿಕ ವಿದ್ಯುತ್ ಸರಬರಾಜು ಕಂಪನಿ ಹಾಗೂ ಅರಣ್ಯಾಧಿಕಾರಿಗಳನ್ನುಸಂಪರ್ಕಿಸಿದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ ಎನ್ನುವುದು ಗ್ರಾಮಸ್ಥರ ಆರೋಪ. ಬಳಿಕ ಮೃತ ನವಿಲುಗಳ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.</p><p>ಗ್ರಾಮಸ್ಥರ ಫೋನ್ಗೆ ಸ್ಪಂದಿಸದೇ ಇದ್ದಿದ್ದು ಅಧಿಕಾರಿಗಳ ನಿರ್ಲಕ್ಷ್ಯ ಎಂದಿರುವ ಉತ್ತರ ವಲಯ ವಿದ್ಯುತ್ ಸರಬರಾಜು ಕಂಪನಿಯ ಪ್ರಧಾನ ವ್ಯವಸ್ಥಾಪಕ ವಿ.ಎಸ್ ಡಂಗಿ, ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.</p>.ನವಿಲು 'ಬ್ರಹ್ಮಚಾರಿ', ಹಾಗಾಗಿ ಅದನ್ನು ಭಾರತದ ರಾಷ್ಟ್ರಪಕ್ಷಿಯನ್ನಾಗಿ ಘೋಷಿಸಲಾಗಿದೆ!.<p>ಕಳೆದ ವಾರ ಮಧ್ಯಪ್ರದೇಶದ ಬುಡಕಟ್ಟು ಜನ ಹೆಚ್ಚಿರುವ ಜಬುಬಾ ಜಿಲ್ಲೆಯಲ್ಲಿ 11 ನವಿಲುಗಳು ಮೃತಪಟ್ಟಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದರು.</p><p>ಭಾರತದ ರಾಷ್ಟ್ರೀಯ ಪಕ್ಷಿಯಾಗಿರುವ ನವಿಲನ್ನು ವನ್ಯಜೀವಿ ಕಾಯ್ದೆಯ 1ನೇ ಪರಿಚ್ಛೇದಲ್ಲಿ ಸೇರಿಸಲಾಗಿದ್ದು, ಅತಿ ಹೆಚ್ಚು ರಕ್ಷಣೆ ನೀಡಬೇಕು ಎಂದು ಕಾನೂನು ಹೇಳುತ್ತದೆ.</p>.ಭಾರೀ ವ್ಯಂಗ್ಯಕ್ಕೆ ಗುರಿಯಾದ ನ್ಯಾಯಮೂರ್ತಿ ಮಹೇಶ್ಚಂದ್ರ ಶರ್ಮಾ ‘ನವಿಲು ಕಣ್ಣೀರಿ’ನ ಹೇಳಿಕೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೊರೆನಾ:</strong> ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಹೈ–ಟೆನ್ಷನ್ ವಿದ್ಯುತ್ ತಂತಿ ತಗುಲಿ 6 ನವಿಲುಗಳು ಮೃತಪಟ್ಟಿವೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.</p><p>ದಿಮಿನಿ ಪ್ರದೇಶದ ಸ್ಮೃತಿ ಗ್ರಾಮದ ದೇಗುಲವ ಮುಂಭಾಗದಲ್ಲಿ ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದೆ.</p>.ರಾಯಚೂರು | ನಾಯಿ, ನವಿಲು ತಿಂದು ಊರು ಪ್ರವೇಶಿಸಿದ ಚಿರತೆ: ಜನರಲ್ಲಿ ಆತಂಕ.<p>ದೇಗುಲದ ಸಮೀಪ ಇರುವ ಗದ್ದೆಯಲ್ಲಿ ವಿಹರಿಸುತ್ತಿದ್ದ ನವಿಲುಗಳಿಗೆ ಹೈ–ಟೆನ್ಷನ್ ವಿದ್ಯುತ್ ತಂತಿ ಸ್ಪರ್ಶಿಸಿದ್ದು, ತಕ್ಷಣವೇ ಅಸುನೀಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.</p><p>ಘಟನೆ ಬಳಿಕ ವಿದ್ಯುತ್ ಸರಬರಾಜು ಕಂಪನಿ ಹಾಗೂ ಅರಣ್ಯಾಧಿಕಾರಿಗಳನ್ನುಸಂಪರ್ಕಿಸಿದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ ಎನ್ನುವುದು ಗ್ರಾಮಸ್ಥರ ಆರೋಪ. ಬಳಿಕ ಮೃತ ನವಿಲುಗಳ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.</p><p>ಗ್ರಾಮಸ್ಥರ ಫೋನ್ಗೆ ಸ್ಪಂದಿಸದೇ ಇದ್ದಿದ್ದು ಅಧಿಕಾರಿಗಳ ನಿರ್ಲಕ್ಷ್ಯ ಎಂದಿರುವ ಉತ್ತರ ವಲಯ ವಿದ್ಯುತ್ ಸರಬರಾಜು ಕಂಪನಿಯ ಪ್ರಧಾನ ವ್ಯವಸ್ಥಾಪಕ ವಿ.ಎಸ್ ಡಂಗಿ, ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.</p>.ನವಿಲು 'ಬ್ರಹ್ಮಚಾರಿ', ಹಾಗಾಗಿ ಅದನ್ನು ಭಾರತದ ರಾಷ್ಟ್ರಪಕ್ಷಿಯನ್ನಾಗಿ ಘೋಷಿಸಲಾಗಿದೆ!.<p>ಕಳೆದ ವಾರ ಮಧ್ಯಪ್ರದೇಶದ ಬುಡಕಟ್ಟು ಜನ ಹೆಚ್ಚಿರುವ ಜಬುಬಾ ಜಿಲ್ಲೆಯಲ್ಲಿ 11 ನವಿಲುಗಳು ಮೃತಪಟ್ಟಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದರು.</p><p>ಭಾರತದ ರಾಷ್ಟ್ರೀಯ ಪಕ್ಷಿಯಾಗಿರುವ ನವಿಲನ್ನು ವನ್ಯಜೀವಿ ಕಾಯ್ದೆಯ 1ನೇ ಪರಿಚ್ಛೇದಲ್ಲಿ ಸೇರಿಸಲಾಗಿದ್ದು, ಅತಿ ಹೆಚ್ಚು ರಕ್ಷಣೆ ನೀಡಬೇಕು ಎಂದು ಕಾನೂನು ಹೇಳುತ್ತದೆ.</p>.ಭಾರೀ ವ್ಯಂಗ್ಯಕ್ಕೆ ಗುರಿಯಾದ ನ್ಯಾಯಮೂರ್ತಿ ಮಹೇಶ್ಚಂದ್ರ ಶರ್ಮಾ ‘ನವಿಲು ಕಣ್ಣೀರಿ’ನ ಹೇಳಿಕೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>