‘ವಾಸ್ತವ ಏನೆಂದರೆ, ತರಬೇತಿ ಭತ್ಯೆಯ ಮೊತ್ತವನ್ನು ಪರಿಷ್ಕರಿಸಲಾಗಿದೆ. ಈಗ ಈ ಎರಡೂ ವಿಭಾಗಗಳ ವಿದ್ಯಾರ್ಥಿಗಳಿಗೆ ನೀಡುವ ಭತ್ಯೆಯಲ್ಲಿ ದೊಡ್ಡ ವ್ಯತ್ಯಾಸ ಇಲ್ಲ’ ಎಂದು ಅವರು ವಿವರಿಸಿದರು. ಸ್ನಾತಕೋತ್ತರ ಅಲೋಪಥಿ ವಿದ್ಯಾರ್ಥಿಗಳು ನಿಭಾಯಿಸುವಂತಹ ಕೆಲಸಗಳನ್ನು ತಾವು ಮಾಡುತ್ತಿದ್ದರೂ, ಭತ್ಯೆಯ ವಿಚಾರದಲ್ಲಿ ತಮಗೆ ತಾರತಮ್ಯ ಎಸಗಲಾಗುತ್ತಿದೆ ಎಂದು ಸ್ನಾತಕೋತ್ತರ ಆಯುರ್ವೇದ ವಿದ್ಯಾರ್ಥಿಗಳು ವಾದಿಸಿದ್ದರು.