<p><strong>ತಿರುವನಂತಪುರ:</strong> ‘ಜೆಕ್ ಗಣರಾಜ್ಯದಲ್ಲಿ, ತ್ರಿವರ್ಣದ ಹಿನ್ನೆಲೆಯಲ್ಲಿ ಮಹಾತ್ಮಗಾಂಧಿ ಅವರ ರೇಖಾಚಿತ್ರವನ್ನು ಒಳಗೊಂಡು ಅವರ ಹೆಸರಿನಲ್ಲಿಯೇ ಬಿಡುಗಡೆ ಮಾಡಿರುವ ಬಿಯರ್ ಉತ್ಪನ್ನವನ್ನು ತಕ್ಷಣ ಹಿಂತೆಗೆದುಕೊಳ್ಳಬೇಕು’ ಎಂದು ಸ್ಥಳೀಯ ಸಂಘಟನೆಯೊಂದು ಜೆಕ್ ಗಣರಾಜ್ಯದ ಕಂಪನಿಗೆ ಆಗ್ರಹಪಡಿಸಿದೆ.</p>.<p>ಕಳೆದ ವಾರ ಇಸ್ರೇಲ್ ಮೂಲದ ಕಂಪನಿಯೊಂದು ಬಿಯರ್ ಬಾಟಲಿಗಳ ಮೇಲೆ ಮಹಾತ್ಮಾಗಾಂಧಿ ಅವರ ಚಿತ್ರವನ್ನು ಮುದ್ರಿಸಿತ್ತು. ತೀವ್ರ ವಿರೋಧ ವ್ಯಕ್ತವಾದ ಹಿಂದೆಯೇ ತನ್ನ ಕೃತ್ಯಕ್ಕಾಗಿ ಕ್ಷಮೆಯನ್ನು ಕೋರಿತ್ತು.</p>.<p>ಜೆಕ್ ಗಣರಾಜ್ಯದ ಕಂಪನಿ ಕೃತ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿರುವಕೇರಳ ಮೂಲದ ಮಹಾತ್ಮಗಾಂಧಿ ರಾಷ್ಟ್ರೀಯ ಪ್ರತಿಷ್ಠಾನವು ಸೋಮವಾರ ಅಲ್ಲಿನ ಸರ್ಕಾರ, ಭಾರತದಲ್ಲಿ ಇರುವ ಜೆಕ್ ಗಣರಾಜ್ಯದ ರಾಯಭಾರ ಕಚೇರಿಗೆ ಪತ್ರವನ್ನು ಬರೆದಿದೆ. ರಾಷ್ಟ್ರಪತಿ, ಪ್ರಧಾನಿ ಅವರಿಗೂ ಈ ಸಂಬಂಧ ಈ ಸಂಬಂಧ ಪತ್ರವನ್ನು ಬರೆದಿದೆ.</p>.<p>‘ಇದೊಂದು ಅಗೌರವ ಮತ್ತು ಅಪಮಾನಗೊಳಿಸುವ ಕೃತ್ಯ. ಕೂಡಲೇ ಬಿಯರ್ ಉತ್ಪನ್ನ ವಾಪಸು ತೆಗೆದುಕೊಳ್ಳಬೇಕು ಎಂದು ಆಗ್ರಹಪಡಿಸಿದೆ. ‘ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಜೆಕ್ ಗಣರಾಜ್ಯದ ರಾಯಭಾರ ಕಚೇರಿ ಉತ್ತರಿಸಿದೆ’ ಎಂದು ಪ್ರತಿಷ್ಠಾನದ ಅಧ್ಯಕ್ಷ ಎಬಿ ಜೆ. ಜೋಸ್ ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ:</strong> ‘ಜೆಕ್ ಗಣರಾಜ್ಯದಲ್ಲಿ, ತ್ರಿವರ್ಣದ ಹಿನ್ನೆಲೆಯಲ್ಲಿ ಮಹಾತ್ಮಗಾಂಧಿ ಅವರ ರೇಖಾಚಿತ್ರವನ್ನು ಒಳಗೊಂಡು ಅವರ ಹೆಸರಿನಲ್ಲಿಯೇ ಬಿಡುಗಡೆ ಮಾಡಿರುವ ಬಿಯರ್ ಉತ್ಪನ್ನವನ್ನು ತಕ್ಷಣ ಹಿಂತೆಗೆದುಕೊಳ್ಳಬೇಕು’ ಎಂದು ಸ್ಥಳೀಯ ಸಂಘಟನೆಯೊಂದು ಜೆಕ್ ಗಣರಾಜ್ಯದ ಕಂಪನಿಗೆ ಆಗ್ರಹಪಡಿಸಿದೆ.</p>.<p>ಕಳೆದ ವಾರ ಇಸ್ರೇಲ್ ಮೂಲದ ಕಂಪನಿಯೊಂದು ಬಿಯರ್ ಬಾಟಲಿಗಳ ಮೇಲೆ ಮಹಾತ್ಮಾಗಾಂಧಿ ಅವರ ಚಿತ್ರವನ್ನು ಮುದ್ರಿಸಿತ್ತು. ತೀವ್ರ ವಿರೋಧ ವ್ಯಕ್ತವಾದ ಹಿಂದೆಯೇ ತನ್ನ ಕೃತ್ಯಕ್ಕಾಗಿ ಕ್ಷಮೆಯನ್ನು ಕೋರಿತ್ತು.</p>.<p>ಜೆಕ್ ಗಣರಾಜ್ಯದ ಕಂಪನಿ ಕೃತ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿರುವಕೇರಳ ಮೂಲದ ಮಹಾತ್ಮಗಾಂಧಿ ರಾಷ್ಟ್ರೀಯ ಪ್ರತಿಷ್ಠಾನವು ಸೋಮವಾರ ಅಲ್ಲಿನ ಸರ್ಕಾರ, ಭಾರತದಲ್ಲಿ ಇರುವ ಜೆಕ್ ಗಣರಾಜ್ಯದ ರಾಯಭಾರ ಕಚೇರಿಗೆ ಪತ್ರವನ್ನು ಬರೆದಿದೆ. ರಾಷ್ಟ್ರಪತಿ, ಪ್ರಧಾನಿ ಅವರಿಗೂ ಈ ಸಂಬಂಧ ಈ ಸಂಬಂಧ ಪತ್ರವನ್ನು ಬರೆದಿದೆ.</p>.<p>‘ಇದೊಂದು ಅಗೌರವ ಮತ್ತು ಅಪಮಾನಗೊಳಿಸುವ ಕೃತ್ಯ. ಕೂಡಲೇ ಬಿಯರ್ ಉತ್ಪನ್ನ ವಾಪಸು ತೆಗೆದುಕೊಳ್ಳಬೇಕು ಎಂದು ಆಗ್ರಹಪಡಿಸಿದೆ. ‘ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಜೆಕ್ ಗಣರಾಜ್ಯದ ರಾಯಭಾರ ಕಚೇರಿ ಉತ್ತರಿಸಿದೆ’ ಎಂದು ಪ್ರತಿಷ್ಠಾನದ ಅಧ್ಯಕ್ಷ ಎಬಿ ಜೆ. ಜೋಸ್ ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>