ಇದೇ ವೇಳೆ ನೆರೆದಿದ್ದ ಸಾವಿರಾರು ಯಾತ್ರಿಗಳನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಅವರ ಭಾಷಣದ ಮುಖ್ಯಾಂಶಗಳು ಇಲ್ಲಿವೆ.
⦁ ಗುರುನಾನಕ್ ಅವರಬೋಧನೆಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡು ಮುನ್ನೆಡೆಯಬೇಕಿದೆ.
⦁ ಗುರುನಾನಕ್ ಅವರು ಏಕತೆಯ ಸಂದೇಶ ಸಾರಿದ್ದರು.
⦁ ಇನ್ನು ಮುಂದೆ ಕರ್ತಾರ್ಪುರದ ದರ್ಬಾರ್ ಸಾಹೀಬ್ ಗುರುದ್ವಾರಕ್ಕೆ ಎಲ್ಲ ಯಾತ್ರಿಗಳಿಗೂ ಪ್ರವೇಶ ದೊರೆಯಲಿದೆ
⦁ ಪೌರತ್ವ ತಿದ್ದುಪಡಿ ಕಾಯ್ದೆ ಸಿಖ್ಖರಿಗೆ ಸಹಾಯ ಮಾಡಲಿದೆ
⦁ ಜಮ್ಮು–ಕಾಶ್ಮೀರದಲ್ಲಿ 370 ವಿಧಿಯನ್ನು ತೆರವುಗೊಳಿಸಿದ ನಂತರ ಅಲ್ಲಿನ ಸಿಖ್ರಿಗೆ ಸಮಾನ ಹಕ್ಕುಗಳು ಸಿಕ್ಕಿವೆ
⦁ ಕರ್ತಾರ್ಪುರ ಕಾರಿಡಾರ್ ನಿರ್ಮಾಣಕ್ಕೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ
⦁ ಭಾರತೀಯರ ಭಾವನೆಗಳನ್ನು ಗೌರವಿಸಿದ ಇಮ್ರಾನ್ ಖಾನ್ ಅವರಿಗೆ ಧನ್ಯವಾದ ಹೇಳುತ್ತೇನೆ.