<p class="title"><strong>ನವದೆಹಲಿ:</strong> ವಿಶ್ವದಾದ್ಯಂತ ಬೌದ್ಧಧರ್ಮದ ಧಾರ್ಮಿಕ ಸ್ಥಳಗಳಿಗೆ ಸಂಪರ್ಕ ಕಲ್ಪಿಸಲಿರುವ ಉತ್ತರಪ್ರದೇಶದ ಖುಷಿನಗರ ಅಂತರರಾಷ್ಟ್ರೀಯ ವಿಮಾನನಿಲ್ದಾಣ ಉದ್ಘಾಟನೆಗೆ ಸಜ್ಜಾಗಿದೆ. ಪ್ರಧಾನಿ ನರೇಂದ್ರ ಮೋದಿ ಬುಧವಾರ ಉದ್ಘಾಟಿಸಲಿದ್ದು, ವಿವಿಧ ಅಭಿವೃದ್ಧಿ ಕಾರ್ಯಗಳಿಗೂ ಚಾಲನೆ ನೀಡುವರು.</p>.<p class="title">ವಿಮಾನನಿಲ್ದಾಣ ಉದ್ಘಾಟನೆಗೂ ಮುನ್ನ ಪ್ರಧಾನಿ ಅವರು ಅಲ್ಲಿನ ಮಹಾಪರಿನಿರ್ವಾಣ ದೇವಸ್ಥಾನದಲ್ಲಿ ನಡೆಯಲಿರುವ ‘ಅಭಿಧಮ್ಮ’ ಕಾರ್ಯಕ್ರಮದಲ್ಲಿಯೂ ಭಾಗಹಿಸುವರು ಎಂದು ಪ್ರಧಾನಮಂತ್ರಿ ಕಚೇರಿಯ ಹೇಳಿಕೆ ತಿಳಿಸಿದೆ. ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ಸಾರ್ವತ್ರಿಕ ಚುನಾವಣೆ ನಡೆಯಲಿದೆ.</p>.<p>ಉದ್ಟಾಟನೆಯ ದಿನ ಕೊಲಂಬೊದಿಂದ ಸುಮಾರು 100 ಮಂದಿ ಬೌದ್ಧ ಭಿಕ್ಕುಗಳ ನಿಯೋಗವನ್ನು ಹೊತ್ತ ವಿಮಾನವು ನಿಲ್ದಾಣದ ನೆಲಸ್ಪರ್ಶ ಮಾಡಲಿದೆ. ನಿಯೋಗದ ಜೊತೆಗೆ 12 ಮಹಾತ್ಮರ ಪವಿತ್ರ ಅವಶೇಷಗಳನ್ನು ತರಲಿದ್ದು, ಇಲ್ಲಿ ಪ್ರದರ್ಶನಕ್ಕಿಡಲಾಗುತ್ತದೆ.</p>.<p>ನಿಯೋಗದಲ್ಲಿ ಶ್ರೀಲಂಕಾದ ಬೌದ್ಧಧರ್ಮದಲ್ಲಿನ ಎಲ್ಲ ನಾಲ್ಕು ಹಂತದ ಅರುನಾಯಕರಾದ (ಉಪ ನಾಯಕರು) ಅಸ್ಗಿರಿಯ, ಅಮರಪುರ, ರಾಮಾಣ್ಯ, ಮಲ್ವಟ್ಟಾದ, ನಮಲ್ ರಾಜಪಕ್ಸೆ ನೇತೃತ್ವದ ಶ್ರೀಲಂಕಾದ ಐವರು ಸಚಿವರ ನಿಯೋಗವೂ ಮೊದಲ ವಿಮಾನದಲ್ಲಿ ಬರಲಿದೆ.</p>.<p>ವಿಮಾನ ನಿಲ್ದಾಣವನ್ನು ಅಂದಾಜು ₹ 260 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ದೇಶಿ ಮತ್ತು ಅಂತರರಾಷ್ಟ್ರೀಯ ವಿಮಾನ ಪ್ರಯಾಣಿಕರು ಬುದ್ಧನ ಮಹಾಪರಿನಿರ್ವಾಣ ತಾಣವನ್ನು ತಲುಪಲು ಸಂಪರ್ಕ ಕಲ್ಪಿಸಲಿದೆ. ಉತ್ತರ ಪ್ರದೇಶದ ಮತ್ತು ಬಿಹಾರದ ಸಮೀಪದ ಜಿಲ್ಲೆಗಳಲ್ಲಿ ಉದ್ಯೋಗಾವಕಾಶ ಮತ್ತು ಹೂಡಿಕೆ ಸಾಧ್ಯತೆಗಳು ಈ ನಿಲ್ದಾಣ ಅಭಿವೃದ್ಧಿಯಿಂದಾಗಿ ಹೆಚ್ಚಲಿವೆ ಎಂದು ಪ್ರಧಾನಮಂತ್ರಿ ಕಚೇರಿಯ ಹೇಳಿಕೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ:</strong> ವಿಶ್ವದಾದ್ಯಂತ ಬೌದ್ಧಧರ್ಮದ ಧಾರ್ಮಿಕ ಸ್ಥಳಗಳಿಗೆ ಸಂಪರ್ಕ ಕಲ್ಪಿಸಲಿರುವ ಉತ್ತರಪ್ರದೇಶದ ಖುಷಿನಗರ ಅಂತರರಾಷ್ಟ್ರೀಯ ವಿಮಾನನಿಲ್ದಾಣ ಉದ್ಘಾಟನೆಗೆ ಸಜ್ಜಾಗಿದೆ. ಪ್ರಧಾನಿ ನರೇಂದ್ರ ಮೋದಿ ಬುಧವಾರ ಉದ್ಘಾಟಿಸಲಿದ್ದು, ವಿವಿಧ ಅಭಿವೃದ್ಧಿ ಕಾರ್ಯಗಳಿಗೂ ಚಾಲನೆ ನೀಡುವರು.</p>.<p class="title">ವಿಮಾನನಿಲ್ದಾಣ ಉದ್ಘಾಟನೆಗೂ ಮುನ್ನ ಪ್ರಧಾನಿ ಅವರು ಅಲ್ಲಿನ ಮಹಾಪರಿನಿರ್ವಾಣ ದೇವಸ್ಥಾನದಲ್ಲಿ ನಡೆಯಲಿರುವ ‘ಅಭಿಧಮ್ಮ’ ಕಾರ್ಯಕ್ರಮದಲ್ಲಿಯೂ ಭಾಗಹಿಸುವರು ಎಂದು ಪ್ರಧಾನಮಂತ್ರಿ ಕಚೇರಿಯ ಹೇಳಿಕೆ ತಿಳಿಸಿದೆ. ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ಸಾರ್ವತ್ರಿಕ ಚುನಾವಣೆ ನಡೆಯಲಿದೆ.</p>.<p>ಉದ್ಟಾಟನೆಯ ದಿನ ಕೊಲಂಬೊದಿಂದ ಸುಮಾರು 100 ಮಂದಿ ಬೌದ್ಧ ಭಿಕ್ಕುಗಳ ನಿಯೋಗವನ್ನು ಹೊತ್ತ ವಿಮಾನವು ನಿಲ್ದಾಣದ ನೆಲಸ್ಪರ್ಶ ಮಾಡಲಿದೆ. ನಿಯೋಗದ ಜೊತೆಗೆ 12 ಮಹಾತ್ಮರ ಪವಿತ್ರ ಅವಶೇಷಗಳನ್ನು ತರಲಿದ್ದು, ಇಲ್ಲಿ ಪ್ರದರ್ಶನಕ್ಕಿಡಲಾಗುತ್ತದೆ.</p>.<p>ನಿಯೋಗದಲ್ಲಿ ಶ್ರೀಲಂಕಾದ ಬೌದ್ಧಧರ್ಮದಲ್ಲಿನ ಎಲ್ಲ ನಾಲ್ಕು ಹಂತದ ಅರುನಾಯಕರಾದ (ಉಪ ನಾಯಕರು) ಅಸ್ಗಿರಿಯ, ಅಮರಪುರ, ರಾಮಾಣ್ಯ, ಮಲ್ವಟ್ಟಾದ, ನಮಲ್ ರಾಜಪಕ್ಸೆ ನೇತೃತ್ವದ ಶ್ರೀಲಂಕಾದ ಐವರು ಸಚಿವರ ನಿಯೋಗವೂ ಮೊದಲ ವಿಮಾನದಲ್ಲಿ ಬರಲಿದೆ.</p>.<p>ವಿಮಾನ ನಿಲ್ದಾಣವನ್ನು ಅಂದಾಜು ₹ 260 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ದೇಶಿ ಮತ್ತು ಅಂತರರಾಷ್ಟ್ರೀಯ ವಿಮಾನ ಪ್ರಯಾಣಿಕರು ಬುದ್ಧನ ಮಹಾಪರಿನಿರ್ವಾಣ ತಾಣವನ್ನು ತಲುಪಲು ಸಂಪರ್ಕ ಕಲ್ಪಿಸಲಿದೆ. ಉತ್ತರ ಪ್ರದೇಶದ ಮತ್ತು ಬಿಹಾರದ ಸಮೀಪದ ಜಿಲ್ಲೆಗಳಲ್ಲಿ ಉದ್ಯೋಗಾವಕಾಶ ಮತ್ತು ಹೂಡಿಕೆ ಸಾಧ್ಯತೆಗಳು ಈ ನಿಲ್ದಾಣ ಅಭಿವೃದ್ಧಿಯಿಂದಾಗಿ ಹೆಚ್ಚಲಿವೆ ಎಂದು ಪ್ರಧಾನಮಂತ್ರಿ ಕಚೇರಿಯ ಹೇಳಿಕೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>