<p><strong>ಕೇದಾರನಾಥ:</strong>ಪ್ರಧಾನಿ ನರೇಂದ್ರ ಮೋದಿ ಬುಧವಾರ ದೀಪಾವಳಿ ಪ್ರಯುಕ್ತ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.</p>.<p>2017ರ ಅಕ್ಟೋಬರ್ನಲ್ಲಿ ಶಂಕು ಸ್ಥಾಪನೆ ನೆರವೇರಿಸಿದ್ದ ಕೇದಾರಪುರಿ ಯೋಜನೆಯ ಪರಿಶೀಲನೆ ನಡೆಸಿದರು. 2013ರ ಪ್ರವಾಹದಲ್ಲಿ ಸಾವಿರಾರು ಮಂದಿ ಪ್ರಾಣಕಳೆದುಕೊಂಡಿದ್ದರು ಹಾಗೂ ಇಲ್ಲಿನ ದೇವಾಲಯ, ಸುತ್ತಮುತ್ತಲಿನ ಪ್ರದೇಶಗಳಿಗೆ ಭಾರೀ ಹಾನಿಯಾಗಿತ್ತು.</p>.<p>ಮಂಗಳವಾರ ಕೇದರನಾಥ ದೇವಾಲಯ ಮತ್ತು ಸಮೀಪದ ಸ್ಥಳಗಳಲ್ಲಿ 5,100 ಹಣತೆಗಳನ್ನು ಬೆಳಗಿಸಲಾಗಿದೆ. ಉತ್ತರಾಖಂಡದ ಹರ್ಷಿಲ್ನಲ್ಲಿ ಭಾರತೀಯ ಸಶಸ್ತ್ರ ಪಡೆ ಯೋಧರನ್ನು ಭೇಟಿಯಾಗಿ ಸಿಹಿ ತಿನಿಸಿದರು.ಉತ್ತರಕಾಶಿ ಜಿಲ್ಲೆಯ ಭಾರತ–ಚೀನಾ ಗಡಿ ಪ್ರದೇಶದಲ್ಲಿ 7,860 ಅಡಿ ಎತ್ತರದಲ್ಲಿ ಹರ್ಷಿಲ್ ವಲಯವಿದೆ.</p>.<p>ಇಸ್ರೇಲ್ಪ್ರಧಾನಿ ಬೆಂಜಮಿನ್ ನೇತನ್ಯಾಹು ಮಂಗಳವಾರ ರಾತ್ರಿ ಪ್ರಧಾನಿ ಮೋದಿ ಅವರಿಗೆ ದೀಪಾವಳಿ ಶುಭಾಶಯ ತಿಳಿಸಿದ್ದು, ಈ ಬಾರಿ ಎಲ್ಲಿ ದೀಪಾವಳಿ ಆಚರಿಸುವಿರಿ ಎಂದು ಕೇಳಿದ್ದರು. ’ಪ್ರತಿ ವರ್ಷ ನಮ್ಮ ಗಡಿ ಪ್ರದೇಶಗಳಿಗೆ ಭೇಟಿ ನೀಡಿ, ಸೇನಾ ಪಡೆಗೆ ಅಚ್ಚರಿ ನೀಡುತ್ತೇನೆ. ಈ ಬಾರಿಯೂ ಸಹ ನಮ್ಮ ಧೈರ್ಯಶಾಲಿ ಯೋಧರೊಂದಿಗೆ ದೀಪಾವಳಿ ಆಚರಿಸುತ್ತಿದ್ದೇನೆ. ಅವರೊಂದಿಗೆ ಕಾಲ ಕಳೆಯುವುದೇವಿಶೇಷ’ ಎಂದು ಮೋದಿ ಟ್ವೀಟಿಸಿದ್ದಾರೆ. ನೇತನ್ಯಾಹು ಹಿಂದಿಯಲ್ಲಿ ಮಾಡಿರುವ ಟ್ವೀಟ್ಗೆ, ಮೋದಿ ಹಿಬ್ರು ಭಾಷೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.</p>.<p>ಪ್ರಧಾನಿ ಮೋದಿ ಪಂಜಾಬ್ ಗಡಿ ಭಾಗಕ್ಕೆ ತಲುಪಲಿದ್ದು, ಅಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೇದಾರನಾಥ:</strong>ಪ್ರಧಾನಿ ನರೇಂದ್ರ ಮೋದಿ ಬುಧವಾರ ದೀಪಾವಳಿ ಪ್ರಯುಕ್ತ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.</p>.<p>2017ರ ಅಕ್ಟೋಬರ್ನಲ್ಲಿ ಶಂಕು ಸ್ಥಾಪನೆ ನೆರವೇರಿಸಿದ್ದ ಕೇದಾರಪುರಿ ಯೋಜನೆಯ ಪರಿಶೀಲನೆ ನಡೆಸಿದರು. 2013ರ ಪ್ರವಾಹದಲ್ಲಿ ಸಾವಿರಾರು ಮಂದಿ ಪ್ರಾಣಕಳೆದುಕೊಂಡಿದ್ದರು ಹಾಗೂ ಇಲ್ಲಿನ ದೇವಾಲಯ, ಸುತ್ತಮುತ್ತಲಿನ ಪ್ರದೇಶಗಳಿಗೆ ಭಾರೀ ಹಾನಿಯಾಗಿತ್ತು.</p>.<p>ಮಂಗಳವಾರ ಕೇದರನಾಥ ದೇವಾಲಯ ಮತ್ತು ಸಮೀಪದ ಸ್ಥಳಗಳಲ್ಲಿ 5,100 ಹಣತೆಗಳನ್ನು ಬೆಳಗಿಸಲಾಗಿದೆ. ಉತ್ತರಾಖಂಡದ ಹರ್ಷಿಲ್ನಲ್ಲಿ ಭಾರತೀಯ ಸಶಸ್ತ್ರ ಪಡೆ ಯೋಧರನ್ನು ಭೇಟಿಯಾಗಿ ಸಿಹಿ ತಿನಿಸಿದರು.ಉತ್ತರಕಾಶಿ ಜಿಲ್ಲೆಯ ಭಾರತ–ಚೀನಾ ಗಡಿ ಪ್ರದೇಶದಲ್ಲಿ 7,860 ಅಡಿ ಎತ್ತರದಲ್ಲಿ ಹರ್ಷಿಲ್ ವಲಯವಿದೆ.</p>.<p>ಇಸ್ರೇಲ್ಪ್ರಧಾನಿ ಬೆಂಜಮಿನ್ ನೇತನ್ಯಾಹು ಮಂಗಳವಾರ ರಾತ್ರಿ ಪ್ರಧಾನಿ ಮೋದಿ ಅವರಿಗೆ ದೀಪಾವಳಿ ಶುಭಾಶಯ ತಿಳಿಸಿದ್ದು, ಈ ಬಾರಿ ಎಲ್ಲಿ ದೀಪಾವಳಿ ಆಚರಿಸುವಿರಿ ಎಂದು ಕೇಳಿದ್ದರು. ’ಪ್ರತಿ ವರ್ಷ ನಮ್ಮ ಗಡಿ ಪ್ರದೇಶಗಳಿಗೆ ಭೇಟಿ ನೀಡಿ, ಸೇನಾ ಪಡೆಗೆ ಅಚ್ಚರಿ ನೀಡುತ್ತೇನೆ. ಈ ಬಾರಿಯೂ ಸಹ ನಮ್ಮ ಧೈರ್ಯಶಾಲಿ ಯೋಧರೊಂದಿಗೆ ದೀಪಾವಳಿ ಆಚರಿಸುತ್ತಿದ್ದೇನೆ. ಅವರೊಂದಿಗೆ ಕಾಲ ಕಳೆಯುವುದೇವಿಶೇಷ’ ಎಂದು ಮೋದಿ ಟ್ವೀಟಿಸಿದ್ದಾರೆ. ನೇತನ್ಯಾಹು ಹಿಂದಿಯಲ್ಲಿ ಮಾಡಿರುವ ಟ್ವೀಟ್ಗೆ, ಮೋದಿ ಹಿಬ್ರು ಭಾಷೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.</p>.<p>ಪ್ರಧಾನಿ ಮೋದಿ ಪಂಜಾಬ್ ಗಡಿ ಭಾಗಕ್ಕೆ ತಲುಪಲಿದ್ದು, ಅಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>