<p><strong>ನವದೆಹಲಿ:</strong> ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಹಿಂದೆ ಅಡಗಿಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಗುರುವಾರ ಆರೋಪಿಸಿದ್ದಾರೆ.</p><p>ಇದೇ ವೇಳೆ, ಪ್ರಧಾನಿಗೆ ವಿಪಕ್ಷಗಳು ನೋವುಂಟು ಮಾಡುವ ಯೋಜನೆ ಇದೆ ಎಂಬುದು ‘ಸಂಪೂರ್ಣ ಸುಳ್ಳು’ ಎಂದು ಹೇಳಿದ್ದಾರೆ. </p><p>ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ಸಂದರ್ಭದಲ್ಲಿ ವಿಪಕ್ಷಗಳು ‘ಅನಿರೀಕ್ಷಿತ ಕೃತ್ಯ’ ಎಸಗಬಹುದು ಎಂಬ ಕಾರಣ ನೀಡಿ, ಸ್ಪೀಕರ್ ಓಂ ಬಿರ್ಲಾ ಅವರು ಮೋದಿಯವರಿಗೆ ಭಾಷಣ ಮಾಡಲು ಸದನಕ್ಕೆ ಬಾರದಂತೆ ಕೇಳಿಕೊಂಡಿರುವುದಾಗಿ ತಿಳಿಸಿದ ಬಳಿಕ, ಪ್ರಿಯಾಂಕ ಗಾಂಧಿ ಈ ಹೇಳಿಕೆ ನೀಡಿದ್ದಾರೆ. </p><p>ಕಲಾಪದ ಸಂದರ್ಭದಲ್ಲಿ ವಿರೋಧ ಪಕ್ಷದ ಸದಸ್ಯರನ್ನು ತರಾಟೆಗೆ ತೆಗೆದುಕೊಂಡ ಸ್ಪೀಕರ್, ಬುಧವಾರ ತಮ್ಮ ಕಚೇರಿಯಲ್ಲಿ ಕೆಲವು ಸದಸ್ಯರು ನಡೆದುಕೊಂಡ ವರ್ತನೆ ಸರಿಯಾಗಿರಲಿಲ್ಲ. ಅದು, ಸಂಸದರ ಘನತೆಗೆ ’ಕಪ್ಪು ಚುಕ್ಕೆ’ ತರುವಂತದ್ದು ಎಂದು ಹೇಳಿದ್ದಾರೆ.</p><p>ಈ ಬಗ್ಗೆ ಮಾತನಾಡಿದ ಪ್ರಿಯಾಂಕ ಗಾಂಧಿ, ಪ್ರಧಾನಿಗೆ ಸದನಕ್ಕೆ ಬರುವ ಧೈರ್ಯವಿರಲಿಲ್ಲ. ಹಾಗಾಗಿ ಸರ್ಕಾರ ಸ್ಪೀಕರ್ ಮೂಲಕ ಇದನ್ನೆಲ್ಲಾ ಹೇಳಿಸುತ್ತಿದೆ ಎಂದು ಆರೋಪಿಸಿದರು.</p><p>‘ಸ್ಪೀಕರ್ ಹೇಳಿಕೆ ಸಂಪೂರ್ಣ ಸುಳ್ಳು. ಸದನದಲ್ಲಿ ಪ್ರಧಾನಿಯವರ ಮೇಲೆ ಯಾರಾದರೂ ಕೈ ಎತ್ತಲು, ಅವರಿಗೆ ನೋವುಂಟು ಮಾಡಲು ಪ್ರಯತ್ನಿಸಲು ಸಾಧ್ಯವೇ? ಆ ರೀತಿಯ ಯಾವುದೇ ಯೋಜನೆ ವಿಪಕ್ಷದ ಸದಸ್ಯರಲ್ಲಿ ಇರಲಿಲ್ಲ. ಅದಾಗ್ಯೂ, ಆ ರೀತಿಯ ಯೋಜನೆ ಇತ್ತು ಎಂದು ಯಾರೇ ಹೇಳಿದರೂ, ಅದು ಸಂಪೂರ್ಣ ತಪ್ಪು ಹೇಳಿಕೆ’ ಎಂದು ಪ್ರಿಯಕಾ ಗಾಂಧಿ ಸಂಸತ್ ಭವನದಲ್ಲಿ ಸುದ್ದಿಗಾರರಿಗೆ ತಿಳಿಸಿದರು.</p><p>‘ನೀವು, ನಿಮ್ಮ ಸದಸ್ಯರಿಗೆ ಪುಸ್ತಕಗಳನ್ನು ಉಲ್ಲೇಖಿಸಲು, ಅಸಂಬದ್ಧವಾಗಿ ಮಾತನಾಡಲು ಅವಕಾಶ ನೀಡಿದರೆ, ವಿರೋಧ ಪಕ್ಷದ ಸದಸ್ಯರು ಪ್ರತಿಭಟನೆ ನಡೆಸುತ್ತಾರೆ. ಪ್ರಧಾನಿಯವರು ಸ್ಪೀಕರ್ ಹಿಂದೆ ಅಡಗಿಕೊಂಡಿದ್ದಾರೆ. ನಿನ್ನೆ ಮೋದಿಯವರಿಗೆ ಸದನಕ್ಕೆ ಬರುವ ಧೈರ್ಯ ಇಲ್ಲವಾದ್ದರಿಂದ ಅವರು ಸ್ಪೀಕರ್ ಮೂಲಕ ಇದನ್ನೆಲ್ಲಾ ಹೇಳಿಸುತ್ತಿದ್ದಾರೆ.</p>.ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯಇದೆ: ಪ್ರಿಯಾಂಕಾ ಗಾಂಧಿ.ಭಾರತ–ಚೀನಾ ಬಿಕ್ಕಟ್ಟು: ಮೋದಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸಲಿಲ್ಲ ಎಂದ ರಾಹುಲ್.<p>ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನಿಗೆ ಮಾತನಾಡಲು ಏಕೆ ಅವಕಾಶ ನೀಡಲಿಲ್ಲ ಎಂದು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಸರ್ಕಾರವನ್ನು ಕೇಳಬೇಕು ಎಂದು ಅವರು ಮಾಧ್ಯಮಗಳಿಗೆ ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಹಿಂದೆ ಅಡಗಿಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಗುರುವಾರ ಆರೋಪಿಸಿದ್ದಾರೆ.</p><p>ಇದೇ ವೇಳೆ, ಪ್ರಧಾನಿಗೆ ವಿಪಕ್ಷಗಳು ನೋವುಂಟು ಮಾಡುವ ಯೋಜನೆ ಇದೆ ಎಂಬುದು ‘ಸಂಪೂರ್ಣ ಸುಳ್ಳು’ ಎಂದು ಹೇಳಿದ್ದಾರೆ. </p><p>ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ಸಂದರ್ಭದಲ್ಲಿ ವಿಪಕ್ಷಗಳು ‘ಅನಿರೀಕ್ಷಿತ ಕೃತ್ಯ’ ಎಸಗಬಹುದು ಎಂಬ ಕಾರಣ ನೀಡಿ, ಸ್ಪೀಕರ್ ಓಂ ಬಿರ್ಲಾ ಅವರು ಮೋದಿಯವರಿಗೆ ಭಾಷಣ ಮಾಡಲು ಸದನಕ್ಕೆ ಬಾರದಂತೆ ಕೇಳಿಕೊಂಡಿರುವುದಾಗಿ ತಿಳಿಸಿದ ಬಳಿಕ, ಪ್ರಿಯಾಂಕ ಗಾಂಧಿ ಈ ಹೇಳಿಕೆ ನೀಡಿದ್ದಾರೆ. </p><p>ಕಲಾಪದ ಸಂದರ್ಭದಲ್ಲಿ ವಿರೋಧ ಪಕ್ಷದ ಸದಸ್ಯರನ್ನು ತರಾಟೆಗೆ ತೆಗೆದುಕೊಂಡ ಸ್ಪೀಕರ್, ಬುಧವಾರ ತಮ್ಮ ಕಚೇರಿಯಲ್ಲಿ ಕೆಲವು ಸದಸ್ಯರು ನಡೆದುಕೊಂಡ ವರ್ತನೆ ಸರಿಯಾಗಿರಲಿಲ್ಲ. ಅದು, ಸಂಸದರ ಘನತೆಗೆ ’ಕಪ್ಪು ಚುಕ್ಕೆ’ ತರುವಂತದ್ದು ಎಂದು ಹೇಳಿದ್ದಾರೆ.</p><p>ಈ ಬಗ್ಗೆ ಮಾತನಾಡಿದ ಪ್ರಿಯಾಂಕ ಗಾಂಧಿ, ಪ್ರಧಾನಿಗೆ ಸದನಕ್ಕೆ ಬರುವ ಧೈರ್ಯವಿರಲಿಲ್ಲ. ಹಾಗಾಗಿ ಸರ್ಕಾರ ಸ್ಪೀಕರ್ ಮೂಲಕ ಇದನ್ನೆಲ್ಲಾ ಹೇಳಿಸುತ್ತಿದೆ ಎಂದು ಆರೋಪಿಸಿದರು.</p><p>‘ಸ್ಪೀಕರ್ ಹೇಳಿಕೆ ಸಂಪೂರ್ಣ ಸುಳ್ಳು. ಸದನದಲ್ಲಿ ಪ್ರಧಾನಿಯವರ ಮೇಲೆ ಯಾರಾದರೂ ಕೈ ಎತ್ತಲು, ಅವರಿಗೆ ನೋವುಂಟು ಮಾಡಲು ಪ್ರಯತ್ನಿಸಲು ಸಾಧ್ಯವೇ? ಆ ರೀತಿಯ ಯಾವುದೇ ಯೋಜನೆ ವಿಪಕ್ಷದ ಸದಸ್ಯರಲ್ಲಿ ಇರಲಿಲ್ಲ. ಅದಾಗ್ಯೂ, ಆ ರೀತಿಯ ಯೋಜನೆ ಇತ್ತು ಎಂದು ಯಾರೇ ಹೇಳಿದರೂ, ಅದು ಸಂಪೂರ್ಣ ತಪ್ಪು ಹೇಳಿಕೆ’ ಎಂದು ಪ್ರಿಯಕಾ ಗಾಂಧಿ ಸಂಸತ್ ಭವನದಲ್ಲಿ ಸುದ್ದಿಗಾರರಿಗೆ ತಿಳಿಸಿದರು.</p><p>‘ನೀವು, ನಿಮ್ಮ ಸದಸ್ಯರಿಗೆ ಪುಸ್ತಕಗಳನ್ನು ಉಲ್ಲೇಖಿಸಲು, ಅಸಂಬದ್ಧವಾಗಿ ಮಾತನಾಡಲು ಅವಕಾಶ ನೀಡಿದರೆ, ವಿರೋಧ ಪಕ್ಷದ ಸದಸ್ಯರು ಪ್ರತಿಭಟನೆ ನಡೆಸುತ್ತಾರೆ. ಪ್ರಧಾನಿಯವರು ಸ್ಪೀಕರ್ ಹಿಂದೆ ಅಡಗಿಕೊಂಡಿದ್ದಾರೆ. ನಿನ್ನೆ ಮೋದಿಯವರಿಗೆ ಸದನಕ್ಕೆ ಬರುವ ಧೈರ್ಯ ಇಲ್ಲವಾದ್ದರಿಂದ ಅವರು ಸ್ಪೀಕರ್ ಮೂಲಕ ಇದನ್ನೆಲ್ಲಾ ಹೇಳಿಸುತ್ತಿದ್ದಾರೆ.</p>.ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯಇದೆ: ಪ್ರಿಯಾಂಕಾ ಗಾಂಧಿ.ಭಾರತ–ಚೀನಾ ಬಿಕ್ಕಟ್ಟು: ಮೋದಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸಲಿಲ್ಲ ಎಂದ ರಾಹುಲ್.<p>ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನಿಗೆ ಮಾತನಾಡಲು ಏಕೆ ಅವಕಾಶ ನೀಡಲಿಲ್ಲ ಎಂದು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಸರ್ಕಾರವನ್ನು ಕೇಳಬೇಕು ಎಂದು ಅವರು ಮಾಧ್ಯಮಗಳಿಗೆ ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>