ಶ್ರೀನಗರ: ಪಾಕಿಸ್ತಾನ ಮೂಲಕ ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತಿದ್ದ ಇಬ್ಬರು ಉಗ್ರರ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಜಮ್ಮು ಮತ್ತು ಕಾಶ್ಮೀರ ಜಿಲ್ಲೆಯ ಬಾರಾಮುಲ್ಲಾ ಜಿಲ್ಲೆಯಲ್ಲಿ ಮಂಗಳವಾರ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.
ಉರಿಯ ಅಧೀನ ನ್ಯಾಯಾಧೀಶರ ಆದೇಶದ ಮೇರಿಗೆ ಈ ಕ್ರಮ ಕೈಗೊಳ್ಳಲಾಗಿದೆ. ಉಗ್ರರನ್ನು ಝಾಂಬೂರ್ ಪಟ್ಟಾನ್ ನಿವಾಸಿ ಜಲಾಲ್ ದಿನ್ ಮತ್ತು ಕಲಮ್ಕೋಟೆ ಉರಿ ನಿವಾಸಿ ಮೊಹಮ್ಮದ್ ಸಾಕಿ ಎಂದು ಗುರುತಿಸಲಾಗಿದೆ ಎಂದು ತಿಳಿಸಿದರು.