ಸಜ್ಜದ್ ಜೊತೆಇದ್ದ ಇನ್ನೊಬ್ಬ ಉಗ್ರ ತೌಸಿಫ್ ಭಟ್ ಆತ್ಮಾಹುತಿ ದಾಳಿಕೋರನಿಗೆ ರೂಪುರೇಷೆಯನ್ನು ಸಿದ್ಧಪಡಿಸಿಕೊಟ್ಟಿದ್ದಲ್ಲದೆ, ದಾಳಿ ನಡೆಯುವವರೆಗೂ ಆತನನ್ನು ನಿಯಂತ್ರಿಸಿದ್ದ. ಅನಂತನಾಗ್ ಜಿಲ್ಲೆಯ ಬಿಜ್ಬೆಹರಾ ಪ್ರದೇಶದ ಮರ್ಹಾಮಾ ಗ್ರಾಮದಲ್ಲಿಈ ಇಬ್ಬರು ಉಗ್ರರು ಅಡಗಿರುವ ಕುರಿತು ಖಚಿತ ಮಾಹಿತಿ ಪಡೆದ ಸೇನೆ ಸೋಮವಾರ ಸಂಜೆಯಿಂದಲೇ ಕಾರ್ಯಾಚರಣೆ ನಡೆಸಿತ್ತು. ಗುಂಡಿನ ಚಕಮಕಿಯಲ್ಲಿ ಒಬ್ಬ ಸೈನಿಕ ಕೂಡ ಹುತಾತ್ಮರಾಗಿದ್ದಾರೆ.