ಪೋಶೆ ಕಾರು ಅಪಘಾತದ ಪ್ರಕರಣದಲ್ಲಿ, ನಾನೇ ಕಾರು ಚಲಾಯಿಸುತ್ತಿದ್ದುದಾಗಿ ತಪ್ಪೊಪ್ಪಿಗೆ ನೀಡುವಂತೆ ಬಾಲಕನ ತಂದೆ ವಿಶಾಲ್ ಅಗರವಾಲ್, ತಾತ ಸುರೇಂದ್ರ ಅಗರವಾಲ್ (77) ಕುಟುಂಬದ ವಾಹನದ ಚಾಲಕನಿಗೆ ಒತ್ತಡ ಹೇರಿದ್ದರು. ತಪ್ಪೊಪ್ಪಿಗೆ ನೀಡಲು ಹಣದ ಆಮಿಷ ಒಡ್ಡುವ ಜೊತೆಗೆ, ಬೆದರಿಕೆಯನ್ನು ಒಡ್ಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.