ಇಲ್ಲಿನ ಬೆಟುವಾ ಹಾಗೂ ಭಾದರ್ನಲ್ಲಿ ಚುನಾವಣಾ ಸಭೆಯಲ್ಲಿ ಮಾತನಾಡಿದ ಅವರು, ‘ಏ.26ರಂದು ವಯನಾಡಿನಲ್ಲಿ ಮತದಾನ ನಡೆದ ಬಳಿಕ, ಇಲ್ಲಿಗೆ ಬಂದು, ಅಮೇಠಿ ನನ್ನ ಕುಟುಂಬ ಎಂದು ಹೇಳುತ್ತಾರೆ. ಸಮಾಜದಲ್ಲಿ ಜಾತೀಯತೆಯ ಬೆಂಕಿಯನ್ನು ಹೊತ್ತಿಸುತ್ತಾರೆ’ ಎಂದು ಆರೋಪಿಸಿದರು.
ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆಯ ಆಹ್ವಾನವನ್ನು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ತಿರಸ್ಕರಿಸಿತ್ತು. ಆದರೆ ಇಲ್ಲಿಗೆ ಬಂದು ದೇಗುಲಗಳಿಗೆ ಭೇಟಿ ನೀಡುತ್ತಾರೆ. ನೀವು ಇದರ ಬಗ್ಗೆ ಎಚ್ಚರದಿಂದ ಇರಬೇಕು’ ಎಂದು ಜನರಿಗೆ ಹೇಳಿದರು.