<p><strong>ಶಾಜಾಪುರ (ಮಧ್ಯಪ್ರದೇಶ):</strong> ಸಮಾಜ ಸುಧಾರಕ ರಾಜರಾಮ್ ಮೋಹನ್ ರಾಯ್ ಅವರನ್ನು ಬ್ರಿಟಿಷ್ ಏಜೆಂಟ್ ಎಂದು ಕರೆದಿದ್ದ ಮಧ್ಯಪ್ರದೇಶ ಸಚಿವ ಹಾಗೂ ಬಿಜೆಪಿ ನಾಯಕ ಇಂದರ್ ಸಿಂಗ್ ಪರ್ಮಾರ್ ಅವರು ಭಾನುವಾರ ಕ್ಷಮೆಯಾಚಿದ್ದಾರೆ. </p><p>ರಾಜರಾಮ್ ಮೋಹನ್ ರಾಯ್ ಕುರಿತ ಹೇಳಿಕೆಯು ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಇಂದರ್ ಸಿಂಗ್, ‘ಬಾಯಿತಪ್ಪಿನಿಂದ ಹೇಳಿಕೆ ನೀಡಿದ್ದು, ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಅವರು ಸಮಾಜ ಸುಧಾರಕರಾಗಿದ್ದು, ಅವರಿಗೆ ಗೌರವ ಸಲ್ಲಬೇಕು’ಎಂದು ಹೇಳಿದ್ದಾರೆ. </p><p>ಮಧ್ಯಪ್ರದೇಶದ ಅಗರ್ ಮಾಲ್ವಾದಲ್ಲಿ ನಡೆದಿದ್ದ ಬುಡಕಟ್ಟು ಜನಾಂಗದ ನಾಯಕ ಬಿರ್ಸಾ ಮುಂಡಾ ಅವರ 150ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು, ‘ರಾಜರಾಮ್ ಮೋಹನ್ ರಾಯ್ ಅವರು ಬ್ರಿಟಿಷರ ಪರವಾಗಿದ್ದರು. ಭಾರತದಲ್ಲಿ ಧರ್ಮ ಪರಿವರ್ತನೆ ಮಾಡಲು ಬ್ರಿಟಿಷರಿಗೆ ನೆರವಾಗಿದ್ದರು’ ಎಂದು ಹೇಳಿದ್ದರು. </p><p>ಬ್ರಿಟಿಷರು ಅವರಿಗೆ ನೆರವಾಗುತ್ತಿದ್ದ ಕೆಲವರನ್ನು ಸಮಾಜ ಸುಧಾರಕ ಎಂದು ಬಿಂಬಿಸುತ್ತಿದ್ದರು. ಅಂತಹ ನಕಲಿ ಸಮಾಜ ಸುಧಾರಕರು ಧರ್ಮ ಪರಿವರ್ತನೆಯನ್ನು ಬೆಂಬಲಿಸುತ್ತಿದ್ದರು. ಬಿರ್ಸಾ ಮುಂಡಾ ಅವರು ಇಂತವರನ್ನು ತಡೆಯುವ ಮೂಲಕ, ಬುಡಕಟ್ಟು ಜನಾಂಗವನ್ನು ರಕ್ಷಿಸಿದ್ದರು ಎಂದಿದ್ದರು. </p><p>ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಮಿಷನರಿ ಶಾಲೆಗಳು ಶೈಕ್ಷಣಿಕ ಕೇಂದ್ರಗಳಾಗಿದ್ದವು ಹಾಗೂ ಶಿಕ್ಷಣದ ಮೂಲಕ ಧರ್ಮ ಪರಿವರ್ತನೆಯನ್ನು ಮುಚ್ಚಿಡುವ ಕೆಲಸವನ್ನು ಮಾಡಲಾಗುತ್ತಿತ್ತು ಎಂದು ಹೇಳಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಾಜಾಪುರ (ಮಧ್ಯಪ್ರದೇಶ):</strong> ಸಮಾಜ ಸುಧಾರಕ ರಾಜರಾಮ್ ಮೋಹನ್ ರಾಯ್ ಅವರನ್ನು ಬ್ರಿಟಿಷ್ ಏಜೆಂಟ್ ಎಂದು ಕರೆದಿದ್ದ ಮಧ್ಯಪ್ರದೇಶ ಸಚಿವ ಹಾಗೂ ಬಿಜೆಪಿ ನಾಯಕ ಇಂದರ್ ಸಿಂಗ್ ಪರ್ಮಾರ್ ಅವರು ಭಾನುವಾರ ಕ್ಷಮೆಯಾಚಿದ್ದಾರೆ. </p><p>ರಾಜರಾಮ್ ಮೋಹನ್ ರಾಯ್ ಕುರಿತ ಹೇಳಿಕೆಯು ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಇಂದರ್ ಸಿಂಗ್, ‘ಬಾಯಿತಪ್ಪಿನಿಂದ ಹೇಳಿಕೆ ನೀಡಿದ್ದು, ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಅವರು ಸಮಾಜ ಸುಧಾರಕರಾಗಿದ್ದು, ಅವರಿಗೆ ಗೌರವ ಸಲ್ಲಬೇಕು’ಎಂದು ಹೇಳಿದ್ದಾರೆ. </p><p>ಮಧ್ಯಪ್ರದೇಶದ ಅಗರ್ ಮಾಲ್ವಾದಲ್ಲಿ ನಡೆದಿದ್ದ ಬುಡಕಟ್ಟು ಜನಾಂಗದ ನಾಯಕ ಬಿರ್ಸಾ ಮುಂಡಾ ಅವರ 150ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು, ‘ರಾಜರಾಮ್ ಮೋಹನ್ ರಾಯ್ ಅವರು ಬ್ರಿಟಿಷರ ಪರವಾಗಿದ್ದರು. ಭಾರತದಲ್ಲಿ ಧರ್ಮ ಪರಿವರ್ತನೆ ಮಾಡಲು ಬ್ರಿಟಿಷರಿಗೆ ನೆರವಾಗಿದ್ದರು’ ಎಂದು ಹೇಳಿದ್ದರು. </p><p>ಬ್ರಿಟಿಷರು ಅವರಿಗೆ ನೆರವಾಗುತ್ತಿದ್ದ ಕೆಲವರನ್ನು ಸಮಾಜ ಸುಧಾರಕ ಎಂದು ಬಿಂಬಿಸುತ್ತಿದ್ದರು. ಅಂತಹ ನಕಲಿ ಸಮಾಜ ಸುಧಾರಕರು ಧರ್ಮ ಪರಿವರ್ತನೆಯನ್ನು ಬೆಂಬಲಿಸುತ್ತಿದ್ದರು. ಬಿರ್ಸಾ ಮುಂಡಾ ಅವರು ಇಂತವರನ್ನು ತಡೆಯುವ ಮೂಲಕ, ಬುಡಕಟ್ಟು ಜನಾಂಗವನ್ನು ರಕ್ಷಿಸಿದ್ದರು ಎಂದಿದ್ದರು. </p><p>ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಮಿಷನರಿ ಶಾಲೆಗಳು ಶೈಕ್ಷಣಿಕ ಕೇಂದ್ರಗಳಾಗಿದ್ದವು ಹಾಗೂ ಶಿಕ್ಷಣದ ಮೂಲಕ ಧರ್ಮ ಪರಿವರ್ತನೆಯನ್ನು ಮುಚ್ಚಿಡುವ ಕೆಲಸವನ್ನು ಮಾಡಲಾಗುತ್ತಿತ್ತು ಎಂದು ಹೇಳಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>