<p class="title"><strong>ಡೆಹ್ರಾಡೂನ್:</strong> ‘ಭಾರತಕ್ಕೆ ನೆರೆರಾಷ್ಟ್ರದ ಭೂ ಪ್ರದೇಶ ಪಡೆಯಬೇಕು ಎಂಬ ಮಹತ್ವಾಕಾಂಕ್ಷೆಯಿಲ್ಲ. ಆದರೆ ಭಯೋತ್ಪಾದನೆಯನ್ನು ವಿದೇಶಾಂಗ ನೀತಿಯಂತೆ ಅನುಸರಿಸುತ್ತಿರುವ ಪಾಕಿಸ್ತಾನದ ವಿರುದ್ಧ ಸಶಸ್ತ್ರ ಪಡೆಗಳು ಎಚ್ಚರದಿಂದ ಇರಬೇಕು’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶನಿವಾರ ಹೇಳಿದರು.</p>.<p class="title">ಇಲ್ಲಿನ ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ (ಐಎಂಎ) ಸೇನೆಗೆ ನಿಯೋಜನೆಗೊಂಡ ತರಬೇತಿ ಪಡೆದ ಕೆಡೆಟ್ಗಳ ನಿರ್ಗಮನ ಪಥಸಂಚಲನ ಸಮಾರಂಭದಲ್ಲಿ ಮಾತನಾಡಿದ ಅವರು, ಸೇವೆ ಮತ್ತು ಶಾಂತಿಯ ಸಂದೇಶವನ್ನು ಜಗತ್ತಿಗೆ ಪಸರಿಸಬೇಕು. ಆದರೆ, ಪಾಕಿಸ್ತಾನದಂತಹ ನೆರೆರಾಷ್ಟ್ರದೊಂದಿಗೆ ವ್ಯವಹರಿಸುವಾಗ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.</p>.<p>‘ಹಲವು ಯುದ್ಧಗಳಲ್ಲಿ ಭಾರತದ ಎದುರು ಸೋಲು ಅನುಭವಿಸಿದ್ದರೂ ಪಾಕಿಸ್ತಾನಕ್ಕೆ ಬುದ್ಧಿ ಬಂದಿಲ್ಲ. ಭಯೋತ್ಪಾದನೆಯನ್ನು ವಿದೇಶಾಂಗ ನೀತಿಯ ವಿಷಯವನ್ನಾಗಿಯೇ ಮುಂದುವರಿಸಿದೆ. ಅಲ್ಲಿ ಉಗ್ರರು ಪ್ರಬಲರಾಗಿದ್ದು, ಸರ್ಕಾರ ಅವರ ಕೈಗೊಂಬೆಯಾಗಿದೆ’ ಎಂದು ಅವರು ಹೇಳಿದರು.</p>.<p>ಭಾರತ ಮತ್ತು ಚೀನಾದ ಪ್ರಾದೇಶಿಕ ಗ್ರಹಿಕೆಗಳು ಭಿನ್ನವಾಗಿರಬಹುದು. ಆದರೆ, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಅದೂ ಕೈಜೋಡಿಸಿದೆ ಎಂದ ಸಿಂಗ್, ದೋಕಲಾ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತದ ಪಡೆಗಳು ಹೆಚ್ಚಿನ ಇಚ್ಛಾಶಕ್ತಿ ಮತ್ತು ಸಂಯಮ ಪ್ರದರ್ಶಿಸಿದವು ಎಂದು ಶ್ಲಾಘನೆ ವ್ಯಕ್ತಪಡಿಸಿದರು.</p>.<p>‘ಅಕಾಡೆಮಿಯಲ್ಲಿ ಕಲಿತ ಕೌಶಲಗಳನ್ನು ಅಳವಡಿಸಿಕೊಂಡು ಸೈಬರ್ ಭಯೋತ್ಪಾದನೆಯ ಹೊಸ ಸವಾಲು ಎದುರಿಸಲು ಸಿದ್ಧರಾಗಬೇಕು. ತರಬೇತಿಯು ಕೇವಲ ನಿಮಗೆ ಬಲ ನೀಡಿಲ್ಲ, ಜೊತೆಗೆ ಜೀವನಕ್ಕೆ ಹೊಸ ಅರ್ಥವನ್ನೂ ಕಲ್ಪಿಸಿದೆ’ ಎಂದು ಹೇಳಿದ ಅವರು, ಭದ್ರತಾ ಪಡೆಗಳಿಗೆ ನಿಯೋಜನೆಗೊಂಡ ಕೆಡೆಟ್ಗಳನ್ನು ಅಭಿನಂದಿಸಿದರು.</p>.<p>ಒಟ್ಟು 377 ಕೆಡೆಟ್ಗಳು ಭದ್ರತಾ ಪಡೆಗಳಿಗೆ ನಿಯೋಜನೆಗೊಂಡಿದ್ದು, ಈ ಪೈಕಿ ಭಾರತದೊಂದಿಗೆ ಸ್ನೇಹ ಹೊಂದಿರುವ 71 ಕೆಡೆಟ್ಗಳು ಆಯಾ ರಾಷ್ಟ್ರಗಳ ಪಡೆಗಳಿಗೆ ನಿಯೋಜನೆಗೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಡೆಹ್ರಾಡೂನ್:</strong> ‘ಭಾರತಕ್ಕೆ ನೆರೆರಾಷ್ಟ್ರದ ಭೂ ಪ್ರದೇಶ ಪಡೆಯಬೇಕು ಎಂಬ ಮಹತ್ವಾಕಾಂಕ್ಷೆಯಿಲ್ಲ. ಆದರೆ ಭಯೋತ್ಪಾದನೆಯನ್ನು ವಿದೇಶಾಂಗ ನೀತಿಯಂತೆ ಅನುಸರಿಸುತ್ತಿರುವ ಪಾಕಿಸ್ತಾನದ ವಿರುದ್ಧ ಸಶಸ್ತ್ರ ಪಡೆಗಳು ಎಚ್ಚರದಿಂದ ಇರಬೇಕು’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶನಿವಾರ ಹೇಳಿದರು.</p>.<p class="title">ಇಲ್ಲಿನ ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ (ಐಎಂಎ) ಸೇನೆಗೆ ನಿಯೋಜನೆಗೊಂಡ ತರಬೇತಿ ಪಡೆದ ಕೆಡೆಟ್ಗಳ ನಿರ್ಗಮನ ಪಥಸಂಚಲನ ಸಮಾರಂಭದಲ್ಲಿ ಮಾತನಾಡಿದ ಅವರು, ಸೇವೆ ಮತ್ತು ಶಾಂತಿಯ ಸಂದೇಶವನ್ನು ಜಗತ್ತಿಗೆ ಪಸರಿಸಬೇಕು. ಆದರೆ, ಪಾಕಿಸ್ತಾನದಂತಹ ನೆರೆರಾಷ್ಟ್ರದೊಂದಿಗೆ ವ್ಯವಹರಿಸುವಾಗ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.</p>.<p>‘ಹಲವು ಯುದ್ಧಗಳಲ್ಲಿ ಭಾರತದ ಎದುರು ಸೋಲು ಅನುಭವಿಸಿದ್ದರೂ ಪಾಕಿಸ್ತಾನಕ್ಕೆ ಬುದ್ಧಿ ಬಂದಿಲ್ಲ. ಭಯೋತ್ಪಾದನೆಯನ್ನು ವಿದೇಶಾಂಗ ನೀತಿಯ ವಿಷಯವನ್ನಾಗಿಯೇ ಮುಂದುವರಿಸಿದೆ. ಅಲ್ಲಿ ಉಗ್ರರು ಪ್ರಬಲರಾಗಿದ್ದು, ಸರ್ಕಾರ ಅವರ ಕೈಗೊಂಬೆಯಾಗಿದೆ’ ಎಂದು ಅವರು ಹೇಳಿದರು.</p>.<p>ಭಾರತ ಮತ್ತು ಚೀನಾದ ಪ್ರಾದೇಶಿಕ ಗ್ರಹಿಕೆಗಳು ಭಿನ್ನವಾಗಿರಬಹುದು. ಆದರೆ, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಅದೂ ಕೈಜೋಡಿಸಿದೆ ಎಂದ ಸಿಂಗ್, ದೋಕಲಾ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತದ ಪಡೆಗಳು ಹೆಚ್ಚಿನ ಇಚ್ಛಾಶಕ್ತಿ ಮತ್ತು ಸಂಯಮ ಪ್ರದರ್ಶಿಸಿದವು ಎಂದು ಶ್ಲಾಘನೆ ವ್ಯಕ್ತಪಡಿಸಿದರು.</p>.<p>‘ಅಕಾಡೆಮಿಯಲ್ಲಿ ಕಲಿತ ಕೌಶಲಗಳನ್ನು ಅಳವಡಿಸಿಕೊಂಡು ಸೈಬರ್ ಭಯೋತ್ಪಾದನೆಯ ಹೊಸ ಸವಾಲು ಎದುರಿಸಲು ಸಿದ್ಧರಾಗಬೇಕು. ತರಬೇತಿಯು ಕೇವಲ ನಿಮಗೆ ಬಲ ನೀಡಿಲ್ಲ, ಜೊತೆಗೆ ಜೀವನಕ್ಕೆ ಹೊಸ ಅರ್ಥವನ್ನೂ ಕಲ್ಪಿಸಿದೆ’ ಎಂದು ಹೇಳಿದ ಅವರು, ಭದ್ರತಾ ಪಡೆಗಳಿಗೆ ನಿಯೋಜನೆಗೊಂಡ ಕೆಡೆಟ್ಗಳನ್ನು ಅಭಿನಂದಿಸಿದರು.</p>.<p>ಒಟ್ಟು 377 ಕೆಡೆಟ್ಗಳು ಭದ್ರತಾ ಪಡೆಗಳಿಗೆ ನಿಯೋಜನೆಗೊಂಡಿದ್ದು, ಈ ಪೈಕಿ ಭಾರತದೊಂದಿಗೆ ಸ್ನೇಹ ಹೊಂದಿರುವ 71 ಕೆಡೆಟ್ಗಳು ಆಯಾ ರಾಷ್ಟ್ರಗಳ ಪಡೆಗಳಿಗೆ ನಿಯೋಜನೆಗೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>