ಅಯೋಧ್ಯೆಯ ಕರ್ಸ್ವಾಕ್ಪುರಮ್ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ‘ನದಿಗಳಿಗೆ ಕಟ್ಟಲಾಗುವ ಸೇತುವೆಗಳಿಗೆ ಭೂಮಿಯ ಆಳದ ವರೆಗೆ ಕಂಬ (ಪಿಲ್ಲರ್)ಗಳನ್ನು ಹಾಕಲಾಗುತ್ತದೆ. ಅದೇ ರೀತಿ ರಾಮ ಮಂದಿರಕ್ಕೂ ಪಿಲ್ಲರ್ಗಳನ್ನು ಹಾಕಲಾಗುತ್ತಿದೆ. ಹೀಗಾಗಿ ದೇವಾಲಯವು ಭೂಕಂಪ ನಿರೋಧವಾಗಿರಲಿದೆ. ಅಲ್ಲದೆ, ನೈಸರ್ಗಿಕ ವಿಪತ್ತನ್ನು ತಾಳಿಕೊಂಡು ಮಂದಿರವು ಸಾವಿರ ವರ್ಷಗಳ ಕಾಲ ಇರಲಿದೆ,’ ಎಂದು ಅವರು ತಿಳಿಸಿದರು.