<p><strong>ರೇವಾ:</strong> ರಾಮ ಜನ್ಮಭೂಮಿ ಚಳವಳಿಯ ಮುಖಂಡ, ಬಿಜೆಪಿಯ ಮಾಜಿ ಸಂಸದ ರಾಮ್ ವಿಲಾಸ್ ವೇದಾಂತಿ (67) ಅವರು ಹೃದಯಾಘಾತದಿಂದ ಸೋಮವಾರ ಮೃತಪಟ್ಟಿದ್ದಾರೆ.</p>.<p>ರಕ್ತದ ವಿಷ ಸೋಂಕಿನಿಂದ ಬಳಲುತ್ತಿದ್ದ ವೇದಾಂತಿ ಅವರನ್ನು ನಗರದ ಶ್ಯಾಮ್ ಶಾ ವೈದ್ಯಕೀಯ ಕಾಲೇಜಿಗೆ ಸಂಬಂಧಿಸಿದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಭಾನುವಾರ ಬೆಳಿಗ್ಗೆ ದಾಖಲಿಸಲಾಗಿತ್ತು. ಬಹು ಅಂಗಾಂಗ ವೈಫಲ್ಯಕ್ಕೊಳಗಾದ ಅವರು ನಿಧನರಾದರು ಎಂದು ಆಸ್ಪತ್ರೆಯ ಅಧೀಕ್ಷಕ ಅಕ್ಷಯ್ ಶ್ರೀವಾಸ್ತವ ತಿಳಿಸಿದ್ದಾರೆ.</p>.<p>ವೇದಾಂತಿ ಅವರು ಶ್ರೀರಾಮ ಜನ್ಮಭೂಮಿ ಟ್ರಸ್ಟ್ನ ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದರು. ಉತ್ತರ ಪ್ರದೇಶದ ಪ್ರತಾಪ್ಗಢ ಮತ್ತು ಮಛಲಿಶಹರ್ ಕ್ಷೇತ್ರಗಳಿಂದ ಲೋಕಸಭೆಗೆ ಆಯ್ಕೆಯಾಗಿದ್ದರು.</p>.<p>ಪ್ರಸ್ತುತ ರೇವಾ ಜಿಲ್ಲೆಯಲ್ಲಿ ‘ಕಥಾ ಭತ್ವಾ’ ನಿರೂಪಿಸುತ್ತಿದ್ದರು. 1958ರ ಅ.7ರಂದು ಗುಡ್ವಾದಲ್ಲಿ ಜನಿಸಿದ್ದರು. ಅಂತಿಮ ವಿಧಿಗಳನ್ನು ಅಯೋಧ್ಯೆಯಲ್ಲಿ ನಡೆಸಲಾಗುವುದು ಎಂದು ವೇದಾಂತಿ ಅವರ ಶಿಷ್ಯ ಛೋಟೆ ದಾಸ್ ಮಹಾರಾಜ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರೇವಾ:</strong> ರಾಮ ಜನ್ಮಭೂಮಿ ಚಳವಳಿಯ ಮುಖಂಡ, ಬಿಜೆಪಿಯ ಮಾಜಿ ಸಂಸದ ರಾಮ್ ವಿಲಾಸ್ ವೇದಾಂತಿ (67) ಅವರು ಹೃದಯಾಘಾತದಿಂದ ಸೋಮವಾರ ಮೃತಪಟ್ಟಿದ್ದಾರೆ.</p>.<p>ರಕ್ತದ ವಿಷ ಸೋಂಕಿನಿಂದ ಬಳಲುತ್ತಿದ್ದ ವೇದಾಂತಿ ಅವರನ್ನು ನಗರದ ಶ್ಯಾಮ್ ಶಾ ವೈದ್ಯಕೀಯ ಕಾಲೇಜಿಗೆ ಸಂಬಂಧಿಸಿದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಭಾನುವಾರ ಬೆಳಿಗ್ಗೆ ದಾಖಲಿಸಲಾಗಿತ್ತು. ಬಹು ಅಂಗಾಂಗ ವೈಫಲ್ಯಕ್ಕೊಳಗಾದ ಅವರು ನಿಧನರಾದರು ಎಂದು ಆಸ್ಪತ್ರೆಯ ಅಧೀಕ್ಷಕ ಅಕ್ಷಯ್ ಶ್ರೀವಾಸ್ತವ ತಿಳಿಸಿದ್ದಾರೆ.</p>.<p>ವೇದಾಂತಿ ಅವರು ಶ್ರೀರಾಮ ಜನ್ಮಭೂಮಿ ಟ್ರಸ್ಟ್ನ ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದರು. ಉತ್ತರ ಪ್ರದೇಶದ ಪ್ರತಾಪ್ಗಢ ಮತ್ತು ಮಛಲಿಶಹರ್ ಕ್ಷೇತ್ರಗಳಿಂದ ಲೋಕಸಭೆಗೆ ಆಯ್ಕೆಯಾಗಿದ್ದರು.</p>.<p>ಪ್ರಸ್ತುತ ರೇವಾ ಜಿಲ್ಲೆಯಲ್ಲಿ ‘ಕಥಾ ಭತ್ವಾ’ ನಿರೂಪಿಸುತ್ತಿದ್ದರು. 1958ರ ಅ.7ರಂದು ಗುಡ್ವಾದಲ್ಲಿ ಜನಿಸಿದ್ದರು. ಅಂತಿಮ ವಿಧಿಗಳನ್ನು ಅಯೋಧ್ಯೆಯಲ್ಲಿ ನಡೆಸಲಾಗುವುದು ಎಂದು ವೇದಾಂತಿ ಅವರ ಶಿಷ್ಯ ಛೋಟೆ ದಾಸ್ ಮಹಾರಾಜ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>