<p>ನವದೆಹಲಿ: ‘ದಾನಿಗಳಿಂದ ತಮಗೆ ವರ್ಗಾವಣೆಯಾಗುತ್ತಿರುವ ರಕ್ತವು ಶುದ್ಧವಾಗಿದೆ ಎಂಬುದು ಸ್ವೀಕರಿಸುವವರಿಗೆ ಖಚಿತವಾಗಿ ತಿಳಿದಿರಬೇಕು’ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ. </p>.<p>ಲಿಂಗತ್ವ ಅಲ್ಪಸಂಖ್ಯಾತರು, ‘ಗೇ’ (ಪುರುಷ–ಪುರುಷನ ನಡುವಿನ ಲೈಂಗಿಕ ಸಂಬಂಧ ಹೊಂದಿರುವವರು) ಹಾಗೂ ಲೈಂಗಿಕ ಕಾರ್ಯಕರ್ತೆಯರನ್ನು ರಕ್ತದಾನದಿಂದ ಹೊರಗಿಟ್ಟಿರುವ ಮಾರ್ಗಸೂಚಿ 2017 ಅನ್ನು ಪ್ರಶ್ನಿಸಿ ಸಲ್ಲಿಸಲಾಗದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ರೀತಿ ತಾಕೀತು ಮಾಡಿದೆ. </p>.<p>ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ನ್ಯಾಯಪೀಠವು, ಅರ್ಜಿಗೆ ಸಂಬಂಧಿಸಿದಂತೆ ನೋಟಿಸ್ ನೀಡುತ್ತಿಲ್ಲ. ಇದೇ ವಿಷಯವನ್ನು ಪ್ರಸ್ತಾಪಿಸುವ ಮತ್ತೊಂದು ಬಾಕಿ ಉಳಿದಿರುವ ಅರ್ಜಿಯೊಂದಿಗೆ ಸೇರಿಸಲಾಗುವುದು ಎಂದು ಹೇಳಿದೆ. </p>.<p>ಬುಧವಾರದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ, ಮಹಾರಾಷ್ಟ್ರ ಮೂಲದ ಅರ್ಜಿದಾರರ ಪರ ವಕೀಲರು, ಕೆಲವು ವರ್ಗದ ಜನರು ರಕ್ತದಾನ ಮಾಡುವುದನ್ನು ಹೊರತುಪಡಿಸಿದ ಮಾರ್ಗಸೂಚಿಗಳು ಅವರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ ಎಂದು ಸುಪ್ರೀಂ ಕೋರ್ಟ್ಗೆ ತಿಳಿಸಿದರು.</p>.<p>‘ದಾನಿಗಳಿಂದ ತಮಗೆ ವರ್ಗಾವಣೆಯಾಗುತ್ತಿರುವ ರಕ್ತವು ಶುದ್ಧವಾಗಿದೆ ಎಂಬುದು ಸ್ವೀಕರಿಸುವವರು ಖಚಿತಪಡಿಸಿಕೊಳ್ಳಬೇಕು’ ಎಂಬುದನ್ನು ನ್ಯಾಯಪೀಠವು ಗಮನಿಸಿತು.</p>.<p>‘ರಕ್ತದಾನ ಮಾಡುವ ವ್ಯಕ್ತಿಯು ಎಚ್ಐವಿ, ಹೆಪಟೈಟಿಸ್ ಬಿ ಅಥವಾ ಸಿ ಸೋಂಕನ್ನು ಹೊಂದಿರುವವರಾಗಿರಬಾರದು ಎಂಬುದು ರಕ್ತದಾನಿಗಳ ಮಾರ್ಗಸೂಚಿಯು ಉಲ್ಲೇಖಿಸುತ್ತದೆ’ ಎಂದೂ ನ್ಯಾಯಾಲಯವು ಹೇಳಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ: ‘ದಾನಿಗಳಿಂದ ತಮಗೆ ವರ್ಗಾವಣೆಯಾಗುತ್ತಿರುವ ರಕ್ತವು ಶುದ್ಧವಾಗಿದೆ ಎಂಬುದು ಸ್ವೀಕರಿಸುವವರಿಗೆ ಖಚಿತವಾಗಿ ತಿಳಿದಿರಬೇಕು’ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ. </p>.<p>ಲಿಂಗತ್ವ ಅಲ್ಪಸಂಖ್ಯಾತರು, ‘ಗೇ’ (ಪುರುಷ–ಪುರುಷನ ನಡುವಿನ ಲೈಂಗಿಕ ಸಂಬಂಧ ಹೊಂದಿರುವವರು) ಹಾಗೂ ಲೈಂಗಿಕ ಕಾರ್ಯಕರ್ತೆಯರನ್ನು ರಕ್ತದಾನದಿಂದ ಹೊರಗಿಟ್ಟಿರುವ ಮಾರ್ಗಸೂಚಿ 2017 ಅನ್ನು ಪ್ರಶ್ನಿಸಿ ಸಲ್ಲಿಸಲಾಗದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ರೀತಿ ತಾಕೀತು ಮಾಡಿದೆ. </p>.<p>ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ನ್ಯಾಯಪೀಠವು, ಅರ್ಜಿಗೆ ಸಂಬಂಧಿಸಿದಂತೆ ನೋಟಿಸ್ ನೀಡುತ್ತಿಲ್ಲ. ಇದೇ ವಿಷಯವನ್ನು ಪ್ರಸ್ತಾಪಿಸುವ ಮತ್ತೊಂದು ಬಾಕಿ ಉಳಿದಿರುವ ಅರ್ಜಿಯೊಂದಿಗೆ ಸೇರಿಸಲಾಗುವುದು ಎಂದು ಹೇಳಿದೆ. </p>.<p>ಬುಧವಾರದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ, ಮಹಾರಾಷ್ಟ್ರ ಮೂಲದ ಅರ್ಜಿದಾರರ ಪರ ವಕೀಲರು, ಕೆಲವು ವರ್ಗದ ಜನರು ರಕ್ತದಾನ ಮಾಡುವುದನ್ನು ಹೊರತುಪಡಿಸಿದ ಮಾರ್ಗಸೂಚಿಗಳು ಅವರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ ಎಂದು ಸುಪ್ರೀಂ ಕೋರ್ಟ್ಗೆ ತಿಳಿಸಿದರು.</p>.<p>‘ದಾನಿಗಳಿಂದ ತಮಗೆ ವರ್ಗಾವಣೆಯಾಗುತ್ತಿರುವ ರಕ್ತವು ಶುದ್ಧವಾಗಿದೆ ಎಂಬುದು ಸ್ವೀಕರಿಸುವವರು ಖಚಿತಪಡಿಸಿಕೊಳ್ಳಬೇಕು’ ಎಂಬುದನ್ನು ನ್ಯಾಯಪೀಠವು ಗಮನಿಸಿತು.</p>.<p>‘ರಕ್ತದಾನ ಮಾಡುವ ವ್ಯಕ್ತಿಯು ಎಚ್ಐವಿ, ಹೆಪಟೈಟಿಸ್ ಬಿ ಅಥವಾ ಸಿ ಸೋಂಕನ್ನು ಹೊಂದಿರುವವರಾಗಿರಬಾರದು ಎಂಬುದು ರಕ್ತದಾನಿಗಳ ಮಾರ್ಗಸೂಚಿಯು ಉಲ್ಲೇಖಿಸುತ್ತದೆ’ ಎಂದೂ ನ್ಯಾಯಾಲಯವು ಹೇಳಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>