<p><strong>ಗಾಜಿಯಾಬಾದ್, ಉತ್ತರ ಪ್ರದೇಶ: </strong>ಬಾಲಕನಾಗಿದ್ದಾಗ ಮೂವತ್ತು ವರ್ಷಗಳ ಹಿಂದೆ ಪಾಲಕರಿಂದ ಬೇರ್ಪಟ್ಟು ಅಪಹರಣವಾಗಿದ್ದ ವ್ಯಕ್ತಿ ಈಗ ವಾಪಸ್ ಕುಟುಂಬವನ್ನು ಸೇರಿದ್ದಾರೆ.</p><p>ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ತುಲಾ ರಾಜು (38) ಎನ್ನುವ ವ್ಯಕ್ತಿ ತನ್ನ ಕುಟುಂಬವನ್ನು ಮರಳಿ ಸೇರಿದ್ದಕ್ಕೆ ಭಾವುಕನಾಗಿ ಕಣ್ಣೀರು ಸುರಿಸಿದ್ದಾರೆ.</p><p>ಬುಧವಾರ ಮನೆಗೆ ಬಂದ ಅವರನ್ನು ಆತನ ತಂದೆ, ಸಹೋದರಿ ಹಾಗೂ ಕುಟುಂಬದ ಇತರರು ಸ್ವಾಗತಿಸಿ ಆತನಿಗೆ ಇಷ್ಟವಾದ ತಿಂಡಿ–ತಿನಿಸುಗಳನ್ನು ಮಾಡಿ ಕೊಟ್ಟಿದ್ದಾರೆ.</p><p>ದೆಹಲಿ ಸರ್ಕಾರದ ನೌಕರನಾಗಿದ್ದ ತುಲಾ ರಾಮ್ ಎನ್ನುವರು 1993ರಲ್ಲಿ ತಮ್ಮ ಮಗ ರಾಜುನನ್ನು <strong>ಗಾಜಿಯಾಬಾದ್ </strong>ಜಿಲ್ಲೆಯ ಸಾಹಿಬಾಬಾದ್ ಎಂಬಲ್ಲಿನ ಧೀನ ಬಂದು ಪಬ್ಲಿಕ್ ಶಾಲೆಗೆ ಸೇರಿಸಲು ಕರೆದುಕೊಂಡು ಹೋಗಿದ್ದರು. ಈ ವೇಳೆ ಸಹೋದರಿ ಜೊತೆ ಜಗಳ ಮಾಡಿಕೊಂಡಿದ್ದ ರಾಜು ಶಾಲೆಯಿಂದ ಸ್ವಲ್ಪ ದೂರ ಹೋಗಿ ರಸ್ತೆ ಪಕ್ಕ ಕೂತಿದ್ದ. ಇದೇ ವೇಳೆ ರಾಜುನನ್ನು ಟ್ರಕ್ನಲ್ಲಿ ಹೊರಟಿದ್ದ ಮೂವರು ಅಪಹರಣ ಮಾಡಿದ್ದರು.</p><p>ಅಪಹರಣ ಮಾಡಿದ್ದವರು ರಾಜಸ್ಥಾನದ ಜೈಸಲ್ಮೇರ ಬಳಿಯ ಬಂಜರು ಪ್ರದೇಶವೊಂದರ ಮನೆಯಲ್ಲಿ ರಾಜುನನ್ನು ಕೂಡಿ ಹಾಕಿದ್ದರು. ಹಿಂಸೆ ಕೊಟ್ಟು ಕೆಲ ದಿನಗಳ ಬಳಿಕ ಆತನಿಗೆ ಕುರಿ ಕಾಯುವ ಕೆಲಸ ಒಪ್ಪಿಸಿದ್ದರು.</p><p>ಹೀಗೆ ಮೂವತ್ತು ವರ್ಷ ಅಲ್ಲಿಯೇ ಕಾಲ ಕಳೆದ ರಾಜು ಕಳೆದ ಐದು ದಿನಗಳ ಹಿಂದೆ ಆ ಸ್ಥಳಕ್ಕೆ ಕುರಿಗಳನ್ನು ಕೊಂಡುಕೊಳ್ಳಲು ದೆಹಲಿಯಿಂದ ಬಂದಿದ್ದ ಸಿಖ್ ವ್ಯಕ್ತಿಯ ಕಣ್ಣಿಗೆ ಬಿದ್ದಿದ್ದ. ರಾಜುನ ಪರಿಸ್ಥಿತಿ ನೋಡಿ ಮಮ್ಮುಲ ಮರುಗಿದ್ದ ಸಿಖ್ ವ್ಯಕ್ತಿ ರಾಜುವನ್ನು ಕುರಿ ತುಂಬಿದ್ದ ಟ್ರಕ್ ಒಳಗೆ ಕೂರಿಸಿಕೊಂಡು ಗಾಜಿಯಾಬಾದ್–ನೋಯ್ಡಾ ಬಳಿ ಬಿಟ್ಟು ಹೋಗಿದ್ದರು.</p><p>ತನ್ನ ಪೂರ್ವಾಶ್ರಮವನ್ನು ಮರೆತಿದ್ದ ರಾಜು ನೋಯ್ಡಾ ಬಳಿ ಅದೃಷ್ಟವಶಾತ್ ಪೊಲೀಸ್ ಕಣ್ಣಿಗೆ ಬಿದ್ದಿದ್ದ. <strong>ಗಾಜಿಯಾಬಾದ್ </strong>ಪೊಲೀಸರು ರಾಜುವನ್ನು ಮನೆಗೆ ಸೇರಿಸುವಲ್ಲಿ ಸಫಲವಾಗಿದ್ದಾರೆ.</p><p>‘ಕುರಿ ಕಾಯ್ದು ಬಂದ ಪ್ರತಿದಿನ ರಾತ್ರಿ ಆ ಮನೆಯಲ್ಲಿ ನನ್ನ ಕಾಲಿಗೆ ಸರಪಳಿ ಹಾಕಿ ಕೂಡಿಡುತ್ತಿದ್ದರು. ಎರಡು ದಿನಕ್ಕೊಮ್ಮೆ ಊಟ ಕೊಡುತ್ತಿದ್ದರು‘ ಎಂದು ರಾಜು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.</p><p>ಕುಟುಂಬದವರನ್ನು ಕಳೆದುಕೊಂಡು ಹೊರ ಪ್ರಪಂಚದ ಸಂಪರ್ಕ ಇಲ್ಲದೇ ಮೂವತ್ತು ವರ್ಷ ಜೀತದಾಳಾಗಿ ಕೆಲಸ ಮಾಡಿ ರಾಜು ಅವರು ತೀವ್ರವಾಗಿ ನೊಂದಿರುವುದಲ್ಲದೇ ಮಾನಸಿಕ ಆಘಾತಕ್ಕೂ ಒಳಗಾಗಿದ್ದಾರೆ.</p><p>ಮೂವತ್ತು ವರ್ಷಗಳ ಬಳಿಕ ಮಗನ ಆಗಮನದ ಸಂತಸದಿಂದ ಆನಂದಭಾಷ್ಪ ಸುರಿಸಿರುವ ತುಲಾ ರಾಮ್, ‘ಮಗ ಆಘಾತದಿಂದ ಸರಿ ಹೋದ ಸ್ವಲ್ಪ ದಿನಗಳ ಬಳಿಕ ಅವನಿಗೆ ನಮ್ಮದೇ ಹಿಟ್ಟಿನ ಗಿರಣಿಯ ಕೆಲಸ ನೋಡಿಕೊಂಡು ಹೋಗಲು ಹೇಳುತ್ತೇನೆ. ಆ ನಂತರ ಸೂಕ್ತ ವಧುವನ್ನು ನೋಡಿ ಮದುವೆಯನ್ನೂ ಮಾಡುತ್ತೇನೆ’ ಎಂದು ಹೇಳಿದ್ದಾರೆ.</p><p>‘ಅಂದು ಮಗ ಕಾಣೆಯಾದಾಗ ಸಾಕಷ್ಟು ಹುಡುಕಾಡಲಾಗಿತ್ತು. ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೆ, ಏನೂ ಪ್ರಯೋಜನ ಆಗಿರಲಿಲ್ಲ. ಕೆಲ ದಿನಗಳ ಬಳಿಕ ರಾಜುನನ್ನು ಬಿಡುಗಡೆ ಮಾಡಬೇಕಾದರೆ ₹8 ಲಕ್ಷ ಕೊಡಿ ಎಂದು ಅನಾಮಧೇಯ ವ್ಯಕ್ತಿಗಳು ಮೇಲಿಂದ ಮೇಲೆ ಬೇಡಿಕೆ ಇಟ್ಟಿದ್ದರು. ಆದರೆ, ನಮಗೆ ಹಣ ಹೊಂದಿಸಲು ಸಾಧ್ಯವಾಗಿರಲಿಲ್ಲ. ಪೊಲೀಸರು ಕೈ ಚೆಲ್ಲಿದರು. ಆದರೆ ಅಂತೂ ನನ್ನ ಮಗ ಮನೆಗೆ ಬಂದಿರುವುದು ಸಂತೋಷವಾಗಿದೆ ಎಂದು ತುಲಾ ರಾಮ್ ಹೇಳಿದ್ದಾರೆ.</p><p>ರಾಜುನನ್ನು ನೋಡಿ ತುಲಾ ರಾಮ್ ಅವರ ನೆರೆಹೊರೆಯವರು ಸಂಭ್ರಮ ವ್ಯಕ್ತಪಡಿಸಿದ್ದಾರೆ. ತಂಡೋಪತಂಡವಾಗಿ ತುಲಾ ರಾಮ್ ಅವರ ಮನೆಗೆ ಆಗಮಿಸುತ್ತಿದ್ದಾರೆ.</p><p>‘ನಮ್ಮ ಖೋಡಾ ಪೊಲೀಸ್ ಠಾಣೆ ಸಿಬ್ಬಂದಿ ರಾಜು ಎನ್ನುವ ವ್ಯಕ್ತಿಯನ್ನು ಆತನ ಮನೆಗೆ ತಲುಪಿಸಿದ್ದಾರೆ. ಈ ಕೇಸ್ ಅನ್ನು ಪುನಃ ತೆರೆಯಲಾಗುತ್ತದೆ. ನಮ್ಮ ಸಿಬ್ಬಂದಿ ಶೀಘ್ರವೇ ಜೈಸಲ್ಮೇರ್ಗೆ ಭೇಟಿ ನೀಡಿ ವಿಚಾರಣೆ ನಡೆಸಲಿದೆ’ ಎಂದು ಗಾಜಿಯಾಬಾದ್ ಡಿಸಿಪಿ ನಿಮಿಷ್ ಪಾಟೀಲ್ ಪಿಟಿಐಗೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಾಜಿಯಾಬಾದ್, ಉತ್ತರ ಪ್ರದೇಶ: </strong>ಬಾಲಕನಾಗಿದ್ದಾಗ ಮೂವತ್ತು ವರ್ಷಗಳ ಹಿಂದೆ ಪಾಲಕರಿಂದ ಬೇರ್ಪಟ್ಟು ಅಪಹರಣವಾಗಿದ್ದ ವ್ಯಕ್ತಿ ಈಗ ವಾಪಸ್ ಕುಟುಂಬವನ್ನು ಸೇರಿದ್ದಾರೆ.</p><p>ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ತುಲಾ ರಾಜು (38) ಎನ್ನುವ ವ್ಯಕ್ತಿ ತನ್ನ ಕುಟುಂಬವನ್ನು ಮರಳಿ ಸೇರಿದ್ದಕ್ಕೆ ಭಾವುಕನಾಗಿ ಕಣ್ಣೀರು ಸುರಿಸಿದ್ದಾರೆ.</p><p>ಬುಧವಾರ ಮನೆಗೆ ಬಂದ ಅವರನ್ನು ಆತನ ತಂದೆ, ಸಹೋದರಿ ಹಾಗೂ ಕುಟುಂಬದ ಇತರರು ಸ್ವಾಗತಿಸಿ ಆತನಿಗೆ ಇಷ್ಟವಾದ ತಿಂಡಿ–ತಿನಿಸುಗಳನ್ನು ಮಾಡಿ ಕೊಟ್ಟಿದ್ದಾರೆ.</p><p>ದೆಹಲಿ ಸರ್ಕಾರದ ನೌಕರನಾಗಿದ್ದ ತುಲಾ ರಾಮ್ ಎನ್ನುವರು 1993ರಲ್ಲಿ ತಮ್ಮ ಮಗ ರಾಜುನನ್ನು <strong>ಗಾಜಿಯಾಬಾದ್ </strong>ಜಿಲ್ಲೆಯ ಸಾಹಿಬಾಬಾದ್ ಎಂಬಲ್ಲಿನ ಧೀನ ಬಂದು ಪಬ್ಲಿಕ್ ಶಾಲೆಗೆ ಸೇರಿಸಲು ಕರೆದುಕೊಂಡು ಹೋಗಿದ್ದರು. ಈ ವೇಳೆ ಸಹೋದರಿ ಜೊತೆ ಜಗಳ ಮಾಡಿಕೊಂಡಿದ್ದ ರಾಜು ಶಾಲೆಯಿಂದ ಸ್ವಲ್ಪ ದೂರ ಹೋಗಿ ರಸ್ತೆ ಪಕ್ಕ ಕೂತಿದ್ದ. ಇದೇ ವೇಳೆ ರಾಜುನನ್ನು ಟ್ರಕ್ನಲ್ಲಿ ಹೊರಟಿದ್ದ ಮೂವರು ಅಪಹರಣ ಮಾಡಿದ್ದರು.</p><p>ಅಪಹರಣ ಮಾಡಿದ್ದವರು ರಾಜಸ್ಥಾನದ ಜೈಸಲ್ಮೇರ ಬಳಿಯ ಬಂಜರು ಪ್ರದೇಶವೊಂದರ ಮನೆಯಲ್ಲಿ ರಾಜುನನ್ನು ಕೂಡಿ ಹಾಕಿದ್ದರು. ಹಿಂಸೆ ಕೊಟ್ಟು ಕೆಲ ದಿನಗಳ ಬಳಿಕ ಆತನಿಗೆ ಕುರಿ ಕಾಯುವ ಕೆಲಸ ಒಪ್ಪಿಸಿದ್ದರು.</p><p>ಹೀಗೆ ಮೂವತ್ತು ವರ್ಷ ಅಲ್ಲಿಯೇ ಕಾಲ ಕಳೆದ ರಾಜು ಕಳೆದ ಐದು ದಿನಗಳ ಹಿಂದೆ ಆ ಸ್ಥಳಕ್ಕೆ ಕುರಿಗಳನ್ನು ಕೊಂಡುಕೊಳ್ಳಲು ದೆಹಲಿಯಿಂದ ಬಂದಿದ್ದ ಸಿಖ್ ವ್ಯಕ್ತಿಯ ಕಣ್ಣಿಗೆ ಬಿದ್ದಿದ್ದ. ರಾಜುನ ಪರಿಸ್ಥಿತಿ ನೋಡಿ ಮಮ್ಮುಲ ಮರುಗಿದ್ದ ಸಿಖ್ ವ್ಯಕ್ತಿ ರಾಜುವನ್ನು ಕುರಿ ತುಂಬಿದ್ದ ಟ್ರಕ್ ಒಳಗೆ ಕೂರಿಸಿಕೊಂಡು ಗಾಜಿಯಾಬಾದ್–ನೋಯ್ಡಾ ಬಳಿ ಬಿಟ್ಟು ಹೋಗಿದ್ದರು.</p><p>ತನ್ನ ಪೂರ್ವಾಶ್ರಮವನ್ನು ಮರೆತಿದ್ದ ರಾಜು ನೋಯ್ಡಾ ಬಳಿ ಅದೃಷ್ಟವಶಾತ್ ಪೊಲೀಸ್ ಕಣ್ಣಿಗೆ ಬಿದ್ದಿದ್ದ. <strong>ಗಾಜಿಯಾಬಾದ್ </strong>ಪೊಲೀಸರು ರಾಜುವನ್ನು ಮನೆಗೆ ಸೇರಿಸುವಲ್ಲಿ ಸಫಲವಾಗಿದ್ದಾರೆ.</p><p>‘ಕುರಿ ಕಾಯ್ದು ಬಂದ ಪ್ರತಿದಿನ ರಾತ್ರಿ ಆ ಮನೆಯಲ್ಲಿ ನನ್ನ ಕಾಲಿಗೆ ಸರಪಳಿ ಹಾಕಿ ಕೂಡಿಡುತ್ತಿದ್ದರು. ಎರಡು ದಿನಕ್ಕೊಮ್ಮೆ ಊಟ ಕೊಡುತ್ತಿದ್ದರು‘ ಎಂದು ರಾಜು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.</p><p>ಕುಟುಂಬದವರನ್ನು ಕಳೆದುಕೊಂಡು ಹೊರ ಪ್ರಪಂಚದ ಸಂಪರ್ಕ ಇಲ್ಲದೇ ಮೂವತ್ತು ವರ್ಷ ಜೀತದಾಳಾಗಿ ಕೆಲಸ ಮಾಡಿ ರಾಜು ಅವರು ತೀವ್ರವಾಗಿ ನೊಂದಿರುವುದಲ್ಲದೇ ಮಾನಸಿಕ ಆಘಾತಕ್ಕೂ ಒಳಗಾಗಿದ್ದಾರೆ.</p><p>ಮೂವತ್ತು ವರ್ಷಗಳ ಬಳಿಕ ಮಗನ ಆಗಮನದ ಸಂತಸದಿಂದ ಆನಂದಭಾಷ್ಪ ಸುರಿಸಿರುವ ತುಲಾ ರಾಮ್, ‘ಮಗ ಆಘಾತದಿಂದ ಸರಿ ಹೋದ ಸ್ವಲ್ಪ ದಿನಗಳ ಬಳಿಕ ಅವನಿಗೆ ನಮ್ಮದೇ ಹಿಟ್ಟಿನ ಗಿರಣಿಯ ಕೆಲಸ ನೋಡಿಕೊಂಡು ಹೋಗಲು ಹೇಳುತ್ತೇನೆ. ಆ ನಂತರ ಸೂಕ್ತ ವಧುವನ್ನು ನೋಡಿ ಮದುವೆಯನ್ನೂ ಮಾಡುತ್ತೇನೆ’ ಎಂದು ಹೇಳಿದ್ದಾರೆ.</p><p>‘ಅಂದು ಮಗ ಕಾಣೆಯಾದಾಗ ಸಾಕಷ್ಟು ಹುಡುಕಾಡಲಾಗಿತ್ತು. ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೆ, ಏನೂ ಪ್ರಯೋಜನ ಆಗಿರಲಿಲ್ಲ. ಕೆಲ ದಿನಗಳ ಬಳಿಕ ರಾಜುನನ್ನು ಬಿಡುಗಡೆ ಮಾಡಬೇಕಾದರೆ ₹8 ಲಕ್ಷ ಕೊಡಿ ಎಂದು ಅನಾಮಧೇಯ ವ್ಯಕ್ತಿಗಳು ಮೇಲಿಂದ ಮೇಲೆ ಬೇಡಿಕೆ ಇಟ್ಟಿದ್ದರು. ಆದರೆ, ನಮಗೆ ಹಣ ಹೊಂದಿಸಲು ಸಾಧ್ಯವಾಗಿರಲಿಲ್ಲ. ಪೊಲೀಸರು ಕೈ ಚೆಲ್ಲಿದರು. ಆದರೆ ಅಂತೂ ನನ್ನ ಮಗ ಮನೆಗೆ ಬಂದಿರುವುದು ಸಂತೋಷವಾಗಿದೆ ಎಂದು ತುಲಾ ರಾಮ್ ಹೇಳಿದ್ದಾರೆ.</p><p>ರಾಜುನನ್ನು ನೋಡಿ ತುಲಾ ರಾಮ್ ಅವರ ನೆರೆಹೊರೆಯವರು ಸಂಭ್ರಮ ವ್ಯಕ್ತಪಡಿಸಿದ್ದಾರೆ. ತಂಡೋಪತಂಡವಾಗಿ ತುಲಾ ರಾಮ್ ಅವರ ಮನೆಗೆ ಆಗಮಿಸುತ್ತಿದ್ದಾರೆ.</p><p>‘ನಮ್ಮ ಖೋಡಾ ಪೊಲೀಸ್ ಠಾಣೆ ಸಿಬ್ಬಂದಿ ರಾಜು ಎನ್ನುವ ವ್ಯಕ್ತಿಯನ್ನು ಆತನ ಮನೆಗೆ ತಲುಪಿಸಿದ್ದಾರೆ. ಈ ಕೇಸ್ ಅನ್ನು ಪುನಃ ತೆರೆಯಲಾಗುತ್ತದೆ. ನಮ್ಮ ಸಿಬ್ಬಂದಿ ಶೀಘ್ರವೇ ಜೈಸಲ್ಮೇರ್ಗೆ ಭೇಟಿ ನೀಡಿ ವಿಚಾರಣೆ ನಡೆಸಲಿದೆ’ ಎಂದು ಗಾಜಿಯಾಬಾದ್ ಡಿಸಿಪಿ ನಿಮಿಷ್ ಪಾಟೀಲ್ ಪಿಟಿಐಗೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>