<p><strong>ನವದೆಹಲಿ:</strong> ಮಥುರಾದಲ್ಲಿ ಈ ವಾರಾಂತ್ಯಕ್ಕೆ ನಡೆಯಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಅಖಿಲ ಭಾರತೀಯ ಕಾರ್ಯಕಾರಿ ಮಂಡಲದ ಸಭೆಯಲ್ಲಿ ಸಂಘದ ಕಾರ್ಯಚಟುವಟಿಕೆಗಳ ಕುರಿತು ವಿಚಾರ ವಿಮರ್ಶೆ ನಡೆಸಲು ನಿರ್ಧರಿಸಲಾಗಿದೆ.</p>.<p>2025ಕ್ಕೆ ಆರ್ಎಸ್ಎಸ್ ನೂರು ವರ್ಷ ಪೂರೈಸಲಿದೆ. ಈ ಹಿನ್ನೆಲೆಯಲ್ಲಿ 2025ರ ವಿಜಯದಶಮಿಯಂದು ನಡೆಯುವ ಕಾರ್ಯಕ್ರಮದ ರೂಪುರೇಷೆಯನ್ನು ಸಂಘವು ಸಭೆಯಲ್ಲಿ ನಿರ್ಧರಿಸಲಿದೆ.</p>.<p>ಈ ಬಗ್ಗೆ ಆರ್ಎಸ್ಎಸ್ನ ಮಾಧ್ಯಮ ಘಟಕದ ಮುಖ್ಯಸ್ಥ ಸುನಿಲ್ ಅಂಬೇಕರ್ ಅವರು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು. ‘ಸಭೆಯಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಸರ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಭಾಗವಹಿಸಲಿದ್ದು, ಸಂಘದ ಕಾರ್ಯಚಟುವಟಿಕೆಗಳನ್ನು ಇನ್ನಷ್ಟು ವಿಸ್ತರಿಸುವ ಕುರಿತ ಯೋಜನೆ ರೂಪಿಸಲಾಗಿದ್ದು, ಈ ಕುರಿತು ವಿಮರ್ಶೆ ನಡೆಸಲಾಗುವುದು’ ಎಂದು ಸುನಿಲ್ ಮಾಹಿತಿ ನೀಡಿದರು.</p>.<p>‘1925ರಲ್ಲಿ ಆರಂಭಗೊಂಡ ಆರ್ಎಸ್ಎಸ್, ‘ವ್ಯಕ್ತಿ ನಿರ್ಮಾಣ’ದಿಂದ ಹಿಡಿದು ‘ರಾಷ್ಟ್ರ ನಿರ್ಮಾಣ’ದ ವರೆಗೂ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಕಾರ್ಯಕ್ಕೆ 2025ರಲ್ಲಿ ನೂರು ವರ್ಷ ತುಂಬಲಿದ್ದು, ಪ್ರಸ್ತುತ ಆರ್ಎಸ್ಎಸ್ ತನ್ನ ಕಾರ್ಯವ್ಯಾಪ್ತಿಯನ್ನು ಇಡೀ ರಾಷ್ಟ್ರಕ್ಕೇ ವಿಸ್ತರಿಸಿಕೊಂಡಿದೆ’ ಎಂದರು.</p>.<p>‘ಸ್ವಾಮಿ ದಯಾನಂದ ಸರಸ್ವತಿ, ಭಗವಾನ್ ಬಿರ್ಸಾ ಮುಂಡಾ, ಅಹಿಲ್ಯಾಭಾಯಿ ಹೋಲ್ಕರ್, ರಾಣಿ ದುರ್ಗಾವತಿ ಹಾಗೂ ಸಂತ ಅನುಕುಲ್ ಚಂದ್ರ ಠಾಕೂರ್– ಈ ಐವರು ಸಂತರ ಸಂದೇಶಗಳನ್ನು ಸಮಾಜಕ್ಕೆ ತಲುಪಿಸುವುದು ಹೇಗೆ ಎನ್ನುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು’ ಎಂದು ವಿವರಿಸಿದರು.</p>.<p>‘ಆರ್ಎಸ್ಎಸ್ನಲ್ಲಿ ಮೂರು ವರ್ಷ ಪೂರೈಸಿದ 40 ವರ್ಷ ಮೇಲ್ಪಟ್ಟ ಕಾರ್ಯಕರ್ತರಿಗೆ ಇದೇ ನವೆಂಬರ್ ಮತ್ತು ಡಿಸೆಂಬರ್ನಲ್ಲಿ ವಿಶೇಷ ಶಿಬಿರ ಆಯೋಜಿಸಲಾಗಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಮಥುರಾದಲ್ಲಿ ಈ ವಾರಾಂತ್ಯಕ್ಕೆ ನಡೆಯಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಅಖಿಲ ಭಾರತೀಯ ಕಾರ್ಯಕಾರಿ ಮಂಡಲದ ಸಭೆಯಲ್ಲಿ ಸಂಘದ ಕಾರ್ಯಚಟುವಟಿಕೆಗಳ ಕುರಿತು ವಿಚಾರ ವಿಮರ್ಶೆ ನಡೆಸಲು ನಿರ್ಧರಿಸಲಾಗಿದೆ.</p>.<p>2025ಕ್ಕೆ ಆರ್ಎಸ್ಎಸ್ ನೂರು ವರ್ಷ ಪೂರೈಸಲಿದೆ. ಈ ಹಿನ್ನೆಲೆಯಲ್ಲಿ 2025ರ ವಿಜಯದಶಮಿಯಂದು ನಡೆಯುವ ಕಾರ್ಯಕ್ರಮದ ರೂಪುರೇಷೆಯನ್ನು ಸಂಘವು ಸಭೆಯಲ್ಲಿ ನಿರ್ಧರಿಸಲಿದೆ.</p>.<p>ಈ ಬಗ್ಗೆ ಆರ್ಎಸ್ಎಸ್ನ ಮಾಧ್ಯಮ ಘಟಕದ ಮುಖ್ಯಸ್ಥ ಸುನಿಲ್ ಅಂಬೇಕರ್ ಅವರು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು. ‘ಸಭೆಯಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಸರ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಭಾಗವಹಿಸಲಿದ್ದು, ಸಂಘದ ಕಾರ್ಯಚಟುವಟಿಕೆಗಳನ್ನು ಇನ್ನಷ್ಟು ವಿಸ್ತರಿಸುವ ಕುರಿತ ಯೋಜನೆ ರೂಪಿಸಲಾಗಿದ್ದು, ಈ ಕುರಿತು ವಿಮರ್ಶೆ ನಡೆಸಲಾಗುವುದು’ ಎಂದು ಸುನಿಲ್ ಮಾಹಿತಿ ನೀಡಿದರು.</p>.<p>‘1925ರಲ್ಲಿ ಆರಂಭಗೊಂಡ ಆರ್ಎಸ್ಎಸ್, ‘ವ್ಯಕ್ತಿ ನಿರ್ಮಾಣ’ದಿಂದ ಹಿಡಿದು ‘ರಾಷ್ಟ್ರ ನಿರ್ಮಾಣ’ದ ವರೆಗೂ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಕಾರ್ಯಕ್ಕೆ 2025ರಲ್ಲಿ ನೂರು ವರ್ಷ ತುಂಬಲಿದ್ದು, ಪ್ರಸ್ತುತ ಆರ್ಎಸ್ಎಸ್ ತನ್ನ ಕಾರ್ಯವ್ಯಾಪ್ತಿಯನ್ನು ಇಡೀ ರಾಷ್ಟ್ರಕ್ಕೇ ವಿಸ್ತರಿಸಿಕೊಂಡಿದೆ’ ಎಂದರು.</p>.<p>‘ಸ್ವಾಮಿ ದಯಾನಂದ ಸರಸ್ವತಿ, ಭಗವಾನ್ ಬಿರ್ಸಾ ಮುಂಡಾ, ಅಹಿಲ್ಯಾಭಾಯಿ ಹೋಲ್ಕರ್, ರಾಣಿ ದುರ್ಗಾವತಿ ಹಾಗೂ ಸಂತ ಅನುಕುಲ್ ಚಂದ್ರ ಠಾಕೂರ್– ಈ ಐವರು ಸಂತರ ಸಂದೇಶಗಳನ್ನು ಸಮಾಜಕ್ಕೆ ತಲುಪಿಸುವುದು ಹೇಗೆ ಎನ್ನುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು’ ಎಂದು ವಿವರಿಸಿದರು.</p>.<p>‘ಆರ್ಎಸ್ಎಸ್ನಲ್ಲಿ ಮೂರು ವರ್ಷ ಪೂರೈಸಿದ 40 ವರ್ಷ ಮೇಲ್ಪಟ್ಟ ಕಾರ್ಯಕರ್ತರಿಗೆ ಇದೇ ನವೆಂಬರ್ ಮತ್ತು ಡಿಸೆಂಬರ್ನಲ್ಲಿ ವಿಶೇಷ ಶಿಬಿರ ಆಯೋಜಿಸಲಾಗಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>