<p><strong>ನವದೆಹಲಿ:</strong> ರಾಜ್ಯಸಭೆಯ ಸಭಾಪತಿಯೂ ಆಗಿರುವ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ವಿರುದ್ಧ ಅವಿಶ್ವಾಸ ನಿಲುವಳಿಗೆ ಮಂಡಿಸಲು ವಿರೋಧಪಕ್ಷಗಳು ಸಲ್ಲಿಸಿರುವ ನೋಟಿಸ್ ಶುಕ್ರವಾರ ಸದನದಲ್ಲಿ ತೀವ್ರ ಕೋಲಾಹಲ, ವಾಕ್ಸಮರಕ್ಕೆ ಕಾರಣವಾಯಿತು.</p>.<p>ಧನಕರ್ ವಿರುದ್ಧದ ಅಸಮಾಧಾನ ಮತ್ತು ಅದಾನಿ ವಿವಾದದ ಪ್ರಸ್ತಾಪದಿಂದ ಈಗಾಗಲೇ ರಾಜ್ಯಸಭೆ ಕಲಾಪ ಹಳಿತಪ್ಪಿದೆ. ಗೊಂದಲದ ಸ್ಥಿತಿಯಿಂದಾಗಿ ಶುಕ್ರವಾರವು ಮೊದಲು ಒಂದು ಗಂಟೆಗೆ, ನಂತರ ಸೋಮವಾರದವರೆಗೂ ಕಲಾಪವನ್ನು ಮುಂದೂಡಲಾಯಿತು.</p>.<p>ಕೋಲಾಹಲದ ಸ್ಥಿತಿಯ ನಡುವೆಯೇ ಮಾತನಾಡಿದ ಧನಕರ್ ಅವರು, ‘ದಿನ ಬೆಳಗಾದರೆ ನನ್ನ ವಿರುದ್ಧ ಅಭಿಯಾನ ನಡೆಯುತ್ತಿದೆ. ಈ ಅಭಿಯಾನ ಕೇವಲ ನನ್ನ ವಿರುದ್ಧ ಅಲ್ಲ. ಇದು ನಾನು ಸೇರಿರುವ ಸಮುದಾಯದ ವಿರುದ್ಧವಾಗಿದೆ. ನಾನು ರೈತನ ಮಗ. ಈ ಬೆಳವಣಿಗೆಯಿಂದ ದುರ್ಬಲನಾಗುವುದಿಲ್ಲ’ ಎಂದು ಕಟುವಾಗಿ ಹೇಳಿದರು.</p>.<p>‘ಪ್ರಮುಖ ಪ್ರತಿಪಕ್ಷ ನನ್ನ ವಿರುದ್ಧ ನಿರಂತರ ಅಭಿಯಾನ ನಡೆಸುತ್ತಿರುವುದು ವ್ಯಕ್ತಿಗತವಾಗಿ ಬೇಸರ ಮೂಡಿಸಿದೆ. ನನ್ನ ವಿರುದ್ಧ ನಿಲುವಳಿ ತರಲು ಅವರಿಗೆ ಹಕ್ಕಿದೆ. ಅದು ಪ್ರತಿಪಕ್ಷಗಳ ಸಾಂವಿಧಾನಿಕ ಹಕ್ಕು. ಆದರೆ, ಅವರು ನಿಯಮಗಳನ್ನು ಮೀರುತ್ತಿದ್ದಾರೆ’ ಎಂದರು. </p>.<p>ಕಲಾಪವನ್ನು ಸೋಮವಾರಕ್ಕೆ ಮುಂದೂಡುವ ಮುನ್ನ ಸಭಾನಾಯಕ ಜೆ.ಪಿ.ನಡ್ಡಾ, ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ, ‘ಗೊಂದಲಕ್ಕೆ ಪರಿಹಾರ ಕಂಡುಕೊಳ್ಳಲು ಚರ್ಚೆ ಮಾಡೋಣ. ಕೊಠಡಿ ಬನ್ನಿ. ಖರ್ಗೆ ಸ್ಪಂದಿಸುತ್ತಾರೆ ಎಂದು ಭಾವಿಸುತ್ತೇನೆ’ ಎಂದರು. </p>.<p>ಕೋಪಗೊಂಡಂತಿದ್ದ ಖರ್ಗೆ ಅವರು ಈ ಮಾತಿಗೆ, ‘ನೀವು ನನಗೆ ಅವಮಾನಿಸಿದ್ದೀರಿ. ನಿಮ್ಮ ಮಾತಿಗೆ ಹೇಗೆ ಗೌರವಿಸಲಿ? ಎಂದು ಪ್ರತಿಕ್ರಿಯಿಸಿದರು. ಖರ್ಗೆ ಮಾತು ಮುಂದುವರಿಸಿದಂತೆ ಅತ್ತ ಸಭಾಧ್ಯಕ್ಷರು ಕಲಾಪವನ್ನು ಮುಂದೂಡಿದರು. </p>.<p>ಇದಕ್ಕೂ ಮುನ್ನ ಧನಕರ್ ವಿರುದ್ಧದ ಅವಿಶ್ವಾಸ ನಿಲುವಳಿಗೆ ನೋಟಿಸ್ಗೆ ಸಂಬಂಧಿಸಿದ ಚರ್ಚೆಗೆ ಕ್ರಿಯಾಲೋಪ ಎತ್ತಿದ್ದ ಬಿಜೆಪಿಯ ರಾಧಾಮೋಹನ ದಾಸ್ ಅಗರವಾಲ್ ಅವರು ಮಾತನಾಡುವಾಗ ಗೊಂದಲದ ಸ್ಥಿತಿಯು ಮುಂದುವರಿಯಿತು. </p>.<p>ದೀರ್ಘವಾಗಿ ಮಾತನಾಡಿದ ಅಗರವಾಲ್, ‘ಅವಿಶ್ವಾಸ ನಿಲುವಳಿ ನೋಟಿಸ್ ಉಪ ರಾಷ್ಟ್ರಪತಿಗಳ ಸ್ಥಾನ ಮತ್ತು ರೈತರಿಗೆ ಮಾಡುತ್ತಿರುವ ಅವಮಾನ. ನಿಯಮದ ಪ್ರಕಾರ, ನೋಟಿಸ್ ನೀಡಿದ 14 ದಿನ ಬಳಿಕ ಚರ್ಚೆಗೆ ಎತ್ತಿಕೊಳ್ಳಬಹುದು. ಆದರೆ, ಕಾಂಗ್ರೆಸ್ ನಾಯಕರು ಮಾಧ್ಯಮದ ಎದುರು ಆರೋಪ ಮಾಡುತ್ತಿದ್ದಾರೆ‘ ಎಂದರು.</p>.<p>ಪ್ರಥಮ ಪ್ರಧಾನಿ ನೆಹರೂ ಆಗಿನ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಅವರಿಗೆ ನಿರಂತರ ಅಪಮಾನ ಮಾಡುತ್ತಿದ್ದರು. ರಾಜಧಾನಿಯಲ್ಲಿ ಅವರ ಶವದ ಅಂತ್ಯಕ್ರಿಯೆಗೂ ಅವಕಾಶ ಸಿಗಲಿಲ್ಲ. ಕೊನೆಗಳಿಗೆಯಲ್ಲಿ ವೈದ್ಯಕೀಯ ಚಿಕಿತ್ಸೆ ನಿರಾಕರಿಸಲಾಗಿತ್ತು‘ ಎಂದು ಆರೋಪಿಸಿದರು.</p>.<p>ಪ್ರಸಾದ್ ಅವರ ಅಂತ್ಯಕ್ರಿಯೆ ವಿಧಿಯಲ್ಲಿ ಭಾಗವಹಿಸಬಾರದು ಎಂದು ನೆಹರೂ ಅವರು ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೆ ಕೋರಿದ್ದರು. ಆದರೆ, ರಾಧಾಕೃಷ್ಣನ್ ಅವರು ಈ ಮಾತಿಗೆ ಸ್ಪಂದಿಸಿರಲಿಲ್ಲ ಎಂದು ಅಗರವಾಲ್ ನಿಂದಿಸಿದರು.</p>.<p>ಅವಿಶ್ವಾಸ ನಿಲುವಳಿ ನೋಟಿಸ್ಗೆ ಸಹಿ ಹಾಕಿರುವ 60 ಸದಸ್ಯರ ವಿರುದ್ದ ತಾವು ಸಲ್ಲಿಸಿರುವ ಹಕ್ಕುಚ್ಯುತಿ ನೋಟಿಸ್ ಕುರಿತು ಮೊದಲು ಚರ್ಚೆಗೆ ತೆಗೆದುಕೊಳ್ಳಬೇಕು ಎಂದು ಕೋರಿದರು.</p>.<p>ಈ ಹಂತದಲ್ಲಿ ಸಭಾಪತಿ ಧನಕರ್ ಅವರು ಕಾಂಗ್ರೆಸ್ನ ಪ್ರಮೋದ್ ತಿವಾರಿ ಅವರಿಗೆ ಮಾತಿಗೆ ಅವಕಾಶ ಕಲ್ಪಿಸಿದರು. ತಿವಾರಿ ಅವರು ‘ಈ ಸರ್ಕಾರ ಕೋಟ್ಯಧಿಪತಿ ರಕ್ಷಣೆಗೆ ನಿಂತಿದೆ’ ಎನ್ನುತ್ತಿದ್ದಂತೆ ‘ಅವರ ಮಾತು ಕಡತಕ್ಕೆ ಹೋಗುವುದಿಲ್ಲ’ ಎಂದು ಸಭಾಪತಿ ಹೇಳಿದರು.</p>.<p>ಆಗ ಸಭಾಪತಿಯವರು, ವಿರೋಧಪಕ್ಷಗಳು ಸಲ್ಲಿಸಿರುವ ನೋಟಿಸ್ ಅನ್ನು ನಿಯಮಾನುಸಾರ 14 ದಿನದ ಬಳಿಕ ಚರ್ಚೆಗೆ ಎತ್ತಿಕೊಳ್ಳಲಾಗುವುದು ಎಂದರು. ಗೊಂದಲ ಮುಂದುವರಿದಾಗ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು.</p>.<p>ಇದಕ್ಕೂ ಮುನ್ನ, ‘ಕಲಾಪವನ್ನು ನಿಯಮಾನುಸಾರ ನಡೆಸಬೇಕು ಮತ್ತು ಸದಸ್ಯರು ಬಯಸಿರುವ ವಿಷಯಗಳ ಪ್ರಸ್ತಾಪಕ್ಕೆ ಅವಕಾಶ ಕಲ್ಪಿಸಬೇಕು’ ಎಂದು ಕೋರಿ ನಿಯಮ 267ರ ಅನ್ವಯ ನಾಲ್ಕು ನೋಟಿಸ್ಗಳು ಸಲ್ಲಿಕೆಯಾಗಿವೆ ಎಂದು ಸಭೆಗೆ ಮಾಹಿತಿ ನೀಡಿದರು.</p>.<div><blockquote>ಇನ್ನು ನಾನು ಸಹಿಸಿಕೊಳ್ಳುವುದಿಲ್ಲ. ನಾನು ರೈತನ ಮಗ ದುರ್ಬಲಗೊಳ್ಳುವುದಿಲ್ಲ. ಈ ಅಭಿಯಾನ ನನ್ನ ವಿರುದ್ಧವಲ್ಲ. ನಾನು ಪ್ರತಿನಿಧಿಸುವ ಜಾತಿಯ ವಿರುದ್ಧ </blockquote><span class="attribution">-ಜಗದೀಪ್ ಧನಕರ್, ಸಭಾಪತಿ ರಾಜ್ಯಸಭೆ</span></div>.<div><blockquote>ಕಾಂಗ್ರೆಸ್ ಪಕ್ಷವು ರೈತ ಮತ್ತು ಒಬಿಸಿ ವಿರೋಧಿ. ಆ ಪಕ್ಷಕ್ಕೆ ರೈತರು ದಲಿತರು ಮತ್ತು ಬಡವರು ಅಭಿವೃದ್ಧಿ ಹೊಂದುವುದು ಬೇಕಾಗಿಲ್ಲ </blockquote><span class="attribution">-ಸುರೇಂದ್ರ ಸಿಂಗ್ ನಗರ್ ನೀರಜ್ ಶೇಖರ್ ಬಿಜೆಪಿ ಸದಸ್ಯರು ರಾಜ್ಯಸಭೆ</span></div>.<div><blockquote>ಸಭಾಪತಿ ಧನಕರ್ ಅವರು ಕೃಷಿಕನ ಮಗನಾದರೆ ಖರ್ಗೆ ಅವರು ಕೃಷಿ ಕೂಲಿ ಕಾರ್ಮಿಕನ ಮಗ ಮತ್ತು ದಲಿತ. ಅವರಿಗೆ ಇಲ್ಲಿ ಮಾತನಾಡಲು ಅವಕಾಶವನ್ನೇ ನೀಡುತ್ತಿಲ್ಲ </blockquote><span class="attribution">-ಪ್ರಮೋದ್ ತಿವಾರಿ ಕಾಂಗ್ರೆಸ್ ಸದಸ್ಯ ರಾಜ್ಯಸಭೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ರಾಜ್ಯಸಭೆಯ ಸಭಾಪತಿಯೂ ಆಗಿರುವ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ವಿರುದ್ಧ ಅವಿಶ್ವಾಸ ನಿಲುವಳಿಗೆ ಮಂಡಿಸಲು ವಿರೋಧಪಕ್ಷಗಳು ಸಲ್ಲಿಸಿರುವ ನೋಟಿಸ್ ಶುಕ್ರವಾರ ಸದನದಲ್ಲಿ ತೀವ್ರ ಕೋಲಾಹಲ, ವಾಕ್ಸಮರಕ್ಕೆ ಕಾರಣವಾಯಿತು.</p>.<p>ಧನಕರ್ ವಿರುದ್ಧದ ಅಸಮಾಧಾನ ಮತ್ತು ಅದಾನಿ ವಿವಾದದ ಪ್ರಸ್ತಾಪದಿಂದ ಈಗಾಗಲೇ ರಾಜ್ಯಸಭೆ ಕಲಾಪ ಹಳಿತಪ್ಪಿದೆ. ಗೊಂದಲದ ಸ್ಥಿತಿಯಿಂದಾಗಿ ಶುಕ್ರವಾರವು ಮೊದಲು ಒಂದು ಗಂಟೆಗೆ, ನಂತರ ಸೋಮವಾರದವರೆಗೂ ಕಲಾಪವನ್ನು ಮುಂದೂಡಲಾಯಿತು.</p>.<p>ಕೋಲಾಹಲದ ಸ್ಥಿತಿಯ ನಡುವೆಯೇ ಮಾತನಾಡಿದ ಧನಕರ್ ಅವರು, ‘ದಿನ ಬೆಳಗಾದರೆ ನನ್ನ ವಿರುದ್ಧ ಅಭಿಯಾನ ನಡೆಯುತ್ತಿದೆ. ಈ ಅಭಿಯಾನ ಕೇವಲ ನನ್ನ ವಿರುದ್ಧ ಅಲ್ಲ. ಇದು ನಾನು ಸೇರಿರುವ ಸಮುದಾಯದ ವಿರುದ್ಧವಾಗಿದೆ. ನಾನು ರೈತನ ಮಗ. ಈ ಬೆಳವಣಿಗೆಯಿಂದ ದುರ್ಬಲನಾಗುವುದಿಲ್ಲ’ ಎಂದು ಕಟುವಾಗಿ ಹೇಳಿದರು.</p>.<p>‘ಪ್ರಮುಖ ಪ್ರತಿಪಕ್ಷ ನನ್ನ ವಿರುದ್ಧ ನಿರಂತರ ಅಭಿಯಾನ ನಡೆಸುತ್ತಿರುವುದು ವ್ಯಕ್ತಿಗತವಾಗಿ ಬೇಸರ ಮೂಡಿಸಿದೆ. ನನ್ನ ವಿರುದ್ಧ ನಿಲುವಳಿ ತರಲು ಅವರಿಗೆ ಹಕ್ಕಿದೆ. ಅದು ಪ್ರತಿಪಕ್ಷಗಳ ಸಾಂವಿಧಾನಿಕ ಹಕ್ಕು. ಆದರೆ, ಅವರು ನಿಯಮಗಳನ್ನು ಮೀರುತ್ತಿದ್ದಾರೆ’ ಎಂದರು. </p>.<p>ಕಲಾಪವನ್ನು ಸೋಮವಾರಕ್ಕೆ ಮುಂದೂಡುವ ಮುನ್ನ ಸಭಾನಾಯಕ ಜೆ.ಪಿ.ನಡ್ಡಾ, ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ, ‘ಗೊಂದಲಕ್ಕೆ ಪರಿಹಾರ ಕಂಡುಕೊಳ್ಳಲು ಚರ್ಚೆ ಮಾಡೋಣ. ಕೊಠಡಿ ಬನ್ನಿ. ಖರ್ಗೆ ಸ್ಪಂದಿಸುತ್ತಾರೆ ಎಂದು ಭಾವಿಸುತ್ತೇನೆ’ ಎಂದರು. </p>.<p>ಕೋಪಗೊಂಡಂತಿದ್ದ ಖರ್ಗೆ ಅವರು ಈ ಮಾತಿಗೆ, ‘ನೀವು ನನಗೆ ಅವಮಾನಿಸಿದ್ದೀರಿ. ನಿಮ್ಮ ಮಾತಿಗೆ ಹೇಗೆ ಗೌರವಿಸಲಿ? ಎಂದು ಪ್ರತಿಕ್ರಿಯಿಸಿದರು. ಖರ್ಗೆ ಮಾತು ಮುಂದುವರಿಸಿದಂತೆ ಅತ್ತ ಸಭಾಧ್ಯಕ್ಷರು ಕಲಾಪವನ್ನು ಮುಂದೂಡಿದರು. </p>.<p>ಇದಕ್ಕೂ ಮುನ್ನ ಧನಕರ್ ವಿರುದ್ಧದ ಅವಿಶ್ವಾಸ ನಿಲುವಳಿಗೆ ನೋಟಿಸ್ಗೆ ಸಂಬಂಧಿಸಿದ ಚರ್ಚೆಗೆ ಕ್ರಿಯಾಲೋಪ ಎತ್ತಿದ್ದ ಬಿಜೆಪಿಯ ರಾಧಾಮೋಹನ ದಾಸ್ ಅಗರವಾಲ್ ಅವರು ಮಾತನಾಡುವಾಗ ಗೊಂದಲದ ಸ್ಥಿತಿಯು ಮುಂದುವರಿಯಿತು. </p>.<p>ದೀರ್ಘವಾಗಿ ಮಾತನಾಡಿದ ಅಗರವಾಲ್, ‘ಅವಿಶ್ವಾಸ ನಿಲುವಳಿ ನೋಟಿಸ್ ಉಪ ರಾಷ್ಟ್ರಪತಿಗಳ ಸ್ಥಾನ ಮತ್ತು ರೈತರಿಗೆ ಮಾಡುತ್ತಿರುವ ಅವಮಾನ. ನಿಯಮದ ಪ್ರಕಾರ, ನೋಟಿಸ್ ನೀಡಿದ 14 ದಿನ ಬಳಿಕ ಚರ್ಚೆಗೆ ಎತ್ತಿಕೊಳ್ಳಬಹುದು. ಆದರೆ, ಕಾಂಗ್ರೆಸ್ ನಾಯಕರು ಮಾಧ್ಯಮದ ಎದುರು ಆರೋಪ ಮಾಡುತ್ತಿದ್ದಾರೆ‘ ಎಂದರು.</p>.<p>ಪ್ರಥಮ ಪ್ರಧಾನಿ ನೆಹರೂ ಆಗಿನ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಅವರಿಗೆ ನಿರಂತರ ಅಪಮಾನ ಮಾಡುತ್ತಿದ್ದರು. ರಾಜಧಾನಿಯಲ್ಲಿ ಅವರ ಶವದ ಅಂತ್ಯಕ್ರಿಯೆಗೂ ಅವಕಾಶ ಸಿಗಲಿಲ್ಲ. ಕೊನೆಗಳಿಗೆಯಲ್ಲಿ ವೈದ್ಯಕೀಯ ಚಿಕಿತ್ಸೆ ನಿರಾಕರಿಸಲಾಗಿತ್ತು‘ ಎಂದು ಆರೋಪಿಸಿದರು.</p>.<p>ಪ್ರಸಾದ್ ಅವರ ಅಂತ್ಯಕ್ರಿಯೆ ವಿಧಿಯಲ್ಲಿ ಭಾಗವಹಿಸಬಾರದು ಎಂದು ನೆಹರೂ ಅವರು ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೆ ಕೋರಿದ್ದರು. ಆದರೆ, ರಾಧಾಕೃಷ್ಣನ್ ಅವರು ಈ ಮಾತಿಗೆ ಸ್ಪಂದಿಸಿರಲಿಲ್ಲ ಎಂದು ಅಗರವಾಲ್ ನಿಂದಿಸಿದರು.</p>.<p>ಅವಿಶ್ವಾಸ ನಿಲುವಳಿ ನೋಟಿಸ್ಗೆ ಸಹಿ ಹಾಕಿರುವ 60 ಸದಸ್ಯರ ವಿರುದ್ದ ತಾವು ಸಲ್ಲಿಸಿರುವ ಹಕ್ಕುಚ್ಯುತಿ ನೋಟಿಸ್ ಕುರಿತು ಮೊದಲು ಚರ್ಚೆಗೆ ತೆಗೆದುಕೊಳ್ಳಬೇಕು ಎಂದು ಕೋರಿದರು.</p>.<p>ಈ ಹಂತದಲ್ಲಿ ಸಭಾಪತಿ ಧನಕರ್ ಅವರು ಕಾಂಗ್ರೆಸ್ನ ಪ್ರಮೋದ್ ತಿವಾರಿ ಅವರಿಗೆ ಮಾತಿಗೆ ಅವಕಾಶ ಕಲ್ಪಿಸಿದರು. ತಿವಾರಿ ಅವರು ‘ಈ ಸರ್ಕಾರ ಕೋಟ್ಯಧಿಪತಿ ರಕ್ಷಣೆಗೆ ನಿಂತಿದೆ’ ಎನ್ನುತ್ತಿದ್ದಂತೆ ‘ಅವರ ಮಾತು ಕಡತಕ್ಕೆ ಹೋಗುವುದಿಲ್ಲ’ ಎಂದು ಸಭಾಪತಿ ಹೇಳಿದರು.</p>.<p>ಆಗ ಸಭಾಪತಿಯವರು, ವಿರೋಧಪಕ್ಷಗಳು ಸಲ್ಲಿಸಿರುವ ನೋಟಿಸ್ ಅನ್ನು ನಿಯಮಾನುಸಾರ 14 ದಿನದ ಬಳಿಕ ಚರ್ಚೆಗೆ ಎತ್ತಿಕೊಳ್ಳಲಾಗುವುದು ಎಂದರು. ಗೊಂದಲ ಮುಂದುವರಿದಾಗ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು.</p>.<p>ಇದಕ್ಕೂ ಮುನ್ನ, ‘ಕಲಾಪವನ್ನು ನಿಯಮಾನುಸಾರ ನಡೆಸಬೇಕು ಮತ್ತು ಸದಸ್ಯರು ಬಯಸಿರುವ ವಿಷಯಗಳ ಪ್ರಸ್ತಾಪಕ್ಕೆ ಅವಕಾಶ ಕಲ್ಪಿಸಬೇಕು’ ಎಂದು ಕೋರಿ ನಿಯಮ 267ರ ಅನ್ವಯ ನಾಲ್ಕು ನೋಟಿಸ್ಗಳು ಸಲ್ಲಿಕೆಯಾಗಿವೆ ಎಂದು ಸಭೆಗೆ ಮಾಹಿತಿ ನೀಡಿದರು.</p>.<div><blockquote>ಇನ್ನು ನಾನು ಸಹಿಸಿಕೊಳ್ಳುವುದಿಲ್ಲ. ನಾನು ರೈತನ ಮಗ ದುರ್ಬಲಗೊಳ್ಳುವುದಿಲ್ಲ. ಈ ಅಭಿಯಾನ ನನ್ನ ವಿರುದ್ಧವಲ್ಲ. ನಾನು ಪ್ರತಿನಿಧಿಸುವ ಜಾತಿಯ ವಿರುದ್ಧ </blockquote><span class="attribution">-ಜಗದೀಪ್ ಧನಕರ್, ಸಭಾಪತಿ ರಾಜ್ಯಸಭೆ</span></div>.<div><blockquote>ಕಾಂಗ್ರೆಸ್ ಪಕ್ಷವು ರೈತ ಮತ್ತು ಒಬಿಸಿ ವಿರೋಧಿ. ಆ ಪಕ್ಷಕ್ಕೆ ರೈತರು ದಲಿತರು ಮತ್ತು ಬಡವರು ಅಭಿವೃದ್ಧಿ ಹೊಂದುವುದು ಬೇಕಾಗಿಲ್ಲ </blockquote><span class="attribution">-ಸುರೇಂದ್ರ ಸಿಂಗ್ ನಗರ್ ನೀರಜ್ ಶೇಖರ್ ಬಿಜೆಪಿ ಸದಸ್ಯರು ರಾಜ್ಯಸಭೆ</span></div>.<div><blockquote>ಸಭಾಪತಿ ಧನಕರ್ ಅವರು ಕೃಷಿಕನ ಮಗನಾದರೆ ಖರ್ಗೆ ಅವರು ಕೃಷಿ ಕೂಲಿ ಕಾರ್ಮಿಕನ ಮಗ ಮತ್ತು ದಲಿತ. ಅವರಿಗೆ ಇಲ್ಲಿ ಮಾತನಾಡಲು ಅವಕಾಶವನ್ನೇ ನೀಡುತ್ತಿಲ್ಲ </blockquote><span class="attribution">-ಪ್ರಮೋದ್ ತಿವಾರಿ ಕಾಂಗ್ರೆಸ್ ಸದಸ್ಯ ರಾಜ್ಯಸಭೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>