ಜೂ.8ರ ವರೆಗೆ ಮಧ್ಯಂತರ ರಕ್ಷಣೆ ವಿಸ್ತರಣೆ
ಎನ್ಸಿಬಿ ಮುಂಬೈ ವಲಯ ಮಾಜಿ ಮುಖ್ಯಸ್ಥ ಸಮೀರ್ ವಾಂಖೆಡೆ ಅವರಿಗೆ ನೀಡಲಾಗಿದ್ದ ಮಧ್ಯಂತರ ರಕ್ಷಣೆಯನ್ನು ಜೂನ್ 8ರವರೆಗೆ ವಿಸ್ತರಿಸಿ ಬಾಂಬೆ ಹೈಕೋರ್ಟ್ ಸೋಮವಾರ ಆದೇಶ ನೀಡಿದೆ. ಆರ್ಯನ್ ಬಿಡುಗಡೆಗೊಳಿಸಲು ₹25 ಕೋಟಿ ಲಂಚ ನೀಡುವಂತೆ ಶಾರುಖ್ ಖಾನ್ ಎದುರು ಸಮೀರ್ ಬೇಡಿಕೆ ಇರಿಸಿದ್ದರು ಎಂದು ಆರೋಪಿಸಲಾಗಿರುವ ಪ್ರರಕಣದ ವಿಚಾರಣೆಯು ಕೋರ್ಟ್ನಲ್ಲಿ ನಡೆಯುವ ವೇಳೆ ಸಮೀರ್ ವಿರುದ್ಧ ಬಂಧನದಂಥ ಒತ್ತಾಯದ ಕ್ರಮಗಳನ್ನು ತೆಗೆದುಕೊಳ್ಳುವಂತಿಲ್ಲ ಎಂದು ಹೈಕೋರ್ಟ್ ಸಿಬಿಐಗೆ ಆದೇಶಿಸಿದೆ. ಜೊತೆಗೆ ಪ್ರಕರಣದ ಕುರಿತು ಮಾಧ್ಯಮಗಳ ಎದುರು ಮಾತನಾಡುವುದಿಲ್ಲ ಸಾಕ್ಷ್ಯಗಳನ್ನು ತಿರುಚುವುದಿಲ್ಲ ಮತ್ತು ಸಿಬಿಐ ಕರೆದಾಗ ವಿಚಾರಣೆಗೆ ಹಾಜರಾಗುವುದಾಗಿ ಮುಚ್ಚಳಿಕೆ ಬರೆದುಕೊಡುವಂತೆ ಅವರಿಗೆ ಕೋರ್ಟ್ ಸೂಚಿಸಿದೆ.